ಆ್ಯಪ್ನಗರ

ಶಿಕ್ಷ ಕರಿಲ್ಲದೆ ಮೂಲೆ ಸೇರಿದ ಕಂಪ್ಯೂಟರ್‌: ಆರೋಪ

ಕಾಗದ ನಗರದ ಸಮೀಪದ ಬೈಪಾಸ್‌ ರಸ್ತೆಯ ಸರಕಾರಿ ಪಶ್ಚಿಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾನಿಗಳು ನೀಡಿದ 3 ಕಂಪ್ಯೂಟರ್‌ಗಳು ಶಿಕ್ಷ ಕರಿಲ್ಲದೆ ಮೂಲೆ ಸೇರಿ ಧೂಳು ಹಿಡಿದಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ವೆಂಕಟೇಶ್‌ ಆರೋಪಿಸಿದ್ದಾರೆ.

Vijaya Karnataka 19 Jul 2019, 5:00 am
ಭದ್ರಾವತಿ: ಕಾಗದ ನಗರದ ಸಮೀಪದ ಬೈಪಾಸ್‌ ರಸ್ತೆಯ ಸರಕಾರಿ ಪಶ್ಚಿಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾನಿಗಳು ನೀಡಿದ 3 ಕಂಪ್ಯೂಟರ್‌ಗಳು ಶಿಕ್ಷ ಕರಿಲ್ಲದೆ ಮೂಲೆ ಸೇರಿ ಧೂಳು ಹಿಡಿದಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ವೆಂಕಟೇಶ್‌ ಆರೋಪಿಸಿದ್ದಾರೆ.
Vijaya Karnataka Web computer with impunity accused
ಶಿಕ್ಷ ಕರಿಲ್ಲದೆ ಮೂಲೆ ಸೇರಿದ ಕಂಪ್ಯೂಟರ್‌: ಆರೋಪ


ಶಿಕ್ಷ ಣದಿಂದ ಯಾರೂ ವಂಚಿತರಾಗಬಾರದೆಂದು ಸರಕಾರ ಮೂಲ ಸೌಲಭ್ಯ ನೀಡುತ್ತಿದೆ. ಸರಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಗೆ ವಿಶೇಷ ಕಾಳಜಿ ವಹಿಸುತ್ತಿದೆ. ಶಿಕ್ಷ ಕರು ಹಾಗೂ ಶಾಲಾಭಿವೃದ್ಧಿ ಸಮಿತಿ ಒಗ್ಗೂಡಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳ ದಾಖಲಾತಿಗೆ ಪೋಷಕರಲ್ಲಿ ಮನವಿ ಮಾಡುತ್ತಿರುವುದು ಸಹಜವಾಗಿದೆ. ಸ್ಥಳೀಯ ದಾನಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಾಲೆ ಶೈಕ್ಷ ಣಿಕಾಭಿವೃದ್ಧಿ ಮಾಡಬೇಕೆಂದು ಶಿಕ್ಷ ಣ ಇಲಾಖೆ ಮತ್ತು ಸರಕಾರ ಅನೇಕ ಯೋಜನೆ ಜಾರಿ ಮಾಡುತ್ತಿದೆ.

ಎರಡು ವರ್ಷದ ಹಿಂದೆ ನಗರದ ದಾನಿ ಪೊಲೀಸ್‌ ಉಮೇಶ್‌ ಅವರು ಈ ಶಾಲೆ ಮಕ್ಕಳ ಜ್ಞಾನಾರ್ಜನೆಗಾಗಿ 2 ಕಂಪ್ಯೂಟರ್‌ ದಾನವಾಗಿ ನೀಡಿದ್ದಾರೆ. ಕಂಪ್ಯೂಟರ್‌ ಶಿಕ್ಷ ಕರಿಲ್ಲದೆ, ಮಕ್ಕಳಿಗೆ ಕಲಿಸುವವರೂ ಇಲ್ಲದೆ ಕಂಪ್ಯೂಟರ್‌ ಧೂಳು ಹಿಡಿದು ಮೂಲೆಗುಂಪಾಗಿವೆ. ಶಾಲೆಯಲ್ಲಿ ಕಂಪ್ಯೂಟರ್‌ ಜ್ಞಾನ ಹೊಂದಿರುವ ಶಿಕ್ಷ ಕರು ಇದ್ದರೂ ಮಕ್ಕಳಿಗೆ ಮೋಸ ಮಾಡುತ್ತಿದ್ದಾರೆ ಎಂದು ವೆಂಕಟೇಶ್‌ ಆಪಾದಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ