ಆ್ಯಪ್ನಗರ

ಶಿರಾಳಕೊಪ್ಪದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ

ಮೈತ್ರಿ ಸರಕಾರ ಬಹುಮತ ಸಾಬೀತು ಪಡಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಾಚರಿಸಿ, ಸಿಹಿ ಹಂಚಿದರು.

Vijaya Karnataka 25 Jul 2019, 5:00 am
ಶಿರಾಳಕೊಪ್ಪ: ಮೈತ್ರಿ ಸರಕಾರ ಬಹುಮತ ಸಾಬೀತು ಪಡಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಾಚರಿಸಿ, ಸಿಹಿ ಹಂಚಿದರು.
Vijaya Karnataka Web SMR-24SLKP01 photo 01


ಬುಧವಾರ ಬಿಜೆಪಿ ಮಹಿಳಾ ಮೋರ್ಚಾ ಸದಸ್ಯರು ಕಾಳಿಕಾಂಬ ದೇವಸ್ಥಾನದಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭ ಜಿಲ್ಲಾ ಮಹಿಳಾ ಮೋರ್ಚಾ ಕಾರ್ಯದರ್ಶಿ ನಿವೇದಿತಾರಾಜು ಮಾತನಾಡಿ, ಬಿಜೆಪಿ ಸರಕಾರ ರಚನೆಯಾಗುವುದನ್ನು ನಾವು ಎದುರು ನೋಡುತಿದ್ದೆವು. ಇಂದು ರಾಜ್ಯತೆ ಜನತೆಯ ಕನಸು ನನಸಾಗಿದೆ. ಬಿ.ಎಸ್‌.ಯಡಿಯೂರಪ್ಪನವರು ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿಸುವುದು ಸಂತಸ ತಂದಿದೆ ಎಂದರು.

ಬಿಎಸ್‌ವೈ ಅವರು ರೈತರ ಬೆನ್ನೆಲುಬಾಗಿ ಈ ಭಾಗದ ಜನತೆಯ ನೀರಾವರಿ ಯೋಜನೆ ಆದಷ್ಟು ಬೇಗ ಅನುಷ್ಠಾನವಾಗಲಿ. ಮುಖ್ಯವಾಗಿ ಮಹಿಳಾ ಸಬಲೀಕರಣವಾಗಬೇಕಿದೆ. ಮೋದಿಯವರು ಜಾರಿಗೆ ತಂದ ಯೋಜನೆ ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಕಾರ್ಯಗತವಾಗಬೇಕಾಗಿದ್ದು, ಇದಕ್ಕೆ ಒತ್ತುಕೊಡಬೇಕಾಗಿದೆ ಎಂದು ಹೇಳಿದರು.

ಈ ಸಂದರ್ಭ ಸಮಾಜ ಸೇವಕಿ ಆಶಾ ಮಂಜುನಾಥ್‌, ಗ್ರಾ.ಪಂ. ಸದಸ್ಯೆ ನೇತ್ರಾವತಿ ಮಹೇಂದ್ರಪ್ಪ, ಯಶೋದಮ್ಮ, ವಿಜಯಲಕ್ಷ್ಮಿ, ಜಾನ್ಹವಿ, ಪ್ರಿಯಾ ಸೇರಿದಂತೆ ಕಾರ್ಯಕರ್ತೆಯರು, ಕಾಳಿಕಾಂಬ ದೇವಸ್ಥಾನ ಕಮಿಟಿ ಅಧ್ಯಕ್ಷ ನಾಗರಾಜ, ಕಾರ್ಯದರ್ಶಿ ಬಿಳಕಿ ಕೃಷಮೂರ್ತಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ