ಆ್ಯಪ್ನಗರ

ಸ್ಮಶಾನ ಜಾಗ ಉಳಿವಿಗಾಗಿ ಹೋರಾಟ

ಸಮಾಧಿ ಜಾಗದಲ್ಲಿ ಕಲ್ಯಾಣ ಮಂಟಪ ಕಟ್ಟುವ ಕೆಲಸವನ್ನು ಗುಡ್ಡೆಕಲ್‌ ಬಾಲಸುಬ್ರಮಣ್ಯ ದೇವಸ್ಥಾನ ಟ್ರಸ್ಟ್‌ ನವರು ಮಾಡುತ್ತಿದ್ದಾರೆ ಎಂದು ಗುಡ್ಡೆಕಲ್‌ ಸ್ಮಶಾನ ಹಿತರಕ್ಷ ಣಾ ಸಮಿತಿ ಗೌರವಾಧ್ಯಕ್ಷ ಮೋಹನ್‌ ರೆಡ್ಡಿ ಆರೋಪಿಸಿದರು.

Vijaya Karnataka 24 Mar 2019, 5:00 am
ಶಿವಮೊಗ್ಗ: ಸಮಾಧಿ ಜಾಗದಲ್ಲಿ ಕಲ್ಯಾಣ ಮಂಟಪ ಕಟ್ಟುವ ಕೆಲಸವನ್ನು ಗುಡ್ಡೆಕಲ್‌ ಬಾಲಸುಬ್ರಮಣ್ಯ ದೇವಸ್ಥಾನ ಟ್ರಸ್ಟ್‌ ನವರು ಮಾಡುತ್ತಿದ್ದಾರೆ ಎಂದು ಗುಡ್ಡೆಕಲ್‌ ಸ್ಮಶಾನ ಹಿತರಕ್ಷ ಣಾ ಸಮಿತಿ ಗೌರವಾಧ್ಯಕ್ಷ ಮೋಹನ್‌ ರೆಡ್ಡಿ ಆರೋಪಿಸಿದರು.
Vijaya Karnataka Web cemetery space fighting for survival
ಸ್ಮಶಾನ ಜಾಗ ಉಳಿವಿಗಾಗಿ ಹೋರಾಟ


ಸುದ್ದಿಗೋಷ್ಠಿಯಲ್ಲಿ ಶನಿವಾರ ಅವರು ಮಾತನಾಡಿ, ದೇವಸ್ಥಾನ ಟ್ರಸ್ಟ್‌ನವರು ಗುಡ್ಡೇಕಲ್‌ ರುದ್ರಭೂಮಿಗೆ ಸಂಬಂಧಪಟ್ಟ ಪುರಾತನ ವಿಶ್ರಾಂತಿ ಕಟ್ಟಡವನ್ನು ಏಕಾಏಕಿ

ನೆಲ ಸಮ ಮಾಡಿದ್ದಾರೆ. ಕೇಳಲು ಹೋದರೆ ಸುಳ್ಳು ಕೇಸ್‌ ಹಾಕಿದ್ದಾರೆ, ಇದನ್ನು ನಾವು ಖಂಡಿಸುತ್ತೇವೆ. ನಮಗೆ ಟ್ರಸ್ಟ್‌ನಲ್ಲಿ ಸ್ಥಾನ ಬೇಡ. ಸ್ಮಶಾನ ಉಳಿವಿಗಾಗಿ ನಮ್ಮ ಹೋರಾಟವಷ್ಟೇ ಎಂದರು.

ದೇವಸ್ಥಾನಕ್ಕೆ ಸರಕಾರ ಸ್ವಲ್ಪ ಜಾಗ ಕೊಟ್ಟಿದ್ದು ನಿಜ. ಆದರೆ, ಇವರು ದೇವಸ್ಥಾನ ಜಾಗದಲ್ಲಿ ಈಗಾಗಲೇ ಹಲವು ಕಟ್ಟಡ ಕಟ್ಟಿದ್ದಾರೆ. ದೇವಸ್ಥಾನದ ಪರಿಸರ ಹಾಳು ಮಾಡಿದ್ದಾರೆ. ಈಗ ರುದ್ರಭೂಮಿ ಜಾಗ ಒತ್ತುವರಿ ಮಾಡಿ ತಮ್ಮ ಸ್ವಂತ ಆಸ್ತಿ ಎಂಬಂತೆ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ನಮ್ಮ ಮೇಲೆ ಕೇಸ್‌ ಹಾಕಿದ್ದಾರೆ. ಸಾಲದ್ದಕ್ಕೆ ಸ್ಮಶಾನ ಹಿತರಕ್ಷ ಣಾ ಸಮಿತಿಯ ಅಸ್ತಿತ್ವದಲ್ಲಿ ಇಲ್ಲ. ಅವರು ಶವ ಸಂಸ್ಕಾರಕ್ಕೆ ಬರುವ ಜನರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದೆಲ್ಲ ಸುಳ್ಳು ಆರೋಪ ಮಾಡಿದ ದೇವಸ್ಥಾನ ಸಮಿತಿಯ ರಾಜಶೇಖರ್‌ ಮತ್ತು ಎಂ.ಪಿ.ಸಂಪತ್‌ ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದರು.

ಗೋಷ್ಠಿಯಲ್ಲಿ ಪ್ರಮುಖರಾದ ರವಿಚಂದ್ರನ್‌, ಕೃಷ್ಣೆಗೌಡ, ಬಾಲಕೃಷ್ಣ, ಅಣ್ಣಪ್ಪ, ಆರ್‌.ರವಿ, ಶಿವಕುಮಾರ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ