ಆ್ಯಪ್ನಗರ

ಚರ್ಚ್ ಪಾದ್ರಿ ವಿರುದ್ಧ ದೂರು ದಾಖಲು

ಪಾದ್ರಿಯೊಬ್ಬ ವಿವಾಹಿತ ಮಹಿಳೆಗೆ ಮದುವೆ ಆಗುವುದಾಗಿ ನಂಬಿಸಿ ವಂಚನೆ ಮಾಡಿರುವ ಘಟನೆ ನಗರದಲ್ಲಿನಡೆದಿದೆ.

Vijaya Karnataka 30 Aug 2019, 5:00 am
ಶಿವಮೊಗ್ಗ: ಪಾದ್ರಿಯೊಬ್ಬ ವಿವಾಹಿತ ಮಹಿಳೆಗೆ ಮದುವೆ ಆಗುವುದಾಗಿ ನಂಬಿಸಿ ವಂಚನೆ ಮಾಡಿರುವ ಘಟನೆ ನಗರದಲ್ಲಿನಡೆದಿದೆ.
Vijaya Karnataka Web complaint against church pastor
ಚರ್ಚ್ ಪಾದ್ರಿ ವಿರುದ್ಧ ದೂರು ದಾಖಲು


ರಾಗಿಗುಡ್ಡ ಚರ್ಚ್ನ ಪಾದ್ರಿಯೊಬ್ಬರು ಮಹಿಳೆಗೆ ಮೋಸ ಮಾಡಿರುವುದಾಗಿ ಮಹಿಳಾ ಪೊಲೀಸ್‌ ಠಾಣೆಯಲ್ಲಿದೂರು ದಾಖಲಾಗಿದೆ.

ಪತಿಯೊಂದಿಗೆ ಸಂಸಾರದಲ್ಲಿವಿರಸವಿದ್ದು, ಮಾರ್ಗದರ್ಶನ ಕೋರಿ ಬಂದಿದ್ದ ಮಹಿಳೆಯೊಂದಿಗೆ ಪಾದ್ರಿಯೇ ಸಂಬಂಧ ಬೆಳೆಸಿದ್ದಲ್ಲದೇ ಮದುವೆ ಆಗುವುದಾಗಿ ಮೋಸ ಮಾಡಿರುವುದಾಗಿ ಮೋಸಕ್ಕೆ ಒಳಗಾದ ಮಹಿಳೆ ದೂರು ನೀಡಿದ್ದಾರೆ.

ಏನಿದು ಪ್ರಕರಣ: ಮದುವೆಯಾದ ಎರಡು ವರ್ಷಗಳಲ್ಲಿಸಂಸಾರದಲ್ಲಿಒಡಕು ಉಂಟಾಗಿದ್ದು, ಮಹಿಳೆಯು ತಾವು ನಂಬಿರುವ ಚರ್ಚ್ನ ಪಾದ್ರಿಯಲ್ಲಿಗೆ ಹೋಗುತ್ತಾಳೆ.

ಪಾದ್ರಿ ಅವರು ಗಂಡನಿಗೆ ಬುದ್ಧಿವಾದ ಹೇಳುವ ನೆಪದಲ್ಲಿಆಗಾಗ್ಗೆ ಮನೆಗೆ ಬರಲಾರಂಭಿಸುತ್ತಾರೆ. ನಂತರ, ಗಂಡ ಸೈಕೋ ಆಗಿದ್ದು, ಕೊಲೆ ಮಾಡುವುದಕ್ಕೂ ಮುಂದಾಗಬಹುದೆಂದು ಹೇಳುತ್ತಾನೆ. ನಂತರ, ಮಹಿಳೆಯೊಂದಿಗೆ ಸಲುಗೆ ಪಡೆದು ಇಬ್ಬರೂ ಚಿತ್ರದುರ್ಗ, ದಿಲ್ಲಿ, ಆಗ್ರಾ ಸೇರಿದಂತೆ ನಾನಾ ಕಡೆಗೆ ಸುತ್ತಾಡುತ್ತಾರೆ. ಬಳಿಕ, ಮದುವೆ ಆಗುವುದಕ್ಕೆ ಹಿಂದೇಟು ಹಾಕುತ್ತಾನೆ.

===

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ