ಆ್ಯಪ್ನಗರ

ಅಡಕೆ ಕೊಳೆ ರೋಗ ಹತೋಟಿಗೆ ಸೂಚನೆ

ಅಡಕೆ ಕೊಳೆ ರೋಗ ಹಾಗೂ ಸುಳಿಕೊಳೆ ರೋಗಗಳ ಹತೋಟಿಗೆ ತೋಟಗಾರಿಕೆ ಇಲಾಖೆ ಬೋರ್ಡೋದ್ರಾವಣ ವಿಧಾನ ಅನುಸರಿಸುವಂತೆ ಸಲಹೆ ನೀಡಿದೆ.

Vijaya Karnataka 2 Jun 2019, 5:00 am
ಶಿವಮೊಗ್ಗ : ಅಡಕೆ ಕೊಳೆ ರೋಗ ಹಾಗೂ ಸುಳಿಕೊಳೆ ರೋಗಗಳ ಹತೋಟಿಗೆ ತೋಟಗಾರಿಕೆ ಇಲಾಖೆ ಬೋರ್ಡೋದ್ರಾವಣ ವಿಧಾನ ಅನುಸರಿಸುವಂತೆ ಸಲಹೆ ನೀಡಿದೆ.
Vijaya Karnataka Web control for areca filth disease
ಅಡಕೆ ಕೊಳೆ ರೋಗ ಹತೋಟಿಗೆ ಸೂಚನೆ


ಕೆಜಿಯಷ್ಟು ಮೈಲುತುತ್ತನ್ನು ಹಾಗೂ ಸುಣ್ಣದ ಹರಳನ್ನು ಪ್ರತ್ಯೇಕವಾಗಿ 10 ಲೀಟರ್‌ ನೀರಿನಲ್ಲಿ ಹಾಕಿ ಕರಗಿಸಿದ ನಂತರ ಮೈಲುತುತ್ತ ಹಾಗೂ ಸುಣ್ಣದ ಹರಳಿನ ತಿಳಿ ನೀರನ್ನು 80 ಲೀಟರ್‌ ನೀರಿನ ಪಾತ್ರೆಗೆ ಸುರಿದು ಮಿಶ್ರಣ ಮಾಡಬೇಕು. ಈ ಮಿಶ್ರಣವು ಆಕಾಶ ತಿಳಿ ನೀಲಿ ಬಣ್ಣಕ್ಕೆ ತಿರುಗುತ್ತಿದ್ದಂತೆ ದ್ರಾವಣದಲ್ಲಿ ಹೆಚ್ಚುವರಿ ತಾಮ್ರದ ಅಂಶ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಬೇಕು.( ಪೇಪರ್‌ ದ್ರಾವಣದಲ್ಲಿ ಅದ್ದಿದಾಗ ಕೆಂಪು ಬಣ್ಣಕ್ಕೆ ತಿರುಗುತ್ತದೆ) ಹೆಚ್ಚುವರಿ ತಾಮ್ರದ ಅಂಶವಿದ್ದಲ್ಲಿ ಇನ್ನು ಸ್ವಲ್ಪ ಸುಣ್ಣದ ತಿಳಿನೀರನ್ನು ತಯಾರಿಸಿ ಈ ದ್ರಾವಣಕ್ಕೆ ಸುರಿಯಬೇಕು.

ದ್ರಾವಣವನ್ನು ಅಡಕೆ ಸುಳಿ ಹಾಗೂ ಕಾಯಿಗಳ ಗೊಂಚಲಿನ ಎಲ್ಲ ಭಾಗಗಳಿಗೆ ಸಮರ್ಪಕವಾಗಿ ಸಿಂಪರಣೆ ಮಾಡಬೇಕು. ಮೊದಲನೇ ಸಿಂಪರಣೆ ಮುಂಗಾರು ಪ್ರಾರಂಭವಾಗುವ ಮೊದಲು, ಎರಡನೇ ಹಾಗೂ ಮೂರನೇ ಸಿಂಪರಣೆ ಮುಂಗಾರು ಸಮಯದಲ್ಲಿ ಮಾಡುವುದರಿಂದ ಅಡಕೆ ಕೊಳೆ ರೋಗ ಹಾಗೂ ಸುಳಿಕೊಳೆ ರೋಗÜ ಹತೋಟಿಗೆ ತರಬಹುದು.

ಬೋರ್ಡೋ ಮಿಶ್ರಣ ತಯಾರಿಗೆ ಮಣ್ಣಿನ ಮತ್ತು ಪ್ಲಾಸ್ಟಿಕ್‌ ಪಾತ್ರೆ ಬಳಕೆ ಮಾಡಬೇಕು. ಮಾಹಿತಿಗೆ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ