ಆ್ಯಪ್ನಗರ

ಚಿಪ್ಪಿಗರ ಕೆರೆ ದಂಡೆ ಸುತ್ತ ಸ್ವಚ್ಛತೆ ಕಾರ‍್ಯ

ಪಟ್ಟಣದ ಜಲದ ಜೀವನಾಡಿ ಚಿಪ್ಪಿಗರಕೆರೆಯಲ್ಲಿ ವಸ್ತುಗಳನ್ನು ಬೇಕಾಬಿಟ್ಟಿಯಾಗಿ ಎಸೆದು ಹೋಗಿದ್ದರಿಂದ ನೀರು ಮಲಿನವಾಗಿತ್ತು. ಜಾನುವಾರು ಸಹ ನೀರು ಕುಡಿಯದಂತಾಗಿತ್ತು.

Vijaya Karnataka 15 Jun 2019, 5:00 am
ರಿಪ್ಪನ್‌ಪೇಟೆ: ಪಟ್ಟಣದ ಜಲದ ಜೀವನಾಡಿ ಚಿಪ್ಪಿಗರಕೆರೆಯಲ್ಲಿ ವಸ್ತುಗಳನ್ನು ಬೇಕಾಬಿಟ್ಟಿಯಾಗಿ ಎಸೆದು ಹೋಗಿದ್ದರಿಂದ ನೀರು ಮಲಿನವಾಗಿತ್ತು. ಜಾನುವಾರು ಸಹ ನೀರು ಕುಡಿಯದಂತಾಗಿತ್ತು. ಇತ್ತೀಚೆಗೆ ಗವಟೂರು-ರಿಪ್ಪನ್‌ಪೇಟೆ ಗ್ರಾ.ಪಂ. ಸದಸ್ಯೆ ಲಕ್ಷ ್ಮಮ್ಮ ಲಕ್ಷ ್ಮಣ ಅವರು ಪರಿಸರ ಆಸಕ್ತರ ತಂಡದ ಸುಧೀಂದ್ರ ಪೂಜಾರಿ, ವಾಸುಶೆಟ್ಟಿ, ವೈ.ಜೆ.ಕೃಷ್ಣ, ಸುರೇಶ್‌, ಲಕ್ಷ ್ಮಣ, ಅರುಣ್‌, ಸತೀಶ್‌ ನೇತೃತ್ವದಲ್ಲಿ ಕೆರೆ ದಂಡೆ ಸುತ್ತಮುತ್ತಲಲ್ಲಿ ಬಿಸಾಕಿರುವ ಮದ್ಯದ ಬಾಟಲಿ, ಪ್ಲಾಸ್ಟಿಕ್‌, ಹಳೆ ಬಟ್ಟೆ, ಗೊಬ್ಬರದಚೀಲ ಹಾಗೂ ಮನೆಗಳ ರಕ್ಷ ಣೆಗಾಗಿ ಮಾಡಿಸಿದ ಕಟ್ಟುಕಾಯಿ ಸೇರಿದಂತೆ ಇಂದಿರಾಗಾಂಧಿ ಹೆಸರಿನ ಲಟನ್‌ ಗಿಡಗಳನ್ನು ಕಡಿತಲೆ ಮಾಡಿ ಸ್ವಚ್ಛತಾ ಕಾರ‍್ಯ ನಡೆಸಿದರು.
Vijaya Karnataka Web SMR-7RPT4


ಗವಟೂರು ಬಳಿಯ ತಾವರೆಕೆರೆ ಸ್ವಚ್ಛಗೊಳಿಸಿರುವುದನ್ನು ಕಂಡ ಯುವಕರ ತಂಡ ಸ್ವಪ್ರೇರಣೆಯಿಂದ ಊರಿನ ಕೆರೆ ಸ್ವಚ್ಛಗೊಳಿಸಲು ಚರ್ಚಿಸಿ ಮುಂಜಾನೆಯೇ ಸ್ಥಳೀಯ ಜನಪ್ರತಿನಿಧಿ ಲಕ್ಷ ್ಮಮ್ಮ ನೇತೃತ್ವದಲ್ಲಿ ಶ್ರಮದಾನಕ್ಕೆ ಮುಂದಾಗಿದೆ. ಕೊಲ್ಲೂರು, ಕೊಡಚಾದ್ರಿ, ಸಿಗಂದೂರು, ಕುಂದಾಪುರ, ಹೊಸನಗರ, ಉಡುಪಿಗೆ ಹೋಗುವ ಮಾರ್ಗದಲ್ಲಿನ ಈ ಕೆರೆ ಸ್ವಚ್ಛತೆ ಕಂಡ ಪ್ರಯಾಣಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸುಮಾರು ಎರಡು ಲಗೇಜ್‌ ಆಟೋಗಳಷ್ಟು ಬೇಡದ ತ್ಯಾಜ್ಯವಸ್ತು ಮತ್ತು ಮದ್ಯಬಾಟಲ್‌ಗಳನ್ನು ಬೇರೆಕಡೆಗೆ ಸಾಗಿಸಿದ್ದಾರೆ.

ಚಿಪ್ಪಿಗರಕೆರೆಯು ಸುಮಾರು ನೂರಾರು ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುವ ಕೆರೆಯಾಗಿದೆ. ಎರಡು ವರ್ಷದ ಹಿಂದೆ ಹೂಳು ತೆಗೆಯುವುದರೊಂದಿಗೆ ಅಭಿವೃದ್ಧಿಪಡಿಸಿದ್ದರೂ ಕುಡುಕರು, ದಾರಿ ಹೋಕರು ತ್ಯಾಜ್ಯ ವಸ್ತುಗಳನ್ನು ಕೆರೆಗೆ ಬಿಸಾಕಿ ಹೋಗುತ್ತಿದ್ದರು. ದಂಡೆ ಬಳಿ ಯಾರೂ ಓಡಾಡದಂತಹ ಸ್ಥಿತಿ ನಿರ್ಮಾಣವಾಗಿ ದುರ್ನಾತ ಬೀರುತ್ತಿತ್ತು. ಇನ್ನಾದರೂ ಈ ಕೆರೆ ಬಳಿ ತ್ಯಾಜ್ಯವಸ್ತು ಎಸೆಯದಂತೆ ಕ್ರಮ ಜರುಗಿಸಲು ಗ್ರಾಮಾಡಳಿತ ಮುಂದಾಗ ಬೇಕಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ