ಆ್ಯಪ್ನಗರ

ಬಿಲ್ಲವ ಸಮುದಾಯ ಭವನಕ್ಕೆ ಶಿಲಾನ್ಯಾಸ

ಸಾಗರ ರಸ್ತೆಯ ಆಲ್ಕೊಳದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನಕ್ಕೆ ಇತ್ತೀಚೆಗೆ ಶಿಲಾನ್ಯಾಸ ನಡೆಯಿತು.

Vijaya Karnataka 14 Jun 2019, 5:00 am
ಶಿವಮೊಗ್ಗ: ಸಾಗರ ರಸ್ತೆಯ ಆಲ್ಕೊಳದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನಕ್ಕೆ ಇತ್ತೀಚೆಗೆ ಶಿಲಾನ್ಯಾಸ ನಡೆಯಿತು.
Vijaya Karnataka Web SMG-1306-2-15-13 SMG BILLAVA SAMAJA


ಬಿಲ್ಲವ ಸಂಘದ ಅಧ್ಯಕ್ಷ, ಉದ್ಯಮಿ ಕೆ. ಭುಜಂಗ ಅವರು ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಸುಮಾರು 1.6 ಕೋಟಿ ರೂ. ವೆಚ್ಚದಲ್ಲಿ ಮೂರು ಮಹಡಿಯ ಸಮುದಾಯ ಭವನ ನಿರ್ಮಾಣವಾಗುತ್ತಿದ್ದು, ಇದು ಸುಮಾರು 6,300 ಚದರ ಅಡಿ ವ್ಯಾಪ್ತಿಯನ್ನು ಒಳಗೊಂಡಿರುತ್ತದೆ. ತಳ ಅಂತಸ್ತಿನಲ್ಲಿ ಗುರುಗಳ ಪ್ರಾರ್ಥನಾ ಮಂದಿರ, ಒಂದನೇ ಮತ್ತು ಎರಡನೇ ಮಹಡಿಯಲ್ಲಿ ಸುಸಜ್ಜಿತ ಸಭಾಭವನ ನಿರ್ಮಾಣವಾಗಲಿದೆ. ಸುಮಾರು 12 ಸೆಂಟ್ಸ್‌ ಜಾಗದಲ್ಲಿ ನಿರ್ಮಾಣವಾಗುತ್ತಿರುವ ಈ ಸಮುದಾಯ ಭವನ ಅತ್ಯಾಕರ್ಷಕವಾಗಿ ರೂಪುಗೊಳ್ಳಲಿದ್ದು, ಶೀಘ್ರವಾಗಿ ಪೂರ್ಣಗೊಳಿಸಬೇಕೆಂಬ ಇಚ್ಛೆಯಿದೆ. ಈ ಸಮುದಾಯ ಆದಷ್ಟು ಬೇಗ ನಿರ್ಮಾಣಗೊಂಡಲ್ಲಿ ಎಲ್ಲರಿಗೂ ಅನುಕೂಲವಾಗಲಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದರು.

ಕಾರ್ಯಕ್ರಮದಲ್ಲಿ ಸುನೀತಾ ಭುಜಂಗ, ಗೌರವಾಧ್ಯಕ್ಷರಾದ ಯು.ಜೆ. ಮಹಾಬಲ, ಉಪಾಧ್ಯಕ್ಷ ಡಿ. ಅಶೋಕ್‌ ಕುಮಾರ್‌, ಕಾರ್ಯದರ್ಶಿ ಎಸ್‌.ಎಂ. ಹರೀಶ್‌, ಖಜಾಂಚಿ ಎನ್‌. ಪ್ರಕಾಶ್‌ಚಂದ್ರ ಸುವರ್ಣ, ಮುಖ್ಯ ಸಲಹೆಗಾರ ಉತ್ತನಪಾದ ಎಂ., ನಿರ್ದೇಶಕರಾದ ಡಿ. ಅಮೃತ್‌ರಾಜ್‌, ಶಂಕರ್‌ ಸುವರ್ಣ, ಗಣಪತಿ, ಎಸ್‌. ಭೋಜರಾಜ, ನಾಗರಾಜ ಯು. ಪೂಜಾರಿ, ಹೆಚ್‌. ಕೃಷ್ಣ ಪೂಜಾರಿ, ಕೆ.ಹೆಚ್‌. ಈಶ್ವರಪ್ಪ, ಸುರೇಂದ್ರ ಕೋಟ್ಯಾನ್‌, ಹೆಚ್‌.ಎಸ್‌. ಸುಧಾಕರ ಕೋಟ್ಯಾನ್‌, ಮಂಜುನಾಥ ಬಿ.ಜಿ. ಸಂಜೀವ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ