ಆ್ಯಪ್ನಗರ

ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಹೆಚ್ಚಲಿ

ವಿದ್ಯಾರ್ಥಿಗಳು ವೈಜ್ಞಾನಿಕವಾಗಿ ಚಿಂತಿಸುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ಸರಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ಉಪನ್ಯಾಸಕ ದಾಮೋದರ ಶೆಣೈ ಹೇಳಿದರು.

Vijaya Karnataka 2 Mar 2019, 5:00 am
ಹೊಸನಗರ: ವಿದ್ಯಾರ್ಥಿಗಳು ವೈಜ್ಞಾನಿಕವಾಗಿ ಚಿಂತಿಸುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ಸರಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ಉಪನ್ಯಾಸಕ ದಾಮೋದರ ಶೆಣೈ ಹೇಳಿದರು.
Vijaya Karnataka Web SMR-28HOSP6


ಪಟ್ಟಣದ ಗುರೂಜಿ ಇಂಟರ್‌ ನ್ಯಾಷನಲ್‌ ವಿದ್ಯಾಸಂಸ್ಥೆ ಗುರುವಾರ ಏರ್ಪಡಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಪ್ರಶ್ನಿಸುವ ಗುಣ ನಮ್ಮ ಜ್ಞಾನಾರ್ಜನೆಗೆ ಪೂರಕ. ಎಳವೆಯಲ್ಲಿ ಇರುವ ಕುತೂಹಲ, ಪ್ರಶ್ನಿಸುವ ಗುಣ ವಯಸ್ಸಾದಂತೆ ಕಡಿಮೆ ಆಗುತ್ತದೆ. ವಿಜ್ಞಾನ ಕ್ಷೇತ್ರ ಇಂದು ಸಾಕಷ್ಟು ಮುಂದುವರಿದಿದೆ. ಅದಕ್ಕೆ ತಕ್ಕಂತೆ ನಾವೂ ಬದಲಾಗಬೇಕಿದೆ ಎಂದರು.

ವಿಜ್ಞಾನ ಶಿಕ್ಷ ಕ ಹನುಮಂತರಾವ್‌ ಮಾತನಾಡಿ, ನೋಬೆಲ್‌ ಪಾರಿತೋಷಕ ಪುರಸ್ಕೃತ ವಿಜ್ಞಾನಿ ಸರ್‌.ಸಿ.ವಿ.ರಾಮನ್‌ ಅವರು 'ರಾಮನ್‌ ಪರಿಣಾಮ'ವನ್ನು ವಿಶ್ವಕ್ಕೆ ಬಿತ್ತರಿಸಿದ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವಾಗಿ ಆಚರಿಸಲಾಗುತ್ತಿದೆ ಎಂದರು.

ವಿಜ್ಞಾನ ಶಿಕ್ಷ ಕ ಪಿ.ಎನ್‌. ನರಸಿಂಹಮೂರ್ತಿ ಮಾತನಾಡಿ, ಮೂಲ ವಿಜ್ಞಾನಕ್ಕೆ ಈಗ ಹೆಚ್ಚು ಮಹತ್ವ ಇದ್ದು, ಮಕ್ಕಳಲ್ಲಿ ವಿಜ್ಞಾನ ವಿಷಯದಲ್ಲಿ ಹೆಚ್ಚಿನ ಆಸಕ್ತಿ ಬೆಳೆಸುವಂತೆ ಶಿಕ್ಷ ಕರು ಆದ್ಯತೆ ನೀಡಬೇಕೆಂದರು. ಸೀತಾರಾಮ ನಾಯಕ್‌ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿದರು. ವಿದ್ಯಾ ಸಂಸ್ಥೆ ಅಧ್ಯಕ್ಷ ಸುದೇಶ ಕಾಮತ್‌ ಅಧ್ಯಕ್ಷ ತೆ ವಹಿಸಿದ್ದರು. ಮುಖ್ಯ ಶಿಕ್ಷ ಕ ಶಾಂತಮೂರ್ತಿ, ಸುನಿತಾ ನಾಯಕ್‌, ಸಂಸ್ಥೆ ನಿರ್ದೇಶಕ ನಾಗೇಶ, ವಿದ್ಯಾಕಾಮತ್‌, ಚಂದ್ರಶೇಖರ ಇದ್ದರು. ಶೃತಿ ಸ್ವಾಗತಿಸಿ, ಸುಷ್ಮಾ ವಂದಿಸಿದರು. ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮಕ್ಕಳು ತಯಾರಿಸಿದ ಸುಮಾರು 60ಕ್ಕೂ ಪ್ರಯೋಗಗಳನ್ನು ಪ್ರದರ್ಶಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ