ಶಿಕಾರಿಪುರ: ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ನಡೆಯುವ ಚುನಾವಣೆ ಪ್ರಕ್ರಿಯೆ ಇಲ್ಲಿನ ಮಕ್ಕಳಿಗೆ ತಿಳಿದಿದ್ದಲ್ಲಿ ಉತ್ತಮ ದೇಶ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಮೈತ್ರಿ ಶಾಲೆ ಆಡಳಿತಾಧಿಕಾರಿ ಕೆ.ಆರ್.ದಯಾನಂದ ಹೇಳಿದರು.
ಪಟ್ಟಣದ ಮೈತ್ರಿ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಚುನಾವಣೆ ಪದ್ಧತಿ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಚುನಾವಣೆಗೆ ಯಾರು ಸ್ಪರ್ಧಿಸಬಹುದು, ಮತದಾನ ಎಷ್ಟು ವರ್ಷದಿಂದ ಮಾಡಲು ಅವಕಾಶವಿದೆ, ಅಭ್ಯರ್ಥಿ ಆಯ್ಕೆ, ಮತದಾನ ಪ್ರಕ್ರಿಯೆ, ಮತ ಏಣಿಕೆ ಈ ಎಲ್ಲವನ್ನೂ ಮಕ್ಕಳಿಗೆ ಪರಿಚಯಿಸುವ ಉದ್ದೇಶಕ್ಕೆ ಈ ಕಾರ್ಯಕ್ರಮ ನಡೆಸಿದ್ದು ಅದನ್ನು ಎಲ್ಲ ಮಕ್ಕಳು ಅರಿತುಕೊಳ್ಳಬೇಕೆಂದರು. ಮುಖ್ಯ ಶಿಕ್ಷಕ ಪಿ.ವಿಶ್ವನಾಥ್ ಚುನಾವಣೆ ಅಧಿಕಾರಿಯಾಗಿ, ಮುಖ್ಯಶಿಕ್ಷ ಕ ಪ್ರಶಾಂತ್, ಚಂದ್ರಮತಿ, ನಿಂಗಪ್ಪ, ಶಿಲ್ಪ, ಸಹಶಿಕ್ಷ ಕರಾದ ಲಲಿತಾ, ರೂಪಾ ಪಾಟೀಲ್, ರೇಖಾ, ರೇಷ್ಮಭಾನು, ಹಾಲಸ್ವಾಮಿ, ಚಂದ್ರಶೇಖರ್ ಚುನಾವಣೆ ಪ್ರಕ್ರಿಯೆ ನಡೆಸಿದರು. ವಿದ್ಯಾರ್ಥಿಗಳಾದ ಪ್ರಶಾಂತ್, ಪ್ರದೀಪ್, ನವಿನ್, ಕಿರಣ್ ಪ್ರತಿನಿಧಿಗಳಾಗಿ ಪಾಲ್ಗೊಂಡಿದ್ದರು ಎಲ್ಲ ವಿದ್ಯಾರ್ಥಿಗಳು ಮತದಾನದಲ್ಲಿ ಪಾಲ್ಗೊಂಡಿದ್ದರು.
ಪಟ್ಟಣದ ಮೈತ್ರಿ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಚುನಾವಣೆ ಪದ್ಧತಿ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಚುನಾವಣೆಗೆ ಯಾರು ಸ್ಪರ್ಧಿಸಬಹುದು, ಮತದಾನ ಎಷ್ಟು ವರ್ಷದಿಂದ ಮಾಡಲು ಅವಕಾಶವಿದೆ, ಅಭ್ಯರ್ಥಿ ಆಯ್ಕೆ, ಮತದಾನ ಪ್ರಕ್ರಿಯೆ, ಮತ ಏಣಿಕೆ ಈ ಎಲ್ಲವನ್ನೂ ಮಕ್ಕಳಿಗೆ ಪರಿಚಯಿಸುವ ಉದ್ದೇಶಕ್ಕೆ ಈ ಕಾರ್ಯಕ್ರಮ ನಡೆಸಿದ್ದು ಅದನ್ನು ಎಲ್ಲ ಮಕ್ಕಳು ಅರಿತುಕೊಳ್ಳಬೇಕೆಂದರು. ಮುಖ್ಯ ಶಿಕ್ಷಕ ಪಿ.ವಿಶ್ವನಾಥ್ ಚುನಾವಣೆ ಅಧಿಕಾರಿಯಾಗಿ, ಮುಖ್ಯಶಿಕ್ಷ ಕ ಪ್ರಶಾಂತ್, ಚಂದ್ರಮತಿ, ನಿಂಗಪ್ಪ, ಶಿಲ್ಪ, ಸಹಶಿಕ್ಷ ಕರಾದ ಲಲಿತಾ, ರೂಪಾ ಪಾಟೀಲ್, ರೇಖಾ, ರೇಷ್ಮಭಾನು, ಹಾಲಸ್ವಾಮಿ, ಚಂದ್ರಶೇಖರ್ ಚುನಾವಣೆ ಪ್ರಕ್ರಿಯೆ ನಡೆಸಿದರು. ವಿದ್ಯಾರ್ಥಿಗಳಾದ ಪ್ರಶಾಂತ್, ಪ್ರದೀಪ್, ನವಿನ್, ಕಿರಣ್ ಪ್ರತಿನಿಧಿಗಳಾಗಿ ಪಾಲ್ಗೊಂಡಿದ್ದರು ಎಲ್ಲ ವಿದ್ಯಾರ್ಥಿಗಳು ಮತದಾನದಲ್ಲಿ ಪಾಲ್ಗೊಂಡಿದ್ದರು.