ಆ್ಯಪ್ನಗರ

28, 29ರಂದು ಬ್ರಾಹ್ಮಣ ಮಹಾಸಭೆಯ ಸಮ್ಮೇಳನ

ಕುಂದಾಪುರ ತಾಲೂಕಿನ ಕೊಟೇಶ್ವರದ ಕಾಳಾವರ ವರದರಾಜ ಎಂ.ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿಡಿ.28 ಮತ್ತು 29ರಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ 10ನೇ ರಾಜ್ಯಮಟ್ಟದ ಸಮ್ಮೇಳನ ನಡೆಯಲಿದೆ.

Vijaya Karnataka 7 Dec 2019, 5:00 am
ಶಿವಮೊಗ್ಗ: ಕುಂದಾಪುರ ತಾಲೂಕಿನ ಕೊಟೇಶ್ವರದ ಕಾಳಾವರ ವರದರಾಜ ಎಂ.ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿಡಿ.28 ಮತ್ತು 29ರಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ 10ನೇ ರಾಜ್ಯಮಟ್ಟದ ಸಮ್ಮೇಳನ ನಡೆಯಲಿದೆ.
Vijaya Karnataka Web brahmanna maha sabha conference on 28 29th
28, 29ರಂದು ಬ್ರಾಹ್ಮಣ ಮಹಾಸಭೆಯ ಸಮ್ಮೇಳನ


ಉಡುಪಿ ಜಿಲ್ಲಾಬ್ರಾಹ್ಮಣ ಮಹಾಸಭಾದ ಸಹಯೋಗದಲ್ಲಿಎರಡು ದಿನ ಕಾಲ ನಡೆಯಲಿರುವ ಈ ಸಮ್ಮೇಳನದಲ್ಲಿವಿವಿಧ ವಿಚಾರ ಕುರಿತು ಗೋಷ್ಠಿಗಳು, ಸಾಧಕರಿಗೆ ಸನ್ಮಾನ, ವಿಪ್ರಶ್ರೀ ಪ್ರಶಸ್ತಿ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ರಾಜ್ಯದ ವಿವಿಧ ಭಾಗಗಳಿಂದ ಸುಮಾರು 1.5 ಲಕ್ಷ ಬ್ರಾಹ್ಮಣರು ಸೇರುವ ನಿರೀಕ್ಷೆ ಇದೆ ಎಂದು ಮಹಾಸಭಾದ ರಾಜ್ಯ ಉಪಾಧ್ಯಕ್ಷ ದಿನೇಶ್‌ಕುಮಾರ್‌ ಎನ್‌.ಜೋಶಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿತಿಳಿಸಿದರು.

ಡಿ.28ರಂದು ಬೆಳಗ್ಗೆ 6ಕ್ಕೆ ವರೇಣ್ಯ ಗಾಯತ್ರಿ ಯಾಗ ಶಾಲೆಯಲ್ಲಿಶ್ರೀ ಗಾಯತ್ರಿ ಮಾತೆಯ ಮಹಾಯಜ್ಞ ಆರಂಭವಾಗಿ 9ಕ್ಕೆ ಪೂರ್ಣಾಹುತಿಗೊಳ್ಳಲಿದೆ. 9.30ಕ್ಕೆ ಸಿಎಂ ಬಿ.ಎಸ್‌.ಯಡಿಯೂರಪ್ಪ ಸಮ್ಮೇಳನ ಉದ್ಘಾಟಿಸುವರು. ಸಮ್ಮೇಳನಾಧ್ಯಕ್ಷ ರಾಘವೇಂದ್ರರಾವ್‌ ನೆರಂಬಳ್ಳೆ ಅಧ್ಯಕ್ಷತೆ ವಹಿಸುವರು. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಎಸ್‌.ಸುರೇಶ್‌ಕುಮಾರ್‌, ಮಾಜಿ ಸಚಿವ ಆರ್‌.ವಿ.ದೇಶಪಾಂಡೆ, ಶಾಸಕರಾದ ದಿನೇಶ್‌ ಗುಂಡೂರಾವ್‌, ಎ.ಎಸ್‌.ರಾಮ್‌ದಾಸ್‌, ಎಲ್‌.ಎ.ರವಿ ಸುಬ್ರಹ್ಮಣ್ಯಂ, ಬಿ.ಸಿ.ನಾಗೇಶ್‌, ಉದಯ ಗರುಡಾಚಾರ್‌, ಯು.ಬಿ.ವೆಂಕಟೇಶ್‌, ಶಿವರಾಂ ಹೆಬ್ಬಾರ್‌, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಸಂಸದ ಅನಂತ್‌ಕುಮಾರ್‌ ಹೆಗಡೆ ಹಾಗೂ ಉಡುಪಿ, ಮಂಗಳೂರು, ಕರಾವಳಿ ಭಾಗದ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಎನ್‌.ವೆಂಕಟನಾರಾಯಣ್‌, ಪ್ರಧಾನ ಕಾರ್ಯದರ್ಶಿ ಕೆ.ರಾಮಪ್ರಸಾದ್‌, ಹಿರಿಯ ಉಪಾಧ್ಯಕ್ಷ ಆರ್‌.ಲಕ್ಷಿತ್ರ್ಮೕಕಾಂತ್‌, ಪ್ರಧಾನ ವಕ್ತಾರ ಮ.ಸ. ನಂಜುಂಡಸ್ವಾಮಿ ಹಾಗೂ ಇತರರ ಮುಂದಾಳತ್ವದಲ್ಲಿವಿವಿಧ ಸಮಿತಿಗಳು ಸಮ್ಮೇಳನ ಯಶಸ್ವಿಗೆ ಕಾರ್ಯ ನಿರ್ವಹಿಸುತ್ತಿವೆ ಎಂದರು.

ಗೋಷ್ಠಿಯಲ್ಲಿಎಚ್‌.ಎನ್‌.ಛಾಯಾಪತಿ, ಎಂ.ಜಿ.ಪ್ರಕಾಶ್‌, ಎಸ್‌.ದತ್ತಾತ್ರಿ, ಸುಮಿತ್ರಮ್ಮ, ಆರ್‌.ಅಚ್ಚುತರಾವ್‌, ಎಚ್‌.ಕೆ.ಕೇಶವಮೂರ್ತಿ, ಎಚ್‌.ಶೇಷಪ್ಪ ಇತರರು ಇದ್ದರು.

----------

ಕರಾವಳಿ ಭಾಗದಲ್ಲಿಬಿಡಿ ಬಿಡಿಯಾಗಿರುವ ಬ್ರಾಹ್ಮಣ ಸಮುದಾಯ ಸಂಘಟನೆಗಳನ್ನು ಬಲಪಡಿಸುವುದು. ಕೇಂದ್ರ ಸಂಘದ ಜತೆಗೆ ನಿಕಟ ಸಂಪರ್ಕ ಮತ್ತು ಅಸ್ತಿತ್ವವನ್ನು ಗಟ್ಟಿಗೊಳಿಸುವುದು. ಯುವಜನಾಂಗವು ಸಮಾಜದ ಚಟುವಟಿಕೆಗಳಲ್ಲಿಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವುದು. ಈ ಸಮ್ಮೇಳನದ ಉದ್ದೇಶ.

- ದಿನೇಶ್‌ಕುಮಾರ್‌ ಎನ್‌.ಜೋಶಿ, ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ