ಆ್ಯಪ್ನಗರ

ಬಡತನ, ಪ್ರತಿಭೆ ಸಂಘರ್ಷದಿಂದ ಕಲಾವಿದರ ನಿರ್ಮಾಣ

ಬಡತನ ಮತ್ತು ಪ್ರತಿಭೆಯ ನಡುವಿನ ಸಂಘರ್ಷದಿಂದಾಗಿ ಪರಿಶುದ್ಧ ಕಲಾವಿದರ ನಿರ್ಮಾಣವಾಗುತ್ತದೆ ಎಂದು ಯಕ್ಷ ಗಾನ ವಿದ್ವಾಂಸ ಡಾ.ಜಿ.ಎಸ್‌.ಭಟ್‌ ಹೇಳಿದರು.

Vijaya Karnataka 29 May 2019, 5:00 am
ಸಾಗರ: ಬಡತನ ಮತ್ತು ಪ್ರತಿಭೆಯ ನಡುವಿನ ಸಂಘರ್ಷದಿಂದಾಗಿ ಪರಿಶುದ್ಧ ಕಲಾವಿದರ ನಿರ್ಮಾಣವಾಗುತ್ತದೆ ಎಂದು ಯಕ್ಷ ಗಾನ ವಿದ್ವಾಂಸ ಡಾ.ಜಿ.ಎಸ್‌.ಭಟ್‌ ಹೇಳಿದರು.
Vijaya Karnataka Web SMR-27sgr7


ತಾಲೂಕಿನ ಪುರಪ್ಪೇಮನೆ ಶಾಲಾವರಣದಲ್ಲಿ ಕೆಳಮನೆಯ ಸಾಕೇತ ಕಲಾವಿದರು ಮತ್ತು ಯಕ್ಷಗಾನ ಅಭಿಮಾನಿಗಳು ಭಾನುವಾರ ಹಮ್ಮಿಕೊಂಡಿದ್ದ ಈಚೆಗೆ ಅಗಲಿದ ರಾಜ್ಯ ಪ್ರಶಸ್ತಿ ಪುರಸ್ಕೃತ ಬಡಗುತಿಟ್ಟಿನ ಹಿರಿಯ ಭಾಗವತ ನೆಬ್ಬೂರು ನಾರಾಯಣ ಹೆಗಡೆಯವರಿಗೆ ಶ್ರದ್ದಾಂಜಲಿ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿದರು.

ಹಲವು ದಶಕಗಳ ಕಾಲ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷ ಗಾನ ಮಂಡಳಿಯ ಜೀವಧ್ವನಿಯಾಗಿದ್ದ ನೆಬ್ಬೂರು ನಾರಾಯಣ ಭಾಗವತರು ಅಂಥ ಒಂದು ಸಂಘರ್ಷದಿಂದ ರೂಪಿತವಾದ ರಂಗಭಾಗವತರಾಗಿದ್ದರು. ಕಡುಬಡತನದ ನಡುವೆ ಕೆರೆಮನೆಯ ದಾರಿ ಹಿಡಿದ ಭಾಗವತರು ತಮ್ಮ ಧ್ವನಿಯನ್ನು ವಿಶಿಷ್ಟ ಶೈಲಿಯಾಗಿ ಬಳಸಿಕೊಂಡರು. ಅಂಥ ಭಾಗವತರೊಬ್ಬರ ಸಾವು ಅಭಿಮಾನಿಗಳ ಶೋಕಕ್ಕೆ ಕಾರಣವಾಗುವುದು ಸಹಜ. ಆದರೆ, ಅಭಿಮಾನಿಗಳು ಆರಾಧನೆಯ ಜತೆಗೆ ಕಲಾವಿದರ ವಿಶೇಷತೆಗಳ ಅಧ್ಯಯನ ಮಾಡಬೇಕು ಎಂದರು.

ಎ.ಎಸ್‌.ಹರಿಯಪ್ಪ ಅಧ್ಯಕ್ಷ ತೆ ವಹಿಸಿದ್ದರು. ಕೆ.ಜಿ.ರಾಮರಾವ್‌ ಪ್ರಸ್ತಾವನೆ ಮಾಡಿದರು. ಮೃತ್ಯುಂಜಯ ವಂದಿಸಿ, ಕಿರಣ ನಿರೂಪಿಸಿದರು. ನಂತರ ಸಾಕೇತ ಕಲಾವಿದರು ಭೀಷ್ಮವಿಜಯ ಯಕ್ಷ ಗಾನ ಪ್ರದರ್ಶನ ನೀಡಿದರು. ಕೆ.ಜಿ.ಮಂಜುನಾಥ , ಗಣೇಶ ನಾಯ್ಕ, ಗೀಜಗಾರು ಶ್ರೀಧರ ಭಟ್‌, ಶಂಕರ ಭಟ್‌, ಶಶಾಂಕ ಪಟೇಲ್‌, ರಮೇಶ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ