ಆ್ಯಪ್ನಗರ

ಜ್ಞಾನದೀಪ ಶಾಲೆಯಿಂದ ‘ಕಮ್ಯೂನಿಟಿ ಸರ್ವಿಸ್‌’

​ನಗರದ ಜ್ಞಾನದೀಪ ವಿದ್ಯಾ ಸಂಸ್ಥೆಯು ಅರ್ಥಪೂರ್ಣ 'ಕಮ್ಯೂನಿಟಿ ಸರ್ವಿಸ್‌' ಕಾರ್ಯಕ್ರಮ ಆಯೋಜಿಸಿತ್ತು.

Vijaya Karnataka 15 Sep 2019, 5:00 am
ಶಿವಮೊಗ್ಗ: ನಗರದ ಜ್ಞಾನದೀಪ ವಿದ್ಯಾ ಸಂಸ್ಥೆಯು ಅರ್ಥಪೂರ್ಣ 'ಕಮ್ಯೂನಿಟಿ ಸರ್ವಿಸ್‌' ಕಾರ್ಯಕ್ರಮ ಆಯೋಜಿಸಿತ್ತು. ಮಕ್ಕಳು ಸಮಾಜದೊಂದಿಗೆ ಬೆರೆಯುವುದರೊಂದಿಗೆ ಇಲ್ಲಿಯ ಆಗುಹೋಗುಗಳನ್ನು ಅರಿತುಕೊಳ್ಳಬೇಕು. ಈ ನಿಟ್ಟಿನಲ್ಲಿಪೂರಕ ವೇದಿಕೆ ಅಗತ್ಯ ಇರುವುದರಿಂದ ಸಮುದಾಯ ಸೇವೆ ಎಂಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರ ಭಾಗವಾಗಿ, 1ರಿಂದ 4ನೇ ತರಗತಿ ವಿದ್ಯಾರ್ಥಿಗಳನ್ನು ವಿವಿಧ ಸಂಸ್ಥೆಗಳಿಗೆ ಭೇಟಿ ನೀಡುವುದು, ಒಂದನೇ ತರಗತಿಯವರು 'ಜೀವನ ಸಂಜೆ' ವೃದ್ಧಾಶ್ರಮ, ಎರಡನೇ ತರಗತಿಯವರು ತಾಯಿಮನೆ, ಮೂರನೇ ತರಗತಿಯವರು ಶ್ರೀ ಶಾರದಾದೇವಿ ಅಂಧರ ವಿಕಾಸ ಕೇಂದ್ರ ಹಾಗೂ ನಾಲ್ಕನೇ ತರಗತಿಯವರು ಆಶಾಕಿರಣ ಸಂಸ್ಥೆಗಳಿಗೆ ಭೇಟಿ ನೀಡಿದರು.
Vijaya Karnataka Web 230213SMG8082152


ಆವರಣ ಸ್ವಚ್ಛ ಮಾಡುವುದರೊಂದಿಗೆ ಆರಂಭಗೊಂಡು, ಅಲ್ಲಿನ ಎಲ್ಲಸದಸ್ಯರಿಗೆ ಶುಭಾಶಯ ಪತ್ರ ನೀಡಿದರು. ಎರಡು ಗಂಟೆ ಅವರೊಂದಿಗಿದ್ದು, ಕೆಲವು ಮಕ್ಕಳು ಭವಿಷ್ಯದ ಕನಸುಗಳನ್ನು ಹಂಚಿಕೊಂಡರು. ಮುಖ್ಯಶಿಕ್ಷಕರಾದ ವಾಣಿ ಕೃಷ್ಣಪ್ರಸಾದ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ