ಆ್ಯಪ್ನಗರ

ಕೇಂದ್ರ ಗೋಮಾಂಸ ರಫ್ತು ನಿಷೇಧಿಸಲಿ: ಮುತಾಲಿಕ್‌

ಗೋಮಾಂಸ ರಫ್ತಿನಲ್ಲಿ ಭಾರತ ಜಗತ್ತಿನಲ್ಲಿ ನಂಬರ್‌ ಒನ್‌ ಆಗಿದೆ. 30 ಸಾವಿರ ಕೋಟಿ ರೂ.ಗಳ ವಾರ್ಷಿಕ ಆದಾಯ ನಡೆಸಲಾಗುತ್ತಿದೆ. ನಾವಿಲ್ಲಿ ನಾಕೈದು ಲಾರಿ ಹಿಡಿದು ಪ್ರತಿಭಟಿಸಿದರೆ ಏನು ಪ್ರಯೋಜನ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಹೇಳಿದರು.

Vijaya Karnataka 7 Jun 2019, 5:00 am
ಶಿರಾಳಕೊಪ್ಪ: ಗೋಮಾಂಸ ರಫ್ತಿನಲ್ಲಿ ಭಾರತ ಜಗತ್ತಿನಲ್ಲಿ ನಂಬರ್‌ ಒನ್‌ ಆಗಿದೆ. 30 ಸಾವಿರ ಕೋಟಿ ರೂ.ಗಳ ವಾರ್ಷಿಕ ಆದಾಯ ನಡೆಸಲಾಗುತ್ತಿದೆ. ನಾವಿಲ್ಲಿ ನಾಕೈದು ಲಾರಿ ಹಿಡಿದು ಪ್ರತಿಭಟಿಸಿದರೆ ಏನು ಪ್ರಯೋಜನ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಹೇಳಿದರು.
Vijaya Karnataka Web SMR-06SLKP02  PHOTO 01


ಪಟ್ಟಣದ ವಕೀಲ ಸಿದ್ದಲಿಂಗೇಶ್ವರ ಅವರ ಮನೆಗೆ ಗುರುವಾರ ಭೇಟಿ ನೀಡಿದ ಸಂದರ್ಭ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಗೋಮಾಂಸ ರಫ್ತಾಗುವುದನ್ನು ಕೇಂದ್ರ ಸರಕಾರ ನಿಷೇಧಿಸಬೇಕು. ಆಗ ಮಾತ್ರ ಆಂತರಿಕವಾಗಿ ಗೋರಕ್ಷ ಣೆ ಮಾಡುವವರಿಗೆ ಬೆಂಬಲ ಸಿಕ್ಕು ಕಸಾಯಿಖಾನೆ ಮುಚ್ಚಿ ಹೋಗುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ರಾಮಮಂದಿರ ನಿರ್ಮಿಸಲಿ

ಅಭಿವೃದ್ಧಿ ಮತ್ತು ಹಿಂದುತ್ವದ ಹಿನ್ನೆಲೆಯಲ್ಲಿ ಮೋದಿ ಅವರಿಗೆ ಜನತೆ ಮತ ಹಾಕಿ 2ನೇ ಅವಧಿಗೆ ಪ್ರಧಾನ ಮಂತ್ರಿ ಮಾಡಿದ್ದಾರೆ. ಅವರು ರಾಮ ಮಂದಿರ ಕಟ್ಟಿಸುತ್ತಾರೆ ಎಂಬ ವಿಶ್ವಾಸವಿದೆ. ಹಿಂದುತ್ವದ ದೃಷ್ಟಿಯಿಂದ ನಮಗೆ ರಾಮಮಂದಿರ ನಿರ್ಮಾಣ ಬಗ್ಗೆ ಅನುಮಾನ ಮೂಡುತ್ತದೆ. ಕಳೆದ 5 ವರ್ಷಗಳಲ್ಲಿ ರಾಮಮಂದಿರ ನಿರ್ಮಿಸದೆ ಕೇವಲ ಕೋರ್ಟ್‌ ಕಾರಣ ಹೇಳುತ್ತಿದ್ದಾರೆ. ಈ ಅವಧಿಯಲ್ಲಾದರೂ ರಾಮಮಂದಿರ ನಿರ್ಮಾಣ ಆಗಬೇಕೆಂದು ಆಗ್ರಹಿಸಿದರು.

ಕಾಶ್ಮೀರದ ವಿಧೇಯಕ 370ನ್ನು ಬದಲಾವಣೆ ಮಾಡುವುದಾಗಿ ಕೇಂದ್ರ ಗೃಹಸಚಿವ ಅಮೀತ್‌ ಶಾ ಹೇಳಿರುವುದು ಸ್ವಾಗತಾರ್ಹ. 370ನೇ ಕಲಂ ರದ್ದು ಮಾಡಬೇಕು. 7ಲಕ್ಷ ಜನ ಕಾಶ್ಮೀರೀ ಹಿಂದೂಗಳಿಗೆ ಮತ್ತೆ ಪುನರ್ವಸತಿ ಮಾಡಬೇಕು. ಜಗತ್ತಿನಲ್ಲಿ ಇಸ್ಲಾಮಿಕ್‌ ಭಯೋತ್ಪಾದನೆ ಕಂಟಕ ಆಗಿರುವುದು ಪ್ರತಿಯೊಬ್ಬರಿಗೂ ಗೊತ್ತಿರುವ ವಿಚಾರ ಎಂದರು.

ಗೋಡ್ಸೆ ದೇಶಭಕ್ತ ಹೌದು...
ಗಾಂಧೀಜಿಯನ್ನು ಹತ್ಯೆ ಮಾಡಿದ್ದು ಸರಿಯಲ್ಲ. ಗೋಡ್ಸೆ ಮಾಡಿದ್ದು ತಪ್ಪೇ. ಆದರೆ ಅವನು ದೇಶ ಭಕ್ತನಾಗಿದ್ದ. ಗೋಡ್ಸೆ ಗುಂಡು ಹೊಡೆದ ಬಗ್ಗೆ ಚರ್ಚಿಸುವುದು ಬಿಟ್ಟು ಅದರ ಉದ್ದೇಶ ಚರ್ಚಿಸಬೇಕು. ಸಾಧ್ವಿ ಪ್ರಜ್ಞಾ ಸಿಂಗ್‌, ನಳೀನ್‌ಕುಮಾರ್‌ ಕಟೀಲ್‌, ಅನಂತಕುಮಾರ ಹೆಗಡೆ ಹೇಳಿಕೆಗಳು ಸರಿಯಾಗಿವೆ ಎಂದು ಮುತಾಲಿಕ್‌ ಸಮರ್ಥಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ