ಆ್ಯಪ್ನಗರ

ಸದೃಢ ಭಾರತ ನಿರ್ಮಾಣಕ್ಕೆ ಪಣ ತೊಡಿ

ಸದೃಢ ಭಾರತ ನಿರ್ಮಾಣಕ್ಕೆ ಪಣ ತೊಡಿ

Vijaya Karnataka 25 Mar 2019, 5:00 am
ಸಾಗರ : ಜಗತ್ತನ್ನು ಪ್ರೀತಿಸಿದ, ಎಲ್ಲ ಧರ್ಮಗಳ ಬಗ್ಗೆ ಗೌರವ ಭಾವನೆ ಇರುವ ಹಿಂದೂ ಧರ್ಮವನ್ನು ಛಿದ್ರಗೊಳಿಸುವ ಯತ್ನ ನಡೆಯುತ್ತಿದ್ದು, ಸದೃಢ ಭಾರತದ ನಿರ್ಮಾಣಕ್ಕೆ ಯುವ ಸಮೂಹ ಪಣ ತೋಡಬೇಕೆಂದು ಶಬರಿಮಲೆ ಸಂರಕ್ಷ ಣಾ ಸಮಿತಿ ರಾಜ್ಯ ಕಾರ್ಯದರ್ಶಿ ವಿನಯ್‌ ಬಿದ್ರೆ ಹೇಳಿದರು.
Vijaya Karnataka Web SMR-24sgr4


ಇಲ್ಲಿನ ನಗರಸಭೆ ಆವರಣದ ಗಾಂಧಿ ಮೈದಾನದಲ್ಲಿ ವಿಶ್ವಹಿಂದೂ ಪರಿಷತ್‌, ಭಜರಂಗ ದಳ ಮತ್ತು ಹಿಂದೂಪರ ಸಂಘಟನೆಗಳು ಜಂಟಿಯಾಗಿ ತ್ರಿವಿಧ ದಾಸೋಹಿ ಶ್ರೀಶಿವಕುಮಾರ ಮಹಾಸ್ವಾಮಿಗಳ ವೇದಿಕೆಯಲ್ಲಿ ಆಯೋಜಿಸಿದ್ದ 389ನೇ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

ಇಂದು ಗೋವಿನ ಮೇಲೆ ಅವ್ಯಾಹತವಾಗಿ ದಾಳಿಯಾಗುತ್ತಿದ್ದು, ಗೋ ಸಂರಕ್ಷ ಣೆ ಅಗತ್ಯವಿದೆ. ಸುತ್ತಲಿನ 7ದೇಶಗಳೂ ನಮ್ಮ ದೇಶವನ್ನು ಮುಕ್ಕಿ ತಿನ್ನಲು ಯತ್ನಿಸುತ್ತಿವೆ. ಇಂಥ ಸಂಕ್ರಮಣದ ಕಾಲಘಟ್ಟದಲ್ಲಿ ಶಿವಾಜಿಯಂಥ ಸಮರ್ಥ ನಾಯಕನ ಆಯ್ಕೆ ಅನಿವಾರ‍್ಯ ಎಂದರು.

ಸಾನ್ನಿಧ್ಯ ವಹಿಸಿದ್ದ ಕಲಬುರ್ಗಿ ಆಂದೋಲ ಶ್ರೀಕರುಣೇಶ್ವರ ಮಠದ ಶ್ರೀಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಶಿವಾಜಿ ಮಹಾರಾಜರ ಜನ್ಮದಿಂದ ಹಿಂದೂ ಸಾಮ್ರಾಜ್ಯ ಹೊಸ ಶಕ್ತಿ ಪಡೆದುಕೊಂಡಿತು. ಅಂಥ ಸಮರ್ಥ ನಾಯಕರೊಬ್ಬರ ಜನ್ಮ ಆಗದಿದ್ದರೆ ಭಾರತೀಯರ ದುಸ್ಥಿತಿ ಏನಾಗುತ್ತಿತ್ತು ಎಂಬುದು ಅತ್ಯಂತ ಆತಂಕಕಾರಿ ಸಂಗತಿ. ವರ್ತಮಾನದಲ್ಲೂ ಅಂಥದ್ದೇ ಆತಂಕಕಾರಿ ವಾತಾವರಣ ನಿರ್ಮಾಣವಾಗುತ್ತಿದ್ದು, ಸಮರ್ಥ ನಾಯಕತ್ವದ ಅಗತ್ಯ ಹಿಂದೂ ಸಾಮ್ರಾಜ್ಯಕ್ಕಿದೆ ಎಂದರು.

ಶೋಭಾಯಾತ್ರೆಯಲ್ಲಿ ಸಹಸ್ರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಶಾಸಕ ಎಚ್‌.ಹಾಲಪ್ಪ ಶಿವಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಮೆರವಣಿಗೆಯಲ್ಲಿ ಸಂಘ ಪರಿವಾರದ ಪ್ರಮುಖರು, ವಿಶ್ವಹಿಂದೂ ಪರಿಷತ್‌, ಭಜರಂಗ ದಳದ ಪ್ರಮುಖರು ಪಾಲ್ಗೊಂಡಿದ್ದರು.

ಸಂಘ ಪರಿವಾರದ ಪ್ರಮುಖರಾದ ಅರಗ ಚಂದ್ರಶೇಖರ್‌, ವಿಶ್ವಹಿಂದೂ ಪರಿಷತ್‌ ಜಿಲ್ಲಾಧ್ಯಕ್ಷ ರಮೇಶ್‌ಬಾಬು, ಜಿಲ್ಲಾ ಗೋರಕ್ಷಾ ಸಮಿತಿಯ ಜಗನ್ನಾಥ್‌, ರವಿ ಗುಡಿಗಾರ್‌, ಸಂತೋಷ್‌ ಶಿವಾಜಿ ಇದ್ದರು. ವಿಹಿಂಪ ತಾಲೂಕು ಅಧ್ಯಕ್ಷ ಐ.ವಿ.ಹೆಗಡೆ ಅಧ್ಯಕ್ಷ ತೆ ವಹಿಸಿದ್ದರು. ಶ್ರೀರಂಜಿನಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಮುರಳಿ ಮಂಚಾಲೆ ಸ್ವಾಗತಿಸಿ, ರಾಘವೇಂದ್ರಭಟ್‌ ಪ್ರಾಸ್ತಾವಿಕ ಮಾತನಾಡಿದರು. ಮಹೇಶ್‌ ನಿರೂಪಿಸಿದರು.


ಗೋ ಸಂರಕ್ಷ ಣೆ ಮಾಡುವ ಮೂಲಕ ಹಿಂದೂ ಸಂಘಟನೆ ಬಲಗೊಳಿಸಿದ ಶಿವಾಜಿ ಮಹಾರಾಜರ ಕನಸು ನನಸು ಮಾಡಬೇಕಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ, ಕಾಶಿಯಲ್ಲಿ ವಿಶ್ವನಾಥ ದೇವಸ್ಥಾನ ನಿರ್ಮಾಣವಾಗಬೇಕು. ವಿದೇಶಿ ಆಕ್ರಮಣಕ್ಕೆ ಒಳಗಾದ ಹಿಂದೂ ದೇವಾಲಯಗಳಲ್ಲಿ ಮತ್ತೆ ಶಂಖನಾದ ಮೊಳಗಬೇಕು. ಸಾಗರ ಮತ್ತು ಶಿವಾಜಿ ನಡುವೆ ವಿಶೇಷ ಸಂಬಂಧವಿದೆ. ಶಿವಾಜಿಯ ಮಗ ರಾಜಾರಾಮನಿಗೆ ಇಲ್ಲಿಯ ಕೆಳದಿ ಚೆನ್ನಮ್ಮ ಆಶ್ರಯ ನೀಡಿ ಜೀವ ರಕ್ಷ ಣೆ ನೀಡಿರುವುದು ಹೆಮ್ಮೆಯ ಸಂಗತಿ.

- ವಿನಯ್‌ ಬಿದ್ರೆ, ಶಬರಿಮಲೆ ಸಂರಕ್ಷ ಣಾ ಸಮಿತಿ ರಾಜ್ಯ ಕಾರ್ಯದರ್ಶಿ.




ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ