ಆ್ಯಪ್ನಗರ

ಸೈನಿಕರ ಸಾಹಸಕ್ಕೆ ‘ಅಭಿ’ ನಂದನೆ

ಸಮರ್ಥ ನಾಯಕತ್ವದಿಂದಾಗಿ ನಮ್ಮ ಸೈನಿಕ ಪಾಕಿಸ್ಥಾನದಿಂದ ಬಿಡುಗಡೆ ಹೊಂದಿರುವುದು ಸಂತಸ ತಂದಿದೆ ಎಂದು ಜಡೆ ಸಂಸ್ಥಾನ ಮಠದ ಡಾ.ಮಹಾಂತ ಸ್ವಾಮಿಗಳು ಹೇಳಿದರು.

Vijaya Karnataka 3 Mar 2019, 5:00 am
ಸೊರಬ: ಸಮರ್ಥ ನಾಯಕತ್ವದಿಂದಾಗಿ ನಮ್ಮ ಸೈನಿಕ ಪಾಕಿಸ್ಥಾನದಿಂದ ಬಿಡುಗಡೆ ಹೊಂದಿರುವುದು ಸಂತಸ ತಂದಿದೆ ಎಂದು ಜಡೆ ಸಂಸ್ಥಾನ ಮಠದ ಡಾ.ಮಹಾಂತ ಸ್ವಾಮಿಗಳು ಹೇಳಿದರು.
Vijaya Karnataka Web SMR-01SRBP2


ಪಟ್ಟಣದಲ್ಲಿ ಶುಕ್ರವಾರ ಸಂಜೆ ವಿಗ್‌ ಕಮಾಂಡರ್‌ ಅಭಿನಂದನ್‌ ಬಿಡುಗಡೆಯ ಸಂತೋಷಕ್ಕಾಗಿ ದೇಶಾಭಿಮಾನಿಗಳಿಂದ ಪಟಾಕಿ ಸಿಡಿಸಿ ಸಂಭ್ರಮಿಸಿದ ಸಂದರ್ಭದಲ್ಲಿ ನಿವೃತ್ತ ಯೋಧರನ್ನು ಅಭಿನಂದಿಸಿ ಅವರು ಮಾತನಾಡಿದರು.

ಉಗ್ರವಾದದ ವಿರುದ್ಧ ನಮ್ಮ ದೇಶದ ನಿಲುವು ಸ್ಪಷ್ಟವಾಗಿದೆ. ನಮ್ಮ ಸೈನಿಕರ ಸಾಹಸ ಮತ್ತು ಶೌರ್ಯಕ್ಕೆ ಅಭಿನಂದನೆ ಎಂದ ಅವರು, ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ರನ್ನು ಪಾಕಿಸ್ತಾನದಿಂದ ವಾಪಸ್‌ ಕರೆತರುವ ಯತ್ನದಲ್ಲಿ ಭಾರತಕ್ಕೆ ರಾಜತಾಂತ್ರಿಕ ಗೆಲುವು ಲಭಿಸಿದೆ ಎಂದರು. ಲೋಲಾಕ್ಷ ಮ್ಮ, ಪಾಣಿ ರಾಜಪ್ಪ, ಪ್ರಶಾಂತ್‌ ಮೇಸ್ತ್ರಿ, ಎಂ.ಡಿ.ಉಮೇಶ್‌, ಗುರುಮೂರ್ತಿ ಚಿಕ್ಕಶಕುನ, ಹಾಲೇಶ್‌ ನವುಲೆ ಮತ್ತಿತರರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ