ಆ್ಯಪ್ನಗರ

ಅನುಮತಿ ಇಲ್ಲದ ಕಾಂಕ್ರಿಟ್‌ ಮಿಕ್ಸಿಂಗ್‌ ಕೈಗಾರಿಕೆ ತೆರವುಗೊಳಿಸಿ

ನಗರದ ಗೋಪಾಳ ಬಡಾವಣೆಯ ಶಾರದಾದೇವಿ ಅಂಧರ ವಿಕಾಸ ಕೇಂದ್ರದ ಪಕ್ಕದಲ್ಲಿ, ಯಾವುದೇ ಇಲಾಖೆ ಅನುಮತಿ ಇಲ್ಲದೆ ಕಾಂಕ್ರಿಟ್‌ ಮಿಕ್ಸಿಂಗ್‌ ಕೈಗಾರಿಕೆ ಸ್ಥಾಪಿಸಲು ಹೊರಟಿರುವುದು ಖಂಡನೀಯ ಎಂದು ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಕಾರ್ಯದರ್ಶಿ ಕೆ.ವಿ.ವಸಂತಕುಮಾರ್‌ ಆಗ್ರಹಿಸಿದರು.

Vijaya Karnataka 22 May 2019, 5:00 am
ಶಿವಮೊಗ್ಗ : ನಗರದ ಗೋಪಾಳ ಬಡಾವಣೆಯ ಶಾರದಾದೇವಿ ಅಂಧರ ವಿಕಾಸ ಕೇಂದ್ರದ ಪಕ್ಕದಲ್ಲಿ, ಯಾವುದೇ ಇಲಾಖೆ ಅನುಮತಿ ಇಲ್ಲದೆ ಕಾಂಕ್ರಿಟ್‌ ಮಿಕ್ಸಿಂಗ್‌ ಕೈಗಾರಿಕೆ ಸ್ಥಾಪಿಸಲು ಹೊರಟಿರುವುದು ಖಂಡನೀಯ ಎಂದು ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಕಾರ್ಯದರ್ಶಿ ಕೆ.ವಿ.ವಸಂತಕುಮಾರ್‌ ಆಗ್ರಹಿಸಿದರು.
Vijaya Karnataka Web clear concrete mixing industry without permission
ಅನುಮತಿ ಇಲ್ಲದ ಕಾಂಕ್ರಿಟ್‌ ಮಿಕ್ಸಿಂಗ್‌ ಕೈಗಾರಿಕೆ ತೆರವುಗೊಳಿಸಿ


ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಅವರು ಮಾತನಾಡಿ, ನಗರದ ಗೋಪಾಳದ ಶಾರದಾದೇವಿ ಅಂಧರ ವಿಕಾಸ ಕೇಂದ್ರದ ಪಕ್ಕದಲ್ಲಿರುವ ಸರ್ವೆ ನಂ.59ರಲ್ಲಿ ಯಾವುದೇ ಇಲಾಖೆಗಳ ಅನುಮತಿ ಪಡೆಯದೆ ಹೈದ್ರಾಬಾದ್‌ ಮೂಲದ ಕಂಪನಿಯೊಂದು ಕಾಂಕ್ರಿಟ್‌ ಮಿಕ್ಸಿಂಗ್‌ ಕೈಗಾರಿಕೆಯೊಂದನ್ನು ಸ್ಥಾಪಿಸಲು ಹೊರಟಿದೆ. ಇದಕ್ಕಾಗಿ ಇಲ್ಲಿ ಜಲ್ಲಿ, ಮರಳು, ಸಿಮೆಂಟ್‌ ಮುಂತಾದ ಸಾಮಗ್ರಿಗಳನ್ನು ದಾಸ್ತಾನು ಮಾಡಲು ಹೊರಟಿದ್ದಾರೆ ಎಂದು ದೂರಿದರು.

ಈ ಜಾಗದ ಸುತ್ತಮುತ್ತ ಅಂಧರ ಶಾಲೆ ಇದೆ. ಕಾಲೇಜ್‌ಗಳಿವೆ. ಚರ್ಚ್‌ಗಳಿವೆ, ನೂರಾರು ವಾಸದ ಮನೆಗಳಿವೆ. ಇಲ್ಲಿ ಕೈಗಾರಿಕೆ ಸ್ಥಾಪನೆ ಮಾಡುವುದರಿಂದ ಸುತ್ತಮುತ್ತಲು ಇರುವ ಜನರಿಗೆ ತೊಂದರೆಯಾಗುತ್ತದೆ ಎಂದು ಆರೋಪಿಸಿದರು.

ಈ ಕೈಗಾರಿಕೆಗೆ ಯಾವುದೇ ಇಲಾಖೆಗಳು ಅನುಮತಿ ನೀಡಬಾರದು, ಮಹಾನಗರ ಪಾಲಿಕೆಯ ಅಧಿಕಾರಿಗಳು ತಕ್ಷ ಣವೇ ಇದನ್ನು ತೆರವುಗೊಳಿಸಬೇಕು, ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಕಾನೂನು ಹೋರಾಟ ಸೇರಿದಂತೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕೈಗಾರಿಕೆ ಸ್ಥಾಪನೆಗೆ ನೀಡಿರುವ ಜಾಗ ಸಂಸದ ಬಿ.ವೈ.ರಾಘವೇಂದ್ರ ಅವರ ಪತ್ನಿ ತೇಜಸ್ವಿನಿ ಅವರ ಹೆಸರಿನಲ್ಲಿದೆ. ಅವರು ಹೈದ್ರಾಬಾದ್‌ ಮೂಲದ ಕಂಪನಿಗೆ ಬಾಡಿಗೆ ಕೊಟ್ಟಿರುವುದಾಗಿ ತಿಳಿದುಬಂದಿದೆ. ಹೀಗಾಗಿ ಸಂಸದ ರಾಘವೇಂದ್ರ ಅವನ್ನು ಭೇಟಿ ಮಾಡಿ ವಿಷಯ ತಿಳಿಸುವ ಪ್ರಯತ್ನ ಮಾಡಿದ್ದೇವು. ಅವರು ಎಲೆಕ್ಷನ್‌ನಲ್ಲಿ ಬಿಜಿ ಇರುವುದರಿಂದ ಸಾಧ್ಯವಾಗಿಲ್ಲ. ಚುನಾವಣೆ ಫಲಿತಾಂಶ ಬಂದ ನಂತರ ಅವರನ್ನು ಭೇಟಿ ಮಾಡಿ, ಕೈಗಾರಿಕಾ ದುಷ್ಪರಿಣಾಮ ಅರಿತು ಬಾಡಿಗೆ ಕರಾರನ್ನು ರದ್ದುಪಡಿಸುವಂತೆ ಒತ್ತಾಯಿಸಲಾಗುವುದು ಎಂದರು.

ಗೋಷ್ಠಿಯಲ್ಲಿ ಪ್ರಮುಖರಾದ ಕಡಿದಾಳ್‌ ಶಾಮಣ್ಣ, ಡಾ.ಚಿಕ್ಕಸ್ವಾಮಿ, ಎಸ್‌.ಬಿ.ಅಶೋಕ್‌ಕುಮಾರ್‌, ಎಸ್‌.ವಿ.ಅನಂತ್‌, ಸುಬ್ರಹ್ಮಣ್ಯ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ