ಆ್ಯಪ್ನಗರ

6, 7ರಂದು ವಿಐಎಸ್‌ಎಲ್‌ಗೆ ಕೇಂದ್ರದ ಅಧಿಕಾರಿಗಳ ತಂಡ

ನಷ್ಟದ ಕೂಪಕ್ಕೊಳಗಾಗಿರುವ ಹಾಗೂ ಖಾಸಗೀಕರಣದ ಛಾಯೆ ಎದುರಿಸುತ್ತಿರುವ ಕೇಂದ್ರ ಉಕ್ಕು ಪ್ರಾಧಿಕಾರದ ವಿಐಎಸ್‌ಎಲ್‌ಗೆ ಕೇಂದ್ರ ಸರಕಾರದ ಉನ್ನತ ಮಟ್ಟದ ಅಧಿಕಾರಿಗಳು ಮೇ6, 7ರಂದು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

Vijaya Karnataka 5 May 2019, 5:00 am
ಭದ್ರಾವತಿ: ನಷ್ಟದ ಕೂಪಕ್ಕೊಳಗಾಗಿರುವ ಹಾಗೂ ಖಾಸಗೀಕರಣದ ಛಾಯೆ ಎದುರಿಸುತ್ತಿರುವ ಕೇಂದ್ರ ಉಕ್ಕು ಪ್ರಾಧಿಕಾರದ ವಿಐಎಸ್‌ಎಲ್‌ಗೆ ಕೇಂದ್ರ ಸರಕಾರದ ಉನ್ನತ ಮಟ್ಟದ ಅಧಿಕಾರಿಗಳು ಮೇ6, 7ರಂದು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
Vijaya Karnataka Web central officers team visit to visl on 6 7th
6, 7ರಂದು ವಿಐಎಸ್‌ಎಲ್‌ಗೆ ಕೇಂದ್ರದ ಅಧಿಕಾರಿಗಳ ತಂಡ


ಕೇಂದ್ರ ಸರಕಾರದ ಉಕ್ಕು ಕಾರ್ಯದರ್ಶಿ ಬಿನಯ್‌ ಕುಮಾರ್‌, ಸೇಲ್‌ ಛೇರ್ಮನ್‌ ಅನಿಲ್‌ಕುಮಾರ್‌ ಚೌದರಿ, ಉಕ್ಕು ಪ್ರಾಧಿಕಾರದ ತಾಂತ್ರಿಕ ನಿರ್ದೇಶಕ ಹರಿನಂದರಾಯ್‌ ಮತ್ತು ಕಚ್ಛಾ ವಸ್ತುಗಳ ನಿರ್ದೇಶಕ ವಿವೇಕ್‌ಗುಪ್ತಾ, ಕಾರ್ಯಪಾಲಕ ನಿರ್ದೇಶಕ ಕಮಲಾಕರ್‌ ಮುಂತಾದವರು ಎರಡು ದಿನ ಮೊಕ್ಕಾಂ ಹೂಡಲಿದ್ದು, 6ರಂದು ಕಾರ್ಖಾನೆಯ ವಿವಿಧ ಇಲಾಖೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವಸ್ತು ಸ್ಥಿತಿ ಅರಿಯಲಿದ್ದಾರೆ. 7ರಂದು ಕಾರ್ಖಾನೆಯ ನಗರ ವ್ಯಾಪ್ತಿಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಕಾರ್ಯಕ್ಷ ಮತೆ ಮತ್ತು ಪ್ರಗತಿ ಕುರಿತು ಉನ್ನತ ಅಧಿಕಾರಿಗಳು ಹಾಗೂ ಕಾರ್ಮಿಕ ಸಂಘದ ಪ್ರತಿನಿಧಿಗಳೊಂದಿಗೆ ಚರ್ಚಿಸಲಿದ್ದಾರೆ.

ಬಹು ವರ್ಷಗಳಿಂದ ಅದಿರುಗಣಿ ಇಲ್ಲದೆ ಕಾರ್ಖಾನೆ ಆತಂಕದ ಪರಿಸ್ಥಿತಿ ಎದುರಿಸುತ್ತಿತ್ತು. ಇದನ್ನರಿತ ರಾಜ್ಯ ಮತ್ತು ಕೇಂದ್ರ ಸರಕಾರವು ಕಾರ್ಖಾನೆಗೆ ಬಳ್ಳಾರಿ ಜಿಲ್ಲೆಯ ಎನ್‌ಇಬಿ ರೇಂಜ್‌ ಪ್ರದೇಶದಲ್ಲಿ 150 ಎಕರೆ ಗಣಿ ಮಂಜೂರು ಮಾಡಿದೆ. ಅಲ್ಲದೇ ಇದೇ ಪ್ರದೇಶದ 140 ಹೆಕ್ಟೇರ್‌ ಅದಿರುಗಣಿ ಪ್ರಕರಣ ಕುರಿತು ದೆಹಲಿ ಕೋರ್ಟ್‌ನಿಂದ ಕಾರ್ಖಾನೆ ಪರವಾಗಿ ತೀರ್ಪು ಬಂದಿದೆ. ಈ ಸಂದರ್ಭ ಕೇಂದ್ರ ಸರಕಾರದ ಉಕ್ಕು ಕಾರ್ಯದರ್ಶಿಗಳು, ಭಾರತೀಯ ಉಕ್ಕು ಪ್ರಾಧಿಕಾರದ ಅಧ್ಯಕ್ಷ ರು ಮತ್ತಿತರ ಉನ್ನತ ಅಧಿಕಾರಿಗಳ ತಂಡ ಕಾರ್ಖಾನೆಗೆ ಭೇಟಿ ನೀಡುತ್ತಿರುವುದು ಮಹತ್ವ ಪಡೆದಿದೆ.

ಈ ಅಧಿಕಾರಿಗಳ ತಂಡವು ಕಾರ್ಖಾನೆ ಸರ್ವತೋಮುಖ ಅಭಿವೃದ್ಧಿಗೆ ಅವಶ್ಯವಿರುವ ಬಂಡವಾಳ ಘೋಷಿಸಬೇಕು. ಇದು ನಾಗರಿಕರು ಹಾಗೂ ಕಾರ್ಮಿಕ ಮತ್ತು ಅವಲಂಬಿತರ ಮಹದಾಸೆಯಾಗಿದೆ ಎಂದು ಕಾರ್ಮಿಕ ಸಂಘದ ಅಧ್ಯಕ್ಷ ಜೆ.ಜಗದೀಶ್‌ ಮತ್ತು ಪದಾಧಿಕಾರಿಗಳು, ಪ್ರಕಟಣೆ ನೀಡಿದ್ದು, ಉನ್ನತ ಮಟ್ಟದ ಅಧಿಕಾರಿಗಳಿಗೆ ಈ ಮೂಲಕ ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ