ಆ್ಯಪ್ನಗರ

ಪಾಲಿಕೆಯ ಐವರು ಸದಸ್ಯರ ವಿರುದ್ಧ ದೂರು

ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಮಹಾನಗರ ಪಾಲಿಕೆಯ ಐವರು ಸದಸ್ಯರ ವಿರುದ್ಧ ಚುನಾವಣೆ ಆಯೋಗ ದೂರು ದಾಖಲಿಸಿದೆ.

Vijaya Karnataka 21 Oct 2018, 5:00 am
ಶಿವಮೊಗ್ಗ : ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಮಹಾನಗರ ಪಾಲಿಕೆಯ ಐವರು ಸದಸ್ಯರ ವಿರುದ್ಧ ಚುನಾವಣೆ ಆಯೋಗ ದೂರು ದಾಖಲಿಸಿದೆ.
Vijaya Karnataka Web complaint against five corporators
ಪಾಲಿಕೆಯ ಐವರು ಸದಸ್ಯರ ವಿರುದ್ಧ ದೂರು


ಪಾಲಿಕೆ ಸದಸ್ಯರಾದ ಚನ್ನಬಸಪ್ಪ, ಯೋಗೇಶ್‌, ನಾಗರಾಜ ಕಂಕಾರಿ, ಪ್ರಭಾಕರ್‌, ಜ್ಞಾನೇಶ್ವರ್‌ ಅವರ ಮೇಲೆ ಚುನಾವಣಾಧಿಕಾರಿ ಲೋಕೇಶ್‌ ಅವರು ಶನಿವಾರ ದೂರು ದಾಖಲಿಸಿದ್ದಾರೆ.

ಪಾಲಿಕೆ ವತಿಯಿಂದ ನಗರದ ಹಳೇ ಜೈಲು ಆವರಣದಲ್ಲಿ ಶುಕ್ರವಾರ ನಡೆಸಲಾದ ವಿಜಯದಶಮಿ ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿ ಈ ಐವರು ಪಾಲಿಕೆ ಸದಸ್ಯರು ತಾಲೂಕು ದಂಡಾಧಿಕಾರಿಗಳು ಬನ್ನಿ ಕಡಿದ ಬಳಿಕ ವೇದಿಕೆ ಮೇಲೆ ತೆರಳಿದ್ದರು. ವೇದಿಕೆ ಮೇಲೆ ನಿಂತು ಜನರಿಗೆ ಬನ್ನಿ ಹಂಚಿಕೆ ಮಾಡುತ್ತಿದ್ದರು.

ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ವೇಳೆಯಲ್ಲಿ ಸದಸ್ಯರ ಈ ಕ್ರಮ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಚುನಾಯಿತ ಪ್ರತಿನಿಧಿಗಳು ವೇದಿಕೆ ಮೇಲೆ ತೆರಳುವಂತಿಲ್ಲ. ಇದರ ಬಗ್ಗೆ ಮಾಹಿತಿ ಇದ್ದರೂ ವೇದಿಕೆ ಮೇಲೆ ಹೋಗಿ ನಿಯಮ ಉಲ್ಲಂಘಿಸಿದ್ದಾರೆ ಎಂದು ಜಯನಗರ ಪೊಲೀಸ್‌ ಠಾಣೆಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ