ಆ್ಯಪ್ನಗರ

ಕಾನು ಸಂರಕ್ಷ ಣಾ ಅಭಿಯಾನ ಚುರುಕುಗೊಳಿಸಲು ನಿರ್ಧಾರ

ವೃಕ್ಷಾರೋಪಣ, ಕಾನು ಜಾಗೃತಿ ಜಾಥಾ, ಜೀವವೈವಿಧ್ಯ ದಾಖಲಾತಿ ಶಿಬಿರ, ರಾಂಪತ್ರೆ ಜಡ್ಡಿ ಸಂರಕ್ಷ ಣೆ ಕುರಿತು ಕಾರ್ಯಾಗಾರ ನಡೆಸಲು ವೃಕ್ಷ ಲಕ್ಷ ಕಾರ್ಯಕರ್ತರ ಸಭೆ ನಿರ್ಧರಿಸಿದೆ.

Vijaya Karnataka 5 Jun 2019, 5:00 am
ಸಾಗರ: ವೃಕ್ಷಾರೋಪಣ, ಕಾನು ಜಾಗೃತಿ ಜಾಥಾ, ಜೀವವೈವಿಧ್ಯ ದಾಖಲಾತಿ ಶಿಬಿರ, ರಾಂಪತ್ರೆ ಜಡ್ಡಿ ಸಂರಕ್ಷ ಣೆ ಕುರಿತು ಕಾರ್ಯಾಗಾರ ನಡೆಸಲು ವೃಕ್ಷ ಲಕ್ಷ ಕಾರ್ಯಕರ್ತರ ಸಭೆ ನಿರ್ಧರಿಸಿದೆ.
Vijaya Karnataka Web conclusion the decision to expedite the kaunu rescue campaign
ಕಾನು ಸಂರಕ್ಷ ಣಾ ಅಭಿಯಾನ ಚುರುಕುಗೊಳಿಸಲು ನಿರ್ಧಾರ


ಜಿಗಳೇಮನೆ, ನಾರಗೋಡ, ಹುಂಚ, ಹಕ್ರೆ, ಬೊಮ್ಮತ್ತಿ, ಆನವಟ್ಟಿ, ಹೆಗ್ಗೋಡು ಮುಂತಾದ ಹಳ್ಳಿಗಳಲ್ಲಿ ವೃಕ್ಷಾರೋಪಣ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಕಾನು ಸಂರಕ್ಷ ಣಾ ಅಭಿಯಾನ ಚುರುಕುಗೊಳಿಸಲು ವೃಕ್ಷ ಲಕ್ಷ ಆಂದೋಲನ ತೀರ್ಮಾನಿಸಿದೆ.

ಇಲ್ಲಿನ ವರದಶ್ರೀ ಸಭಾಂಗಣದಲ್ಲಿ ನಡೆದ ಸಾಗರ, ಹೊಸನಗರ, ಸೊರಬ ತಾಲೂಕುಗಳ ವೃಕ್ಷ ಲಕ್ಷ ಆಂದೋಲನದ ಕಾರ್ಯಕರ್ತರ ಸಭೆ ನಡೆಸಿ, ಸಾಗರ ತಾಲೂಕು ಬೊಮ್ಮತ್ತಿ, ಮಂಚಾಲೆ, ನಾಡಕಲಸಿ, ನಾರಗೋಡ, ಬಿಳಿಸಿರಿ, ಗ್ರಾಮ ಅರಣ್ಯ, ಗೋಮಾಳ, ಕಾನು ಇತ್ಯಾದಿ ಗ್ರಾಮ ನೈಸರ್ಗಿಕ ಸಂಪತ್ತಿನ ಸೂರೆ ಆಗುತ್ತಿದೆ. ಕಂದಾಯ, ಅರಣ್ಯ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಅರಣ್ಯ ನಾಶ ತಡೆಯಬೇಕು ಎಂದು ಆಗ್ರಹಿಸಿತು.

ಸಭೆಯಲ್ಲಿ ಮಾತನಾಡಿದ ಹುಂಚ ಗಣಿ ವಿರೋಧಿ ಹೋರಾಟ ಸಮಿತಿ ಸಂಚಾಲಕ ನಾಗೇಂದ್ರ, ಅರಣ್ಯ ಇಲಾಖೆ ಹುಂಚ ಹಸಿರು ಬೆಟ್ಟದಲ್ಲಿ ಗಣಿಗಾರಿಕೆ ಮಾಡಬಾರದು ಎಂದು ವಿಶೇಷ ವರದಿ ನೀಡಿದ್ದರೂ ಜಿಲ್ಲಾ ಗಣಿ ಇಲಾಖೆ ಹುಂಚ ಗಣಿ ಪರವಾನಗಿಯನ್ನು ಇನ್ನೂ ರದ್ದುಪಡಿಸಿಲ್ಲ. ಕಂದಾಯ ಇಲಾಖೆಯಲ್ಲಿ ಡೀಮ್ಡ್‌ ಅರಣ್ಯ ಎಂದು ಗುರುತಿಸದೇ ಇರುವ ಸಾವಿರಾರು ಎಕರೆ ದಟ್ಟ ಅರಣ್ಯಗಳು ಇವೆ. ಇವುಗಳನ್ನು ಡೀಮ್ಡ್‌ ವ್ಯಾಪ್ತಿಗೆ ತರಬೇಕು ಎಂದು ಒತ್ತಾಯಿಸಿದರು.

ಪರಿಸರ ಪ್ರಶಸ್ತಿ ವಿಜೇತ ಆನೆಗೊಳಿ ಸುಬ್ಬರಾವ್‌ ಮಾತನಾಡಿ, ಕಾನು ಅಭಿವೃದ್ಧಿ ಯೋಜನೆಯನ್ನು ಗ್ರಾಮ ಅರಣ್ಯ ಸಮಿತಿ ಮೂಲಕ ಜಾರಿ ಮಾಡಬೇಕು. ಮಂಗನ ಕಾಯಿಲೆ ಅರಳÜಗೋಡು ವ್ಯಾಪ್ತಿಯಲ್ಲಿ ಇನ್ನೂ ಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಜಿಲ್ಲಾಡಳಿತ ಈ ಬಗ್ಗೆ ಎಚ್ಚರ ವಹಿಸಬೇಕು ಎಂದರು.

ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅಧ್ಯಕ್ಷತೆ ವಹಿಸಿದ್ದರು. ಎಂ.ಆರ್‌.ಪಾಟೀಲ, ಪರಿಸರ ಅಧ್ಯಯನಕಾರ ಶ್ರೀಪಾದ ಬಿಚ್ಚುಗತ್ತಿ ಮತ್ತಿತರರು ಪಾಲ್ಗೊಂಡಿದ್ದರು. ಕೆ. ವೆಂಕಟೇಶ ಸ್ವಾಗತಿಸಿ, ಬಿ.ಎಚ್‌. ರಾಘವೇಂದ್ರ ಪ್ರಾಸ್ತಾವಿಕ ಮಾತನಾಡಿದರು. ಸುಬ್ರಮಣ್ಯ ನೀಚಡಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ