ಭದ್ರಾವತಿ: ವಿಐಎಸ್ಎಲ್ ಕಾರ್ಖಾನೆ ಪುನಶ್ಚೇತನ, ಖಾಸಗೀಕರಣ ಕೈಬಿಡುವುದು ಹಾಗೂ ಬಂಡವಾಳ ಹೂಡಿಕೆಗೆ ಮುಂದಾಗುವಂತೆ ಆಗ್ರಹಿಸಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರು ಪ್ರಧಾನಿ ನರೇಂದ್ರಮೋದಿ ಹಾಗೂ ಸಂಬಂಧಿತ ಸಚಿವರಿಗೆ ಪತ್ರ ಬರೆದಿದ್ದಾರೆ.
2015ರಲ್ಲಿಕೇಂದ್ರ ಉಕ್ಕು ಸಚಿವರು ಭೇಟಿ ನೀಡಿದ್ದ ವೇಳೆ ರಾಜ್ಯಸರಕಾರ ಗಣಿ ಮಂಜೂರು ಮಾಡಿದಲ್ಲಿಬಂಡವಾಳ ಹೂಡುವ ಭರವಸೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ರಾಜ್ಯ ಸರಕಾರ 497 ಎಕರೆ ಕಬ್ಬಿಣದ ಗಣಿ ಮಂಜೂರು ಮಾಡಿದ್ದು ಇದರಲ್ಲಿಮುಂದಿನ 50 ರಿಂದ 75 ವರ್ಷದವರೆಗೆ ಅದಿರು ತೆಗೆಯಲು ಸಾಧ್ಯವಿದೆ ಎಂದು ಪತ್ರದಲ್ಲಿಹೇಳಿದ್ದಾರೆ.
ಕೇಂದ್ರ ನೀತಿ ಆಯೋಗದ ಶಿಫಾರಸ್ಸಿನಂತೆ ಉಕ್ಕು ಪ್ರಾಧಿಕಾರ ವಿಐಎಸ್ಎಲ್ ಕಾರ್ಖಾನೆಯನ್ನು ಬಂಡವಾಳ ಹಿಂತೆಗೆತ ಪ್ರಕ್ರಿಯೆಗೆ ಸೇರ್ಪಡೆ ಮಾಡಿದ್ದರಿಂದ ಖಾಸಗೀಕರಣ ಪ್ರಸ್ತಾವಕ್ಕೆ ಇಲ್ಲಿತನಕ ಯಾವುದೇ ಪಾಲುದಾರರು ಆಗಮಿಸಿಲ್ಲ. ಇದು ಕಾರ್ಖಾನೆ ಪುನಶ್ಚೇತನದ ಅಗತ್ಯತೆ ಹೆಚ್ಚಿಸಿದೆ. ಹೀಗಾಗಿ, 2017ರ ರಾಷ್ಟ್ರೀಯ ಉಕ್ಕು ಯೋಜನೆಗೆ ಪೂರಕ ವಾತಾವರಣ ಕಾರ್ಖಾನೆ ವ್ಯಾಪ್ತಿಯಲ್ಲಿದ್ದು, ಅದನ್ನು ಸದುಪಯೋಗ ಮಾಡಿಕೊಳ್ಳುವ ನಿಟ್ಟಿನಲ್ಲಿಕೇಂದ್ರವು ಕೂಡಲೇ ಬಂಡವಾಳ ಹಿಂತೆಗೆತ ಪ್ರಸ್ತಾವವನ್ನು ಹಿಂಪಡೆದು ಸೂಕ್ತ ಬಂಡವಾಳ ಹಾಕಿ ಕಾರ್ಖಾನೆ ಬೆಳವಣಿಗೆಗೆ ಸಹಕರಿಸಿ ಎಂದು ಪತ್ರದಲ್ಲಿಮನವಿ ಮಾಡಿದ್ದಾರೆ.
ಈ ಪತ್ರವನ್ನು ಪ್ರಧಾನಿ ಸೇರಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಷಾ, ಉಕ್ಕು ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೂ ಸಲ್ಲಿಸಲಾಗಿದೆ ಎಂದು ವಿಐಎಸ್ಎಲ್ ಕಾರ್ಮಿಕ ಸಂಘದ ಅಧ್ಯಕ್ಷ ಜೆ.ಜಗದೀಶ್ ತಿಳಿಸಿದ್ದಾರೆ.
2015ರಲ್ಲಿಕೇಂದ್ರ ಉಕ್ಕು ಸಚಿವರು ಭೇಟಿ ನೀಡಿದ್ದ ವೇಳೆ ರಾಜ್ಯಸರಕಾರ ಗಣಿ ಮಂಜೂರು ಮಾಡಿದಲ್ಲಿಬಂಡವಾಳ ಹೂಡುವ ಭರವಸೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ರಾಜ್ಯ ಸರಕಾರ 497 ಎಕರೆ ಕಬ್ಬಿಣದ ಗಣಿ ಮಂಜೂರು ಮಾಡಿದ್ದು ಇದರಲ್ಲಿಮುಂದಿನ 50 ರಿಂದ 75 ವರ್ಷದವರೆಗೆ ಅದಿರು ತೆಗೆಯಲು ಸಾಧ್ಯವಿದೆ ಎಂದು ಪತ್ರದಲ್ಲಿಹೇಳಿದ್ದಾರೆ.
ಕೇಂದ್ರ ನೀತಿ ಆಯೋಗದ ಶಿಫಾರಸ್ಸಿನಂತೆ ಉಕ್ಕು ಪ್ರಾಧಿಕಾರ ವಿಐಎಸ್ಎಲ್ ಕಾರ್ಖಾನೆಯನ್ನು ಬಂಡವಾಳ ಹಿಂತೆಗೆತ ಪ್ರಕ್ರಿಯೆಗೆ ಸೇರ್ಪಡೆ ಮಾಡಿದ್ದರಿಂದ ಖಾಸಗೀಕರಣ ಪ್ರಸ್ತಾವಕ್ಕೆ ಇಲ್ಲಿತನಕ ಯಾವುದೇ ಪಾಲುದಾರರು ಆಗಮಿಸಿಲ್ಲ. ಇದು ಕಾರ್ಖಾನೆ ಪುನಶ್ಚೇತನದ ಅಗತ್ಯತೆ ಹೆಚ್ಚಿಸಿದೆ. ಹೀಗಾಗಿ, 2017ರ ರಾಷ್ಟ್ರೀಯ ಉಕ್ಕು ಯೋಜನೆಗೆ ಪೂರಕ ವಾತಾವರಣ ಕಾರ್ಖಾನೆ ವ್ಯಾಪ್ತಿಯಲ್ಲಿದ್ದು, ಅದನ್ನು ಸದುಪಯೋಗ ಮಾಡಿಕೊಳ್ಳುವ ನಿಟ್ಟಿನಲ್ಲಿಕೇಂದ್ರವು ಕೂಡಲೇ ಬಂಡವಾಳ ಹಿಂತೆಗೆತ ಪ್ರಸ್ತಾವವನ್ನು ಹಿಂಪಡೆದು ಸೂಕ್ತ ಬಂಡವಾಳ ಹಾಕಿ ಕಾರ್ಖಾನೆ ಬೆಳವಣಿಗೆಗೆ ಸಹಕರಿಸಿ ಎಂದು ಪತ್ರದಲ್ಲಿಮನವಿ ಮಾಡಿದ್ದಾರೆ.
ಈ ಪತ್ರವನ್ನು ಪ್ರಧಾನಿ ಸೇರಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಷಾ, ಉಕ್ಕು ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೂ ಸಲ್ಲಿಸಲಾಗಿದೆ ಎಂದು ವಿಐಎಸ್ಎಲ್ ಕಾರ್ಮಿಕ ಸಂಘದ ಅಧ್ಯಕ್ಷ ಜೆ.ಜಗದೀಶ್ ತಿಳಿಸಿದ್ದಾರೆ.