ಆ್ಯಪ್ನಗರ

ಕಾಲರಾಕ್ಕೆ ಗ್ರಾ.ಪಂ. ಆಧ್ಯಕ್ಷ ಬಲಿ

ಭದ್ರಾವತಿ ತಾಲೂಕಿನ ಮೈದೊಳಲು ಗ್ರಾಮದಲ್ಲಿ ಕಾಣಿಸಿಕೊಂಡಿರುವ ಕಾಲರಾ ರೋಗಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜಪ್ಪ (50) ಬಲಿಯಾಗಿದ್ದಾರೆ

Vijaya Karnataka Web 15 Feb 2018, 1:01 pm
ಶಿವಮೊಗ್ಗ: ಭದ್ರಾವತಿ ತಾಲೂಕಿನ ಮೈದೊಳಲು ಗ್ರಾಮದಲ್ಲಿ ಕಾಣಿಸಿಕೊಂಡಿರುವ ಕಾಲರಾ ರೋಗಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜಪ್ಪ (50) ಬಲಿಯಾಗಿದ್ದು, ಮೃತರ ಸಂಖ್ಯೆ ಐದಕ್ಕೆ ಏರಿದೆ.
Vijaya Karnataka Web colora gram panchayat president died
ಕಾಲರಾಕ್ಕೆ ಗ್ರಾ.ಪಂ. ಆಧ್ಯಕ್ಷ ಬಲಿ


ಕಳೆದ ನಾಲ್ಕು ದಿವಸದಿಂದ ಕಾಣಿಸಿಕೊಂಡಿರುವ ಕಾಲರಾದಿಂದ ಗ್ರಾಮದ 54 ಮಂದಿ ಈಗಾಗಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊರರೋಗಿಯಾಗಿ ಚಿಕಿತ್ಸೆ ಪಡೆದಿದ್ದ ಮಂಜಪ್ಪ ಅವರು ಬುಧವಾರ ಮನೆಗೆ ತೆರಳಿದ್ದರು. ರಾತ್ರಿ ಮತ್ತೆ ವಾಂತಿ ಹೆಚ್ಚಾಗಿದ್ದರಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಗಿನ ಜಾವ ವೃತಪಟ್ಟಿದ್ದಾರೆ.

ಮೈದೊಳಲು ವಾಂತಿಭೇದಿಗೆ ಕಾರಣ ಕಾಲರ

ಊರಿನಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ನಿರ್ಲಕ್ಷ್ಯ ವಹಿಸಿದ ಗ್ರಾಮ ಪಂಚಾಯಿತಿ ಪಿಡಿಒ ಜಿ.ರಮೇಶ್‌ ಅವರನ್ನು ಅಮಾನತುಗೊಳಿಸಲಾಗಿದೆ. ನೀರುಗಂಟಿಯನ್ನು ಬದಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್‌ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.

ನೀರಿನ ವ್ಯವಸ್ಥೆ ಬದಲಾವಣೆ:

ಪಂಚಾಯಿತಿ ಪೂರೈಕೆ ಮಾಡುವ ನಲ್ಲಿ ನೀರನ್ನು ಹಲವೆಡೆ ಸ್ಯಾಂಪಲ್‌ ತೆಗೆದು ಪರೀಕ್ಷೆಗೆ ಒಳಪಡಿಸಿದಾಗ 7 ಕಡೆ ನೀರಿನಲ್ಲಿ ಮಲ ಸೇರಿರುವುದು ದೃಢಪಟ್ಟಿದೆ. ಚರಂಡಿ, ಪೈಪ್‌ ಸೋರಿಕೆಯಾಗುವ ಜಾಗದಲ್ಲಿ ನೀರು ನಿಂತು ಅದರಲ್ಲಿ ಕೊಳಚೆ ಸೇರಿ ನೀರು ಪೂರೈಕೆ ಸ್ಥಗಿತಗೊಳಿಸಿದಾಗ ಪೈಪ್‌ನೊಳಗೆ ಕೊಳಚೆ ನೀರು ಹೋಗಿ ಶುದ್ಧ ನೀರಿನೊಂದಿಗೆ ಮನೆಗಳಿಗೆ ಪೂರೈಕೆಯಾಗುತ್ತಿರುವುದು ದೃಢಪಟ್ಟಿದೆ. ಪಂಚಾಯಿತಿ ಆಡಳಿತವು ಪೈಪ್‌ ದುರಸ್ತಿ ಮಾಡದೆ ನಿರ್ಲಕ್ಷ್ಯ ವಹಿಸಿರುವುದು ಕಂಡು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ