ಆ್ಯಪ್ನಗರ

‘ಸಂಘಟಿತವಾದರೆ ಸಮಾಜ ಬಲಿಷ್ಟ’

ಶೋಷಿತ ವರ್ಗಗಳಲ್ಲಿ ಶಿಕ್ಷ ಣ ಜ್ಞಾನ ಮೂಡಬೇಕು. ಸಾಮಾಜಿಕ, ಶೈಕ್ಷ ಣಿಕ, ಆರ್ಥಿಕವಾಗಿ ಬಲಿಷ್ಟರಾಗಬೇಕಾದರೆ ಸಂಘಟಿತರಾಗಬೇಕೆಂದು ಸೊರಬ ತಾಲೂಕಿನ ಮಡಿವಾಳ ಸಂಘದ ಅಧ್ಯಕ್ಷ ರಾಜು ತಲ್ಲೂರು ಹೇಳಿದರು.

Vijaya Karnataka 25 Feb 2019, 5:00 am
ಶಿವಮೊಗ್ಗ: ಶೋಷಿತ ವರ್ಗಗಳಲ್ಲಿ ಶಿಕ್ಷ ಣ ಜ್ಞಾನ ಮೂಡಬೇಕು. ಸಾಮಾಜಿಕ, ಶೈಕ್ಷ ಣಿಕ, ಆರ್ಥಿಕವಾಗಿ ಬಲಿಷ್ಟರಾಗಬೇಕಾದರೆ ಸಂಘಟಿತರಾಗಬೇಕೆಂದು ಸೊರಬ ತಾಲೂಕಿನ ಮಡಿವಾಳ ಸಂಘದ ಅಧ್ಯಕ್ಷ ರಾಜು ತಲ್ಲೂರು ಹೇಳಿದರು.
Vijaya Karnataka Web SMR-24ganesh1


ನಗರದ ಅಂಬೇಡ್ಕರ್‌ ಭವನದಲ್ಲಿ ಭಾನುವಾರ ಜಿಲ್ಲಾ ಮಡಿವಾಳ ನೌಕರರ ಸಂಘ ಆಯೋಜಿಸಿದ್ದ ವಧು-ವರರ ಅನ್ವೇಷಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸಮಾಜದಲ್ಲಿ ನಮ್ಮ ಹಕ್ಕುಗಳನ್ನು ಪಡೆಯಲು ಸಂಘಟನೆಗಳು ಸಹಕಾರಿ ಎಂದರು.

ಸಣ್ಣ ಸಣ್ಣ ಸಮಾಜಗಳು ಇಂದು ಸಂಘಟನೆಯಾಗುವುದು ಬಹಳ ಕಷ್ಟ. ಈ ರೀತಿಯ ಸಣ್ಣ ಸಮಾಜಗಳ ಜನರು ಅನೇಕ ರೀತಿಯ ಕಷ್ಟಗಳನ್ನು ಎದುರಿಸುತ್ತಾ ಸಮಾಜದಲ್ಲಿ ಶೋಷಣೆಗೆ ಒಳಗಾಗುತ್ತಾ ಜೀವಿಸುತ್ತಿದ್ದಾರೆ. ಅಲ್ಲದೇ ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಇದಕ್ಕೆ ಸಂಘಟನೆ ಕೊರತೆಯೇ ಕಾರಣ ಎಂದು ಹೇಳಿದರು.

ಅಧ್ಯಕ್ಷ ತೆ ವಹಿಸಿದ್ದ ಜಿಲ್ಲಾ ಮಡಿವಾಳ ನೌಕರರ ಸಂಘದ ಅಧ್ಯಕ್ಷ ಜಿ.ಅಶೋಕ್‌ಕುಮಾರ್‌, ಕಳೆದ ಬಾರಿ ನಮ್ಮ ಸಂಘದಿಂದ ಹಮ್ಮಿಕೊಂಡಿದ್ದ ಮೊದಲನೇ ವರ್ಷದ ವಧು-ವರರ ಸಮಾವೇಶ ಯಶಸ್ವಿಯಾಗಿತ್ತು. ಸಮಾಜದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 80ಕ್ಕೂ ಹೆಚ್ಚು ಜನರು ನೋಂದಣಿ ಮಾಡಿಸಿ 17 ಜೋಡಿಗಳಿಗೆ ವಿವಾಹವಾಗಿತ್ತು. ಹಾಗಾಗಿ ಈ ಬಾರಿಯೂ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಉತ್ತಮ ಬೆಂಬಲ ವ್ಯಕ್ತವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮುಖ್ಯ ಲೆಕ್ಕಾಧಿಕಾರಿ ಮಹಾಂತೇಶ್‌ , ಜಿಲ್ಲಾ ಮಡಿವಾಳ ನೌಕರರ ಸಂಘದ ಮುಖಂಡರಾದ ವೈ.ಕೆ.ನರಸಿಂಹಯ್ಯ, ಎನ್‌.ಲಪರಸಪ್ಪ, ಮಧುಕುಮಾರ್‌ ಎಂ.ಎನ್‌.ಹನುಮಂತ ಎಂ. ಮಗದೂರ, ಗೋಪಾಲ್‌ ಕೆ.ವಿ., ಬಸವರಾಜಪ್ಪ, ರಾಜಶೇಖರ್‌, ಪುರುಷೋತ್ತಮ್‌ ಮತ್ತಿತರರು ಇದ್ದರು.


ಮಡಿವಾಳ ಸಮಾಜದ ನೌಕರರು ಸೇರಿ ಸಂಘಟನೆ ಮಾಡಿರುವುದು ಒಳ್ಳೆಯದು. ಅನುಕೂಲವಾಗಿರುವವರು ಸಮಾಜದಲ್ಲಿ ಹಿಂದುಳಿದವರ ಸಬಲೀಕರಣಕ್ಕೆ ಶ್ರಮಿಸಬೇಕು. ಮಡಿವಾಳರು ಸಂಘಟಿತರಾದರೆ ಸಮಾಜ ಅಭಿವೃದ್ಧಿ ಜತೆ ಮೂಲಭೂತ ಹಕ್ಕು ಪಡೆಯಬಹುದು. ಆಗ ಎಲ್ಲರೂ ನಮ್ಮ ಬಳಿ ಬರುತ್ತಾರೆ, ನಾವು ಯಾರ ಬಳಿಯೂ ಹೋಗುವ ಅವಶ್ಯಕತೆ ಇರುವುದಿಲ್ಲ .

-ರಾಜು ತಲ್ಲೂರು




ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ