ಆ್ಯಪ್ನಗರ

ಅವಹೇಳನಕಾರಿ ಹೇಳಿಕೆಗೆ ಖಂಡನೆ

ಕಾರ್ಮಿಕ ಸಂಘಟನೆಯೊಂದರ ರಾಜ್ಯ ಕಾರ‍್ಯದರ್ಶಿ ನಾಗಲಕ್ಷಿತ್ರ್ಮ ಅವರು ಕಿರಿಯ ಆರೋಗ್ಯ ಸಹಾಯಕಿಯರ ಕುರಿತು ಹೇಳಿರುವ ಅವಹೇಳನಕಾರಿ ಮಾತುಗಳನ್ನು ಖಂಡಿಸಿ ಸರಕಾರಿ ಆಸ್ಪತ್ರೆ ದಾದಿಯರು ಶುಕ್ರವಾರ ಪಟ್ಟಣದಲ್ಲಿಮೌನಮೆರವಣಿಗೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

Vijaya Karnataka 19 Jan 2020, 5:00 am
ಶಿಕಾರಿಪುರ: ಕಾರ್ಮಿಕ ಸಂಘಟನೆಯೊಂದರ ರಾಜ್ಯ ಕಾರ‍್ಯದರ್ಶಿ ನಾಗಲಕ್ಷಿತ್ರ್ಮ ಅವರು ಕಿರಿಯ ಆರೋಗ್ಯ ಸಹಾಯಕಿಯರ ಕುರಿತು ಹೇಳಿರುವ ಅವಹೇಳನಕಾರಿ ಮಾತುಗಳನ್ನು ಖಂಡಿಸಿ ಸರಕಾರಿ ಆಸ್ಪತ್ರೆ ದಾದಿಯರು ಶುಕ್ರವಾರ ಪಟ್ಟಣದಲ್ಲಿಮೌನಮೆರವಣಿಗೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
Vijaya Karnataka Web 204017SKP1_46


ಈ ಸಂದರ್ಭ ಕಿರಿಯ ಆರೋಗ್ಯ ಸಹಾಯಕರ ಒಕ್ಕೂಟ ಅಧ್ಯಕ್ಷ ಶಬ್ಬೀರ್‌ಖಾನ್‌ ಮಾತನಾಡಿ, ಇದೇ ತಿಂಗಳ 3ರಂದು ಆಶಾ ಕಾರ‍್ಯಕರ್ತೆಯರು ಬೆಂಗಳೂರಿನಲ್ಲಿನಡೆಸಿದ ಪ್ರತಿಭಟನೆ ಸಂದರ್ಭದಲ್ಲಿಕಾರ್ಮಿಕ ಸಂಘಟನೆಯ ನಾಗಲಕ್ಷಿತ್ರ್ಮ ಎಂಬುವರು ಕಿರಿಯ ಆರೋಗ್ಯ ಸಹಾಯಕಿಯರ ಕುರಿತು ಅವಹೇಳನಕರ, ಅಸಹ್ಯಕರ ಹೇಳಿಕೆ ನೀಡಿದ್ದರು. ಅದು ಸಾಮಾಜಿಕ ಜಾಲತಾಣದಲ್ಲಿಹರಿದಾಡುತ್ತಿದೆ. ಅಂತಹ ಹೇಳಿಕೆ ನೀಡಿದ್ದು ತಪ್ಪು, ಅವರು ಕೂಡಲೇ ಕ್ಷಮೆ ಕೇಳಬೇಕೆಂದು ಒತ್ತಾಯಿಸುವ ಉದ್ದೇಶಕ್ಕೆ ರಾಜ್ಯದ ಎಲ್ಲತಾಲೂಕು ಕೇಂದ್ರದಲ್ಲಿಮೌನ ಮೆರವಣಿಗೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಗುತ್ತಿದೆ ಎಂದರು.

ಆರೋಗ್ಯ ಇಲಾಖಾ ನೌಕರರ ಒಕ್ಕೂಟ ಉಪಾಧ್ಯಕ್ಷೆ ಕುಮಾರಿ ಮಾತನಾಡಿ, ಸಾರ್ವಜನಿಕರ ಆರೋಗ್ಯ ಸೇವೆಯಲ್ಲಿತೊಡಗಿಸಿಕೊಂಡಿರುವ ದಾದಿಯರ ಕುರಿತು ಅವಹೇಳನಕಾರಿ ಮಾತನ್ನಾಡುವುದು ಸರಿಯಲ್ಲ. ಅದು ಅವರು ಸಲ್ಲಿಸುತ್ತಿರುವ ಸೇವೆ ಮೇಲೆ, ರೋಗಿಗಳ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದರು.

ಪ್ರತಿಭಟನಾ ಸಭೆಗೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿದಾದಿಯರು ಮೌನ ಮೆರವಣಿಗೆ ನಡೆಸಿ ಗಮನ ಸೆಳೆದರು. ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ಆರೋಗ್ಯ ಇಲಾಖೆ ನೌಕರರ ಒಕ್ಕೂಟ ಅಧ್ಯಕ್ಷ ರೇವಣಪ್ಪ, ಸಂಘಟನಾ ಕಾರ‍್ಯದರ್ಶಿ ಎನ್‌.ವಿ.ಸುರೇಶ್‌, ಆರೋಗ್ಯ ಇಲಾಖೆಯ ಪ್ರಶಾಂತ್‌, ಕವಿತಾ, ಉಮ್ಲಿಬಾಯಿ, ಜ್ಯೋತಿ, ಸ್ಮಿತಾ, ಲಲಿತಾ, ಸುಮಾ, ಅಶ್ವಿನಿ, ಮೀನಾಕ್ಷಮ್ಮ, ಮೈನಾವತಿ ಹೆಗಡೆ, ಅಕ್ಷತಾ, ರೇಷ್ಮಾಭಾನು, ರಂಜಿತ್‌, ಕುಮಾರ್‌ ಮತ್ತಿತರರು ಇದ್ದರು.
.................

ಕಾರ್ಮಿಕರ ಹಿತ ರಕ್ಷಣೆ ಮಾಡುವುದು ಒಳ್ಳೆಯ ಕೆಲಸವಾದರೆ, ಅದರ ಹೆಸರಿನಲ್ಲಿಸಮಾಜದಲ್ಲಿನ ಗೌರವಾನ್ವಿತ ವೃತ್ತಿ ನಿರತರ ಕುರಿತು ಹಗುರವಾಗಿ ಮಾತನಾಡುವುದು ಸರಿಯಲ್ಲ, ನಾಯಕತ್ವ ಗುಣ ಹೊಂದಿರುವ ಯಾರೂ ಇಂತಹ ಮಾತನಾಡುವುದಿಲ್ಲ. ರಾಜ್ಯ ಸರಕಾರ ಕೂಡಲೇ ಇಂತಹ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
-ಪ್ರತಿಭಟನಾಕಾರರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ