ಆ್ಯಪ್ನಗರ

ಸ್ವಚ್ಛತೆಗೆ ಪ್ರತಿಯೊಬ್ಬರ ಶ್ರಮ ಮುಖ್ಯ

ಹಸಿ ಮತ್ತು ಒಣ ಕಸ ವಿಂಗಡಿಸುವ ಕಾರ‍್ಯ ಮನೆಗಳಿಂದಲೇ ಆರಂಭವಾಗಬೇಕಿದೆ. ಮನೆಗಳಲ್ಲಿ ಉತ್ಪತ್ತಿಯಾಗುವ ಘನ ತ್ಯಾಜ್ಯವನ್ನು ಸ್ಥಳದಲ್ಲಿ ಬೇರ್ಪಡಿಸಿ ನಗರಸಭೆ ವಾಹನಗಳಲ್ಲಿ ನೀಡುವುದರಿಂದ ಪರಿಸರ ಸಂರಕ್ಷ ಣೆಗೆ ಸಹಕಾರಿಯಾಗಲಿದೆ ಎಂದು ಪೌರಾಯುಕ್ತ ಮನೋಹರ್‌ ಹೇಳಿದರು.

Vijaya Karnataka 6 Aug 2019, 5:00 am
ಭದ್ರಾವತಿ: ಹಸಿ ಮತ್ತು ಒಣ ಕಸ ವಿಂಗಡಿಸುವ ಕಾರ‍್ಯ ಮನೆಗಳಿಂದಲೇ ಆರಂಭವಾಗಬೇಕಿದೆ. ಮನೆಗಳಲ್ಲಿ ಉತ್ಪತ್ತಿಯಾಗುವ ಘನ ತ್ಯಾಜ್ಯವನ್ನು ಸ್ಥಳದಲ್ಲಿ ಬೇರ್ಪಡಿಸಿ ನಗರಸಭೆ ವಾಹನಗಳಲ್ಲಿ ನೀಡುವುದರಿಂದ ಪರಿಸರ ಸಂರಕ್ಷ ಣೆಗೆ ಸಹಕಾರಿಯಾಗಲಿದೆ ಎಂದು ಪೌರಾಯುಕ್ತ ಮನೋಹರ್‌ ಹೇಳಿದರು.
Vijaya Karnataka Web SMR-5BDVT1


ಅವರು ನ್ಯೂಟೌನ್‌ ಮೇರಿ ಇಮ್ಮಾಕ್ಯೂಲೇಟ್‌ ಚರ್ಚ್‌ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಘನತ್ಯಾಜ್ಯ ನಿರ್ವಹಣೆ ಕುರಿತ ಶಿಬಿರದಲ್ಲಿ ಮಾತನಾಡಿದರು. ಮನೆ, ಅಂಗಡಿ, ಹೋಟೆಲ್‌ಗಳಲ್ಲಿ ಉತ್ಪಾದನೆ ಮಾಡುವವರೆ ಘನತ್ಯಾಜ್ಯ ವಸ್ತುಗಳನ್ನು ಹಸಿ ಮತ್ತು ಒಣ ಕಸ ಪ್ರತ್ಯೇಕವಾಗಿ ಬೇರ್ಪಡಿಸಿ ನೀಡುವಂತಾಗಬೇಕು. ಇದರಿಂದ ಪರಿಸರ ಉಳಿವಿಗೆ ಸಹಕಾರಿಯಾಗಲಿದೆ. ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದರು. ಚರ್ಚ್‌ ಆವರಣ ಹಾಗೂ ಸುತ್ತ ಮುತ್ತಲ ಪ್ರದೇಶದಲ್ಲಿ ಸ್ವಚ್ಛತೆ ಕಾರ‍್ಯ ನಡೆಸಲಾಯಿತು.

ಚರ್ಚ್‌ ಪಾಲನ ಸಮಿತಿ ಮುಖ್ಯಸ್ಥ ಅಂತೋಣಿ ವಿಲ್ಸನ್‌ ಮಾತನಾಡಿ, ಮನೋಹರ್‌ ಅವರು ಸ್ವಚ್ಛ ಭದ್ರಾವತಿಗೆ ಕಾರಣರಾಗಿದ್ದಾರೆ. ಎಲ್ಲ ಧರ್ಮಕೇಂದ್ರಗಳಲ್ಲೂ ಇಂತಹ ಕಾರ‍್ಯ ಮಾಡುವುದರಿಂದ ಪ್ರತಿಯೊಬ್ಬರಲ್ಲೂ ಪರಿಸರ ಜಾಗೃತಿ ಮೂಡಲಿದೆ ಎಂದರು. ಈ ಸಂದರ್ಭ ಫಾದರ್‌ ವಿಲಿಯಂ ವಿನ್ನಿಫ್ರೆಡ್‌, ಸೇಂಟ್‌ ಚಾಲ್ಸ್‌ ಶಿಕ್ಷ ಣ ಸಂಸ್ಥೆ ಮುಖ್ಯಸ್ಥರಾದ ಸಿಸ್ಟರ್‌ ರೀಟಾ, ಅಮಲಮಾತಾ ಆಸ್ಪತ್ರೆಯ ಸಿಸ್ಟರ್‌ ತಾರಾ, ರಾಬರ್ಟ್‌ ಡಿಸೋಜಾ ಇತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ