ಆ್ಯಪ್ನಗರ

ಸಹಕಾರಿ ಸಂಘದಿಂದ ಸಮುದಾಯದ ಅಭಿವೃದ್ಧಿ

ಸ್ತ್ರೀಶಕ್ತಿ, ಸ್ವಸಹಾಯ ಸಂಘ, ರೈತರು ಸೇರಿ ಸಮುದಾಯದ ಅಭಿವೃದ್ಧಿಗೆ ಸಹಕಾರಿ ಸಂಘಗಳ ಕೊಡುಗೆ ಶ್ಲಾಘನೀಯ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

Vijaya Karnataka 11 Sep 2019, 5:00 am
ಶಿಕಾರಿಪುರ: ಸ್ತ್ರೀಶಕ್ತಿ, ಸ್ವಸಹಾಯ ಸಂಘ, ರೈತರು ಸೇರಿ ಸಮುದಾಯದ ಅಭಿವೃದ್ಧಿಗೆ ಸಹಕಾರಿ ಸಂಘಗಳ ಕೊಡುಗೆ ಶ್ಲಾಘನೀಯ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
Vijaya Karnataka Web 10SKP2_46


ಪಟ್ಟಣದಲ್ಲಿಸೋಮವಾರ ಬನುಮಯ್ಯ ಪತ್ತಿನ ಸಹಕಾರಿ ಸಂಘದ 7ನೇ ವಾರ್ಷಿಕ ಮಹಾಸಭೆಯಲ್ಲಿಅವರು ಮಾತನಾಡಿದರು. ಸದಸ್ಯರು ಸಹಕಾರಿ ಸಂಘದೊಂದಿಗೆ ಹೆಚ್ಚೆಚ್ಚು ವ್ಯವಹರಿಸುವ ಮೂಲಕ ಸಹಕಾರಿ ಕ್ಷೇತ್ರ ಮತ್ತಷ್ಟು ಬಲಪಡಿಸಬೇಕು. ಅದಕ್ಕಾಗಿ ಎಲ್ಲರೂ ಚಿಂತಿಸಬೇಕು ಎಂದರು.

ಗ್ರಾಮೀಣ ಪ್ರದೇಶದ ಸಹಕಾರಿ ಸಂಸ್ಥೆಗಳು ಇದೀಗ ಗೊಬ್ಬರ, ಬೀಜ, ಕೃಷಿ ಪರಿಕರ ರಿಯಾಯಿತಿ ದರದಲ್ಲಿರೈತರಿಗೆ ವಿತರಿಸುವ ಕೆಲಸವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ತಾಲೂಕಿನ ಸಹಕಾರಿ ಕ್ಷೇತ್ರ ರಾಜ್ಯದಲ್ಲೆಉತ್ತಮ ಹೆಸರು ಹೊಂದಿದ್ದು ಇಲ್ಲಿನ ಸಹಕಾರಿ ಧುರೀಣರು ರಾಜ್ಯ, ರಾಷ್ಟ್ರ ಮಟ್ಟದಲ್ಲಿಗುರುತಿಸಿಕೊಂಡು ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಎಂ.ಬಿ.ಚನ್ನವೀರಪ್ಪ ಮಾತನಾಡಿ, ಸಹಕಾರಿ ಸಂಘಗಳು ಸದಸ್ಯರ ಆರ್ಥಿಕ ಚಟುವಟಿಕೆಯಲ್ಲಿಸಂಜೀವಿನಿಯಾಗಿ ಕೆಲಸ ಮಾಡುತ್ತಿವೆ. ಸಕಾಲಕ್ಕೆ ಜನತೆಯ ಅಗತ್ಯ ಪೂರೈಸುವ ಸಹಕಾರಿ ಸಂಸ್ಥೆಗಳು ಬಡವರು, ರೈತರಿಗೆ ದುಬಾರಿ ಬಡ್ಡಿದರ ಪಡೆಯುವುದರಿಂದ ರಕ್ಷಿಸಿವೆ. ಸರಕಾರದ ಸೌಲಭ್ಯವೂ ಸದಸ್ಯರಿಗೆ ತಲುಪಿಸುತ್ತಿವೆ. ಸದಸ್ಯರು ಸಂಘದಲ್ಲಿಸಾಲ ಪಡೆದ ಉದ್ದೇಶಕ್ಕೆ ಹಣ ಬಳಸಿಕೊಳ್ಳಬೇಕು. ಆಗ ಸಂಘದ ಅಭಿವೃದ್ಧಿಯೂ ಸಾಧ್ಯವಾಗುತ್ತದೆ ಎಂದರು.

ಸಂಘದ ಅಧ್ಯಕ್ಷ ಜಿ.ಸಿ.ಜಗದೀಶ್‌ ಅಧ್ಯಕ್ಷತೆ ವಹಿಸಿದ್ದರು. ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ, ಎಚ್‌.ಜಿ.ಪರಮೇಶ್ವರಪ್ಪ, ಉಪಾಧ್ಯಕ್ಷ ವೀರಪ್ಪ, ನಿರ್ದೇಶಕ ಎನ್‌.ರಾಜಪ್ಪ, ದಿಲೀಪ್‌ಕುಮಾರ್‌, ಕಾರ‍್ಯದರ್ಶಿ ನರಸಿಂಹಮೂರ್ತಿ, ಜಿ.ಪಂ. ಮಾಜಿ ಉಪಾಧ್ಯಕ್ಷ ಎನ್‌.ಅರುಣ್‌, ಕೆ.ಪಿ.ರುದ್ರಪ್ಪ ಮತ್ತಿತರರು ಇದ್ದರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ