ಆ್ಯಪ್ನಗರ

ಸಂವಹನ ಕೊರತೆಯಿಂದ ಶಸ್ತ್ರಚಿಕಿತ್ಸೆಗೆ ತಡ

ಸಂತಾನ ಶಸ್ತ್ರ ಚಿಕಿತ್ಸೆಗೆ ಹಾಜರಾಗಿದ್ದ ಬಾಣಂತಿಯರಿಗೆ ಉದ್ದೇಶಪೂರ್ವಕವಾಗಿ ಕಾಯಿಸಿಲ್ಲ. ಆದರೆ ಸ್ಥಳೀಯ ವೈದ್ಯರು ಹಾಗೂ ತಜ್ಞರ ಮಧ್ಯೆ ಸಂವಹನ ಕೊರತೆಯಿಂದಾಗಿ ಚಿಕಿತ್ಸೆ ನೀಡುವುದು ತಡವಾಗಿದೆ ಎಂದು ಜಿಲ್ಲಾಆರೋಗ್ಯ ವೈದ್ಯಾಧಿಕಾರಿ ಡಾ.ರಾಜೇಶ್‌ ಸುರುಗಿಹಳ್ಳಿ ಸ್ಪಷ್ಟಪಡಿಸಿದರು.

Vijaya Karnataka 17 Oct 2019, 5:00 am
ಸೊರಬ: ಸಂತಾನ ಶಸ್ತ್ರ ಚಿಕಿತ್ಸೆಗೆ ಹಾಜರಾಗಿದ್ದ ಬಾಣಂತಿಯರಿಗೆ ಉದ್ದೇಶಪೂರ್ವಕವಾಗಿ ಕಾಯಿಸಿಲ್ಲ. ಆದರೆ ಸ್ಥಳೀಯ ವೈದ್ಯರು ಹಾಗೂ ತಜ್ಞರ ಮಧ್ಯೆ ಸಂವಹನ ಕೊರತೆಯಿಂದಾಗಿ ಚಿಕಿತ್ಸೆ ನೀಡುವುದು ತಡವಾಗಿದೆ ಎಂದು ಜಿಲ್ಲಾಆರೋಗ್ಯ ವೈದ್ಯಾಧಿಕಾರಿ ಡಾ.ರಾಜೇಶ್‌ ಸುರುಗಿಹಳ್ಳಿ ಸ್ಪಷ್ಟಪಡಿಸಿದರು.
Vijaya Karnataka Web breast control surgery for lack of communication
ಸಂವಹನ ಕೊರತೆಯಿಂದ ಶಸ್ತ್ರಚಿಕಿತ್ಸೆಗೆ ತಡ

ಮಂಗಳವಾರ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿಸಂತಾನ ಶಸ್ತ್ರ ಚಿಕಿತ್ಸೆಗೆ ಹಾಜರಾಗಿದ್ದ ಬಾಣಂತಿಯರಿಗೆ ಮಧ್ಯಾಹ್ನವಾದರೂ ಚಿಕಿತ್ಸೆ ನೀಡಿರಲಿಲ್ಲ. ವೈದ್ಯರ ನಿರ್ಲಕ್ಷತ್ರ್ಯ ಖಂಡಿಸಿ ಬಾಣಂತಿಯರ ಸಂಬಂಧಿಕರು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿಬುಧವಾರ ಆಸ್ಪತ್ರಗೆ ಭೇಟಿ ನೀಡಿದ ಜಿಲ್ಲಾಆರೋಗ್ಯಾಧಿಕಾರಿಗಳು, ವೈದ್ಯರು ಹಾಗೂ ಸಿಬ್ಬಂದಿ ಜತೆ ಘಟನೆ ಬಗ್ಗೆ ವಿವರಣೆ ಪಡೆದ ನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು. ಜಿಲ್ಲಾಆಸ್ಪತ್ರೆ ವತಿಯಿಂದ ಸಂತಾನ ಚಿಕಿತ್ಸೆಗೆ ಸಹಾಯಕ ಸಿಬ್ಬಂದಿ ತಂಡ ಕಳುಹಿಸಿಕೊಡಲಾಗಿತ್ತು.
ಸ್ಥಳೀಯ ವೈದ್ಯರ ನೆರವಿನೊಂದಿಗೆ ಚಿಕಿತ್ಸೆ ನೀಡಬೇಕಿದ್ದರಿಂದ ಚಂದ್ರಗುತ್ತಿ ಆಸ್ಪತ್ರೆ ವೈದ್ಯರನ್ನು ನೇಮಿಸಲಾಗಿತ್ತು. ನೇಮಿಸಿದ ವೈದ್ಯರು ಹಾಗೂ ತಜ್ಞ ವೈದ್ಯರ ಮಧ್ಯೆ ಸಂವಹನದ ಕೊರತೆಯಿಂದ ಚಿಕಿತ್ಸೆ ನೀಡುವುದು ತಡವಾಗಿದೆ. ತಜ್ಞ ವೈದ್ಯರು ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡದೆ ಇರುವುದರಿಂದ ಬೇಸರ ಮಾಡಿಕೊಂಡು ವಾಪಸ್‌ ಹೋಗಿದ್ದಾರೆ. ಮಧ್ಯಾಹ್ನ ನಂತರ ಇಬ್ಬರು ಬಾಣಂತಿಯರಿಗೆ ಸಂತಾನ ಚಿಕಿತ್ಸೆ ನೀಡಲಾಗಿದೆ. ಘಟನೆ ಬಗ್ಗೆ ಬಾಣಂತಿಯರಿಗೆ ಕ್ಷಮೆ ಕೇಳುತ್ತೇನೆ. ಸದ್ಯದಲ್ಲಿಮತ್ತೊಮ್ಮೆ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗುವುದು ಎಂದರು. ಡಾ.ಅಕ್ಷತಾ, ಡಾ.ರಾಘವೇಂದ್ರ, ಹಿರಿಯ ಆರೋಗ್ಯ ಸಹಾಯಕ ಅಧಿಕಾರಿ ಪಾಟೀಲ್‌, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅರುಂಧುತಿ ಕಾಳೆ, ಸಿ.ನಾಗರಾಜ್‌ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ