ಆ್ಯಪ್ನಗರ

ಮನೆ ಬಳಿಯ ಗೂಡಿನಲ್ಲಿದ್ದ ನಾಯಿ ಮರಿಯನ್ನೇ ತಿಂದ ಚಿರತೆ

​ಕಳೆದ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಈಗಾಗಲೇ ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದು, ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.​

Vijaya Karnataka Web 2 Jul 2020, 2:47 pm
ಸಾಗರ: ಕಾರ್ಗಲ್‌ ಸಮೀಪದ ಕೊಪ್ಪರಿಗೆ ಗ್ರಾಮದ ಕಣಗಳಘಟ್ಟ ಗುಂಡಿಮನೆ ಗಣಪತಿರಾವ್‌ ಎಂಬುವವರ ಮನೆಯಲ್ಲಿ ನಾಯಿಗೂಡಿನಲ್ಲಿದ್ದ ನಾಯಿಯನ್ನು ಇತ್ತೀಚೆಗೆ ಚಿರತೆಯೊಂದು ತಿಂದ ಘಟನೆ ನಡೆದಿದೆ.
Vijaya Karnataka Web ಚಿರತೆ
ಚಿರತೆ


ರಾತ್ರಿ ವೇಳೆ ಎಂದಿನಿಂದ ಒಂದು ಸುತ್ತು ನಾಯಿಯನ್ನು ಗೂಡಿನಿಂದ ಹೊರಗೆ ತಿರುಗಾಡಿಸಿಕೊಂಡು ಬಂದು,ಆಹಾರ ನೀಡಿ ಪುನಾ ಗೂಡಿನಲ್ಲಿ ಬಿಟ್ಟಿದ್ದಾರೆ. ಮಾರನೇ ದಿನ ಬೆಳಗ್ಗೆ ನಾಯಿಗೆ ಆಹಾರ ನೀಡಲು ಬಂದು ನೋಡಿದಾಗ ಗೂಡಿನಲ್ಲಿ ನಾಯಿ ಕಂಡು ಬಂದಿಲ್ಲ. ನಾಯಿ ಗೂಡಿನ ಸುತ್ತ ರಕ್ತದ ಕಲೆಗಳಾಗಿದ್ದು, ಚಿರತೆಯ ಹೆಜ್ಜೆ ಗುರುತುಗಳು ಕಾಣಿಸಿವೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ, ಸಿಸಿ ಕ್ಯಾಮರಾ ಅಳವಡಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಈಗಾಗಲೇ ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದು, ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ