ಆ್ಯಪ್ನಗರ

ಚುನಾವಣೆ ಪ್ರಕ್ರಿಯೆ ಅರಿವು ಮಕ್ಕಳಿಗೆ ಅಗತ್ಯ

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ನಡೆಯುವ ಚುನಾವಣೆ ಪ್ರಕ್ರಿಯೆ ಇಲ್ಲಿನ ಮಕ್ಕಳಿಗೆ ತಿಳಿದಿದ್ದಲ್ಲಿ ಉತ್ತಮ ದೇಶ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಮೈತ್ರಿ ಶಾಲೆ ಆಡಳಿತಾಧಿಕಾರಿ ಕೆ.ಆರ್‌.ದಯಾನಂದ ಹೇಳಿದರು.

Vijaya Karnataka 9 Jul 2019, 5:00 am
ಶಿಕಾರಿಪುರ: ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ನಡೆಯುವ ಚುನಾವಣೆ ಪ್ರಕ್ರಿಯೆ ಇಲ್ಲಿನ ಮಕ್ಕಳಿಗೆ ತಿಳಿದಿದ್ದಲ್ಲಿ ಉತ್ತಮ ದೇಶ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಮೈತ್ರಿ ಶಾಲೆ ಆಡಳಿತಾಧಿಕಾರಿ ಕೆ.ಆರ್‌.ದಯಾನಂದ ಹೇಳಿದರು.
Vijaya Karnataka Web SMR-07SKP1


ಪಟ್ಟಣದ ಮೈತ್ರಿ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಚುನಾವಣೆ ಪದ್ಧತಿ ಅರಿವು ಕಾರ‍್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಚುನಾವಣೆಗೆ ಯಾರು ಸ್ಪರ್ಧಿಸಬಹುದು, ಮತದಾನ ಎಷ್ಟು ವರ್ಷದಿಂದ ಮಾಡಲು ಅವಕಾಶವಿದೆ, ಅಭ್ಯರ್ಥಿ ಆಯ್ಕೆ, ಮತದಾನ ಪ್ರಕ್ರಿಯೆ, ಮತ ಏಣಿಕೆ ಈ ಎಲ್ಲವನ್ನೂ ಮಕ್ಕಳಿಗೆ ಪರಿಚಯಿಸುವ ಉದ್ದೇಶಕ್ಕೆ ಈ ಕಾರ‍್ಯಕ್ರಮ ನಡೆಸಿದ್ದು ಅದನ್ನು ಎಲ್ಲ ಮಕ್ಕಳು ಅರಿತುಕೊಳ್ಳಬೇಕೆಂದರು. ಮುಖ್ಯ ಶಿಕ್ಷಕ ಪಿ.ವಿಶ್ವನಾಥ್‌ ಚುನಾವಣೆ ಅಧಿಕಾರಿಯಾಗಿ, ಮುಖ್ಯಶಿಕ್ಷ ಕ ಪ್ರಶಾಂತ್‌, ಚಂದ್ರಮತಿ, ನಿಂಗಪ್ಪ, ಶಿಲ್ಪ, ಸಹಶಿಕ್ಷ ಕರಾದ ಲಲಿತಾ, ರೂಪಾ ಪಾಟೀಲ್‌, ರೇಖಾ, ರೇಷ್ಮಭಾನು, ಹಾಲಸ್ವಾಮಿ, ಚಂದ್ರಶೇಖರ್‌ ಚುನಾವಣೆ ಪ್ರಕ್ರಿಯೆ ನಡೆಸಿದರು. ವಿದ್ಯಾರ್ಥಿಗಳಾದ ಪ್ರಶಾಂತ್‌, ಪ್ರದೀಪ್‌, ನವಿನ್‌, ಕಿರಣ್‌ ಪ್ರತಿನಿಧಿಗಳಾಗಿ ಪಾಲ್ಗೊಂಡಿದ್ದರು ಎಲ್ಲ ವಿದ್ಯಾರ್ಥಿಗಳು ಮತದಾನದಲ್ಲಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ