ಆ್ಯಪ್ನಗರ

ಸ್ವಾರ್ಥಕ್ಕಾಗಿ ಮೈತ್ರಿ ಸರಕಾರ: ವಿಜಯೇಂದ್ರ ಟೀಕೆ

ಸ್ವಾರ್ಥಕ್ಕಾಗಿ ಕಾಂಗ್ರೆಸ್‌, ಕುಟುಂಬಕ್ಕಾಗಿ ಜೆಡಿಎಸ್‌ ಸಮ್ಮಿಶ್ರ ಸರಕಾರ ರಚಿಸಿಕೊಂಡು ಆಡಳಿತ ನಡೆಸುತ್ತಿವೆ. ಜನರು ಸಾರಾ ಸಗಟಾಗಿ ಇವರನ್ನು ತಿರಸ್ಕರಿಸಿದ್ದು ರಾಜ್ಯ, ಜಿಲ್ಲೆ ಹಾಗೂ ತಾಲೂಕಿನಲ್ಲಿ ಯಡಿಯೂರಪ್ಪನವರು ಮಾಡಿದ ಅಭಿವೃದ್ಧಿ ಕಾರ್ಯಗಳೇ ಬಿಜೆಪಿಯನ್ನು ಕೈಹಿಡಿಯುತ್ತದೆ ಎಂದು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ತಿಳಿಸಿದರು.

Vijaya Karnataka 28 Mar 2019, 5:00 am
ಆನವಟ್ಟಿ : ಸ್ವಾರ್ಥಕ್ಕಾಗಿ ಕಾಂಗ್ರೆಸ್‌, ಕುಟುಂಬಕ್ಕಾಗಿ ಜೆಡಿಎಸ್‌ ಸಮ್ಮಿಶ್ರ ಸರಕಾರ ರಚಿಸಿಕೊಂಡು ಆಡಳಿತ ನಡೆಸುತ್ತಿವೆ. ಜನರು ಸಾರಾ ಸಗಟಾಗಿ ಇವರನ್ನು ತಿರಸ್ಕರಿಸಿದ್ದು ರಾಜ್ಯ, ಜಿಲ್ಲೆ ಹಾಗೂ ತಾಲೂಕಿನಲ್ಲಿ ಯಡಿಯೂರಪ್ಪನವರು ಮಾಡಿದ ಅಭಿವೃದ್ಧಿ ಕಾರ್ಯಗಳೇ ಬಿಜೆಪಿಯನ್ನು ಕೈಹಿಡಿಯುತ್ತದೆ ಎಂದು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ತಿಳಿಸಿದರು.
Vijaya Karnataka Web SMR-27 AVT P1


ಗ್ರಾಮದ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ಸಮ್ಮಿಶ್ರ ಸರಕಾರ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ಮಾಡುವುದನ್ನು ಬಿಟ್ಟರೆ, ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಿಲ್ಲ. ಮಧು ಬಂಗಾರಪ್ಪ ಚುನಾವಣೆಯಲ್ಲಿ ಸೋತ ನಂತರ ತಾಲೂಕಿನತ್ತ ತಲೆ ಹಾಕಿಲ್ಲ, ಇವರಿಗೆ ತಮ್ಮ ಅಧಿಕಾರ ಮುಖ್ಯವಾಯಿತೇ ಹೊರತು ಜನರ ಬೇಗುದಿ ಅರ್ಥವಾಗಲಿಲ್ಲ. ಇಂತವರಿಂದ ತಾಲೂಕಿನ ಅಭಿವೃದ್ಧಿ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.

ಶಾಸಕ ಕುಮಾರ್‌ ಬಂಗಾರಪ್ಪ ಮಾತನಾಡಿ ಭೂಮಿ, ನೀರಾವರಿ, ವಿದ್ಯುತ್‌ ಮುಂತಾದ ಮೂಲ ಸೌಕರ್ಯಗಳು ಸಮರ್ಪಕವಾಗಿ ದೊರೆಯದೆ ಉದ್ಯೋಗಕ್ಕಾಗಿ ಯುವಕರು ಪಟ್ಟಣಗಳತ್ತ ಮುಖಮಾಡುತ್ತಿದ್ದಾರೆ. ಯುವಕರಿಗೆ ಅಗತ್ಯ ಸೌಲಭ್ಯ ದೊರಕಿಸಿ ಸ್ಥಳೀಯವಾಗಿ ಉದ್ಯೋಗ ಮಾಡಲು ಪ್ರಧಾನಿ ಮೋದಿ ಅವರು ಹಲವಾರು ಯೋಜನೆಗಳನ್ನು ರೂಪಿಸಿದ್ದಾರೆ ಎಂದರು.

ಮಾಜಿ ಶಾಸಕ ಮಧುಬಂಗಾರಪ್ಪ ಅವರು ತಾಲೂಕಿಗೆ ಪ್ಯಾಕೇಜ್‌ ತಂದಿದ್ದೇನೆ ಎಂದು ಜನರಿಗೆ ಮರೆಮಾಚುತ್ತಿದ್ದಾರೆ. ಬಹುಶಃ ಟೂರ್‌ ಪ್ಯಾಕೇಜ್‌ ಎಂದು ತಿಳಿದುಕೊಂಡಿರಬೇಕು. ಬಿಎಸ್‌ವೈ, ಬಿವೈಆರ್‌ ಹಾಗೂ ತಮ್ಮ ಪ್ರಯತ್ನದ ಫಲವಾಗಿ ನೀರಾವರಿ ಯೋಜನೆಗಳು ಮಂಜೂರಾಗಿವೆ. ಇದಕ್ಕೆ ಬಜೆಟ್‌ ನಲ್ಲಿ ನಮೂದಾಗಿರುವ ಪ್ರತಿ ಕೂಡ ನೀಡುತ್ತೇವೆ. ಚುನಾವಣೆಯಲ್ಲಿ ಸೋತ ನಂತರ ತಾಲೂಕಿನತ್ತ ತಲೆ ಹಾಕದ ಇವರು ಯಾವ ಪ್ಯಾಕೇಜ್‌ ತರಲು ಸಾಧ್ಯ ಎಂದು ಟೀಕಿಸಿದರು.

ಬಿಜೆಪಿ ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ಭವಾನಿ ರಾವ್‌ ಮೊರೆ ಮಾತನಾಡಿದರು. ರಾಜ್ಯ ಯುವ ಘಟಕ ಉಪಾಧ್ಯಕ್ಷ ತಮ್ಮೇಶ್‌ಗೌಡ, ನಿರಂಜನ್‌, ಎ.ಎಲ್‌.ಅರವಿಂದ, ಭಾರತಿ ಶೆಟ್ಟಿ, ಹನುಮಂತಪ್ಪ ಹೊಸಳ್ಳಿ, ಪುರುಷೋತ್ತಮ್‌, ಪಾಣಿರಾಜಪ್ಪ, ಜಿ.ಪಂ. ಮಾಜಿ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್‌, ಎಂ.ಆರ್‌. ಪಾಟೀಲ್‌, ಅಭಿಷೇಕ್‌ ಗೌಡ ಬೆನ್ನೂರು, ಶಿವರುದ್ರಗೌಡ, ಎಂ.ನಾಗಪ್ಪ, ಉಮೇಶ್‌ ಉಡುಗಣಿ, ಶಿವರಾಜ ಗೌಡ ತುಮ್ರಿಕೊಪ್ಪ ಮತ್ತಿತರರು ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ