ಆ್ಯಪ್ನಗರ

‘ಪರಿಸರ ಬಗ್ಗೆ ರಚನಾತ್ಮಕ ಚರ್ಚೆಗಳಾಗಲಿ’

ಪರಿಸರದ ಕುರಿತು ರಚನಾತ್ಮಕ ಚರ್ಚೆಗಳಾಗುವ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ನೈಜ ಕಾಳಜಿಗಳಿದ್ದಲ್ಲಿ ಇಂತಹ ಚರ್ಚೆಗಳು ಸಾಧ್ಯವಾಗುತ್ತವೆ ಎಂದು ಪರಿಸರವಾದಿ ಶಿವಾನಂದ್‌ ಕಳವೆ ಹೇಳಿದರು.

Vijaya Karnataka 24 Dec 2018, 5:00 am
ಶಿವಮೊಗ್ಗ : ಪರಿಸರದ ಕುರಿತು ರಚನಾತ್ಮಕ ಚರ್ಚೆಗಳಾಗುವ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ನೈಜ ಕಾಳಜಿಗಳಿದ್ದಲ್ಲಿ ಇಂತಹ ಚರ್ಚೆಗಳು ಸಾಧ್ಯವಾಗುತ್ತವೆ ಎಂದು ಪರಿಸರವಾದಿ ಶಿವಾನಂದ್‌ ಕಳವೆ ಹೇಳಿದರು.
Vijaya Karnataka Web 23SMG4


ಶಿವಮೊಗ್ಗ ಪ್ರೆಸ್‌ಟ್ರಸ್ಟ್‌ ಹಾಗೂ ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಪತ್ರಕರ್ತ ಶಶಿ ಸಂಪಳ್ಳಿ ಅವರು ರಚಿಸಿರುವ 'ಮುತ್ತುಗ; ನಿಸ್ತೇಜ ಬಯಲ ಹಾಡು' ಕವನ ಸಂಕಲನ ಹಾಗೂ 'ಮಲೆಘಟ್ಟ; ಕಾಡು-ನಾಡಿನ ಸಂಘರ್ಷ ಸೋಪಾನ' ಪರಿಸರ ಲೇಖನ ಸಂಗ್ರಹ ಕೃತಿಗಳ ಜನಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದ್ದಕ್ಕಿದ್ದಂತೆ ಮಾಧವ್‌ ಗಾಡ್ಗೀಲ್‌ ಹಾಗೂ ಕಸ್ತೂರಿ ರಂಗನ್‌ ವರದಿಗಳನ್ನು ಹೇರಲು ಹೊರಡಲಾಗುತ್ತದೆ. ಇದರೆಡೆಗೆ ಕಾಳಜಿ ಇದ್ದಲ್ಲಿ ಸಂರಕ್ಷಿಸುವ ನಿಟ್ಟಿನಲ್ಲಿ ರಚನಾತ್ಮಕ ಕೆಲಸಗಳಾಗಲಿ ಎಂದು ತಿಳಿಸಿದರು.

ಶಶಿ ಸಂಪಳ್ಳಿ ಅವರು ರಚಿಸಿರುವ ಕೃತಿಗಳಲ್ಲಿ ಕಾಡಿನ ಬಗ್ಗೆ ಜಾಗೃತ ಪ್ರಜ್ಞೆ ಇದ್ದು, ಅದನ್ನು ಅತ್ಯಂತ ಮಾರ್ಮಿಕವಾಗಿ ಬಿಂಬಿಸುವ ಕೆಲಸ ಮಾಡಲಾಗಿದೆ. ಪುಸ್ತಕದುದ್ದಕ್ಕೂ ಕಾಡಿನೆಡೆಗಿನ ಪ್ರೀತಿ, ಕಾಳಜಿ ಎದ್ದು ಕಾಣುತ್ತದೆ ಎಂದರು.

ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ರೈತ ನಾಯಕ ಕಡಿದಾಳು ಶಾಮಣ್ಣ, ಶಶಿ ಸಂಪಳ್ಳಿಯವರಿಗೆ ಮಲೆನಾಡಿನ ಬಗ್ಗೆ ವಿಪರೀತ ಕಾಳಜಿ ಇದೆ. ಅದು ಬರಹಗಳಲ್ಲಿ ವ್ಯಕ್ತವಾಗಿದೆ. ಬರುವ ದಿನಗಳಲ್ಲೂ ಇನ್ನಷ್ಟು ಪುಸ್ತಕಗಳನ್ನು ರಚಿಸುವ ಮೂಲಕ ಪರಿಸರದ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡಲಿ. ಈಗಾಗಲೇ ಜನಾರ್ಪಣೆಗೊಂಡಿರುವ ಪುಸ್ತಕಗಳು ಇನ್ನಷ್ಟು ಮುದ್ರಣ ಕಾಣಲಿ ಎಂದು ಹಾರೈಸಿದರು.

ಪ್ರೆಸ್‌ಟ್ರಸ್ಟ್‌ ಅಧ್ಯಕ್ಷ ಎನ್‌. ಮಂಜುನಾಥ್‌ ಅಧ್ಯಕ್ಷತೆ ವಹಿಸಿದ್ದರು. ಲೇಖಕಿ ಡಾ. ಎಚ್‌.ಎಲ್‌. ಪುಷ್ಪಾ ಅವರು ಕೃತಿಗಳ ಕುರಿತು ಮಾತನಾಡಿದರು. ಸಾಹಿತ್ಯ ಅಕಾಡೆಮಿ ಸಲಹಾ ಸಮಿತಿ ಸದಸ್ಯೆ ಡಾ. ಪದ್ಮಿನಿ ನಾಗರಾಜು, ಕೃತಿಗಳ ಲೇಖಕ ಶಶಿ ಸಂಪಳ್ಳಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ