ಆ್ಯಪ್ನಗರ

4 ದಿನಗಳಲ್ಲಿ ಮೈತ್ರಿ ಸರಕಾರ ಬೀಳುತ್ತೆ: ಈಶ್ವರಪ್ಪ

ಮೈತ್ರಿ ಸರಕಾರವನ್ನು ಬಿಜೆಪಿ ಬಿಳಿಸುವುದಿಲ್ಲ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಅತೃಪ್ತ ಶಾಸಕರೇ ಈ ಕೆಲಸ ಮಾಡಲಿದ್ದಾರೆ. ಕಾದು ನೋಡಿ, ನಾಲ್ಕು ದಿನಗಳಲ್ಲಿ ಮೈತ್ರಿ ಸರಕಾರ ಬೀಳಲಿದೆ ಎಂದು ಶಾಸಕ ಕೆ.ಎಸ್‌. ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.

Vijaya Karnataka 11 Feb 2019, 5:00 am
ಶಿವಮೊಗ್ಗ : ಮೈತ್ರಿ ಸರಕಾರವನ್ನು ಬಿಜೆಪಿ ಬಿಳಿಸುವುದಿಲ್ಲ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಅತೃಪ್ತ ಶಾಸಕರೇ ಈ ಕೆಲಸ ಮಾಡಲಿದ್ದಾರೆ. ಕಾದು ನೋಡಿ, ನಾಲ್ಕು ದಿನಗಳಲ್ಲಿ ಮೈತ್ರಿ ಸರಕಾರ ಬೀಳಲಿದೆ ಎಂದು ಶಾಸಕ ಕೆ.ಎಸ್‌. ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.
Vijaya Karnataka Web SMG-1002-2-15-10SMG3


ನಗರದಲ್ಲಿ ನಾನಾ ಕಾಮಗಾರಿಗಳನ್ನು ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌, ಜೆಡಿಎಸ್‌ ಶಾಸಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿಫಲರಾಗಿದ್ದಾರೆ. ತಮ್ಮ ವೈಫಲ್ಯ ಮುಚ್ಚಿಡುವುದಕ್ಕಾಗಿ ಬಿಜೆಪಿಯ ಮೇಲೆ ಸುಮ್ಮನೆ ಆರೋಪಗಳನ್ನು ಹೋರಿಸಲಾಗುತ್ತಿದೆ ಎಂದರು.

'ಒಂದು ಸಲ, ಆಡಿಯೊ ಬಿಎಸ್‌ವೈ ಅವರದ್ದಲ್ಲ ಎಂದಾದರೆ ರಾಜೀನಾಮೆ ಕೊಡುತ್ತೇನೆ' ಎನ್ನುತ್ತಾರೆ. ಇನ್ನೊಂದೆಡೆ ಅದು ಬಿಎಸ್‌ವೈ ಅವರ ಆಡಿಯೊ ಅಂತ ನಾನು ಹೇಳಿಯೇ ಇಲ್ಲವೆಂದು ಹೇಳಿದ್ದಾರೆ. ಹೀಗೆ, ಅವರ ಹೇಳಿಕೆಗಳಲ್ಲಿಯೇ ದ್ವಂದ್ವ ಇದೆ. ಇಂತಹ ಮುಖ್ಯಮಂತ್ರಿಯನ್ನು ರಾಜ್ಯದ ಜನ ಇದುವರೆಗೆ ನೋಡಿಲ್ಲ. ಈ ರೀತಿ ಭಿನ್ನ ಹೇಳಿಕೆಗಳನ್ನು ನೀಡಿ ಜನರ ದಾರಿ ತಪ್ಪಿಸುವ ಸಿಎಂ ರಾಜ್ಯಕ್ಕೆ ಬೇಡ. ರಾಜ್ಯದ ಜನ ಕಾಂಗ್ರೆಸ್‌ನವರನ್ನು ನಂಬಲ್ಲ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಅವರು ದಿಲ್ಲಿಯಲ್ಲಿ ಸುದ್ದಿಗೋಷ್ಠಿ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್‌ ನಾಯಕರಾದ ಬಸವರಾಜ್‌ ರಾಯರೆಡ್ಡಿ, ಸೋಮಶೇಖರ್‌ ಕಳೆದ ಎಂಟು ತಿಂಗಳಿಂದ ಏನೂ ಕೆಲಸವಾಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಪಕ್ಷದವರೇ ಈ ರೀತಿ ಹೇಳುತ್ತಿರುವಾಗ ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಬಿಜೆಪಿ ಶಾಸಕರು ಹುಲಿ ಮರಿ:

ಬಿಜೆಪಿಯ 104 ಜನ ಶಾಸಕರು ಹುಲಿಮರಿಗಳಿದ್ದಂತೆ. ಅವರನ್ನು ಯಾರೂ ಮುಟ್ಟುವುದಕ್ಕೆ ಸಾಧ್ಯವಿಲ್ಲ. ಪಕ್ಷ ಹಾಗೂ ವರಿಷ್ಠರ ಬಗ್ಗೆ ಎಲ್ಲರಿಗೂ ಗೌರವವಿದೆ. ಆದರೆ, ಕಾಂಗ್ರೆಸ್‌, ಜೆಡಿಎಸ್‌ನವರು ಇಲ್ಲಸಲ್ಲದ ಆರೋಪಗಳನ್ನು ಮಾಡುವುದನ್ನು ಬಿಟ್ಟು ಜನರಿಗೆ ಉತ್ತಮ ಆಡಳಿತ ನೀಡುವತ್ತ ಗಮನ ಹರಿಸಬೇಕು ಎಂದು ಹೇಳಿದರು.

===========
ವಿವಿಧ ಕಾಮಗಾರಿಗಳಿಗೆ ಚಾಲನೆ

ನಗರದ ವಿವಿಧ ಕಾಮಗಾರಿಗಳಿಗೆ ಶಾಸಕ ಕೆ.ಎಸ್‌. ಈಶ್ವರಪ್ಪ ಅವರು ಭಾನುವಾರ ಗುದ್ದಲಿ ಪೂಜೆ ನೆರವೇರಿಸಿದರು.

ಅಶೋಕ ರಸ್ತೆ, ಕುಂಬಾರಗುಂಡಿ ದೇವಸ್ಥಾನದ ಮಹಾದ್ವಾರ ಉದ್ಘಾಟನೆ, ಕೆಎಸ್‌ಆರ್‌ಟಿಸಿ ಡಿಪೊ ಎದುರು ಭಾಗದ ರಸ್ತೆ ಕಾಮಗಾರಿ, ಶರಾವತಿ ನಗರ ಬ್ಲಾಕ್‌ನ ಐದನೇ ತಿರುವು, ವಿನೋಬ ನಗರದ ಶಿವಾಲಯ ಎದುರು ಭಾಗದ ರಸ್ತೆ ಕಾಮಗಾರಿಗೆ ಚಾಲನೆ, ವಿನೂಬನಗರದ ಇ-ಬ್ಲಾಕ್‌ ಮಾಧವ ನೆಲೆ ಹತ್ತಿರ, ಬೊಮ್ಮನಕಟ್ಟೆಯ ಡಿ ಬ್ಲಾಕ್‌ನ ರಸ್ತೆ ಕಾಮಗಾರಿ ಗುದ್ದಲಿ ಪೂಜೆ ನೆರವೇರಿಸಿದರು.

ಬಿಜೆಪಿ ನಗರಾಧ್ಯಕ್ಷ ಎನ್‌.ಜಿ.ನಾಗರಾಜ್‌, ಮಹಾನಗರ ಪಾಲಿಕೆ ಮೇಯರ್‌ ಲತಾ ಗಣೇಶ್‌ ಉಪ ಮೇಯರ್‌ ಎಸ್‌.ಎನ್‌.ಚನ್ನಬಸಪ್ಪ, ಪಾಲಿಕೆ ಸದಸ್ಯರಾದ ಎಸ್‌.ಜ್ಞಾನೇಶ್ವರ್‌ ಇತರರಿದ್ದರು.

============

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ