ಆ್ಯಪ್ನಗರ

ಕಡೇ ದಿನ ಹೊರಗೆ ಬರದ ಸಿಎಂ

ಎರಡನೇ ಹಂತದ ಮತದಾನದ ಬಹಿರಂಗ ಪ್ರಚಾರ ಅಂತ್ಯದ ಕಡೇ ದಿನ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ನಗರ ಹೊರ ವಲಯದ ರೆಸಾರ್ಟ್‌ನಲ್ಲಿ ಉಳಿದುಕೊಂಡು ಸರಣಿ ಸಭೆಗಳನ್ನು ನಡೆಸಿದರು.

Vijaya Karnataka 22 Apr 2019, 5:00 am
ಶಿವಮೊಗ್ಗ : ಎರಡನೇ ಹಂತದ ಮತದಾನದ ಬಹಿರಂಗ ಪ್ರಚಾರ ಅಂತ್ಯದ ಕಡೇ ದಿನ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ನಗರ ಹೊರ ವಲಯದ ರೆಸಾರ್ಟ್‌ನಲ್ಲಿ ಉಳಿದುಕೊಂಡು ಸರಣಿ ಸಭೆಗಳನ್ನು ನಡೆಸಿದರು.
Vijaya Karnataka Web cm not yet come at end day
ಕಡೇ ದಿನ ಹೊರಗೆ ಬರದ ಸಿಎಂ


ಶನಿವಾರ ಸಂಜೆ ಸಾಗರದಲ್ಲಿ ಮೈತ್ರಿಕೂಟದ ಕಾರ್ಯಕರ್ತರ ಸಮಾವೇಶ ಮುಗಿಸಿಕೊಂಡು ಶಿವಮೊಗ್ಗಕ್ಕೆ ಆಗಮಿಸಿ ರೆಸಾರ್ಟ್‌ ಸೇರಿದವರು ಭಾನುವಾರ ಸಂಜೆ 4ಗಂಟೆ ವರೆಗೆ ಹೊರಗೆ ಬರಲಿಲ್ಲ. ಬೆಳಗ್ಗೆಯಿಂದ ಸಂಜೆವರೆಗೆ ಕ್ಷೇತ್ರದ ವಿವಿಧ ಹಂತದ ಮುಖಂಡರ ಸಭೆ ನಡೆಸಿದರು. ಸಂಜೆ 4ಗಂಟೆ ನಂತರ ಹೆಲಿಕಾಪ್ಟರ್‌ನಲ್ಲಿ ಬೆಂಗಳೂರಿಗೆ ತೆರಳಿದರು.

ಮೊದಲಿಗೆ ಮಧ್ಯಾಹ್ನ 12ಗಂಟೆಗೆ ಪತ್ರಿಕಾಗೋಷ್ಠಿ ನಡೆಸುತ್ತಾರೆ ಎಂದು ಜೆಡಿಎಸ್‌ನ ಸ್ಥಳೀಯ ಮುಖಂಡರು ತಿಳಿಸಿದ್ದರು. ಅದಕ್ಕಾಗಿ ಪೊಲೀಸರು, ಚುನಾವಣೆ ಆಯೋಗದ ಅಧಿಕಾರಿಗಳು ಜಿಲ್ಲಾ ಪ್ರೆಸ್‌ಟ್ರಸ್ಟ್‌ ಬಳಿ ಧಾವಿಸಿ ಬಂದಿದ್ದರು. ಆದರೆ, ಅದಾಗಿ ಅರ್ಧತಾಸಿನೊಳಗೆ ಗೋಷ್ಠಿಗೆ ಬರುವುದಿಲ್ಲ ಎಂಬ ಸಂದೇಶ ಬಂತು. ಅವರ ಬದಲಿಗೆ ಪಕ್ಷದ ಹಲವು ಮುಖಂಡರು ಪತ್ರಿಕಾಗೋಷ್ಠಿ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ