ಆ್ಯಪ್ನಗರ

ಶಾಂತಿಯುತ ಚುನಾವಣೆಗೆ ಸಹಕಾರ ಅಗತ್ಯ

ಲೋಕಸಭೆ ಚುನಾವಣೆ ಸುಗಮವಾಗಿ ನಡೆಯಲು ಪೊಲೀಸ್‌ ಇಲಾಖೆಗೆ ಸಾರ್ವಜನಿಕರ ಸಹಕಾರ ಅಗತ್ಯ. ಹಣ, ಮದ್ಯ ಹಂಚಿಕೆ ಮಾಡದಂತೆ ಮತ್ತು ಕಾರ್ಯಕರ್ತರಲ್ಲಿ ಗಲಾಟೆಗಳು ನಡೆಯದಂತೆ ಪ್ರತಿಯೊಬ್ಬರು ಇಲಾಖೆಗೆ ಸಹಕಾರ ನೀಡಬೇಕೆಂದು ಪಿಎಸ್‌ಐ ತಿಪ್ಪೇಸ್ವಾಮಿ ಹೇಳಿದರು.

Vijaya Karnataka 23 Mar 2019, 5:00 am
ರಿಪ್ಪನ್‌ಪೇಟೆ: ಲೋಕಸಭೆ ಚುನಾವಣೆ ಸುಗಮವಾಗಿ ನಡೆಯಲು ಪೊಲೀಸ್‌ ಇಲಾಖೆಗೆ ಸಾರ್ವಜನಿಕರ ಸಹಕಾರ ಅಗತ್ಯ. ಹಣ, ಮದ್ಯ ಹಂಚಿಕೆ ಮಾಡದಂತೆ ಮತ್ತು ಕಾರ್ಯಕರ್ತರಲ್ಲಿ ಗಲಾಟೆಗಳು ನಡೆಯದಂತೆ ಪ್ರತಿಯೊಬ್ಬರು ಇಲಾಖೆಗೆ ಸಹಕಾರ ನೀಡಬೇಕೆಂದು ಪಿಎಸ್‌ಐ ತಿಪ್ಪೇಸ್ವಾಮಿ ಹೇಳಿದರು.
Vijaya Karnataka Web SMR-21RPT3


ಪಟ್ಟಣದ ಠಾಣೆಯಲ್ಲಿ ಬುಧವಾರ ಆಯೋಜಿಸಿದ್ದ ಶಾಂತಿ ಸಮಿತಿ ಸಭೆ ಅಧ್ಯಕ್ಷ ತೆ ವಹಿಸಿ ಮಾತನಾಡಿ, ಎಲ್ಲರು ಕಾನೂನು ಗೌರವಿಸಬೇಕು. ಪರವಾನಗಿ ಹೊಂದಿದ ಬಂದೂಕುಗಳನ್ನು ಠಾಣೆಗೆ ತಂದು ಡಿಪಾಜಿಟ್‌ ಮಾಡಬೇಕು. ಅಕ್ರಮ ಬಂದೂಕುಗಳಿದ್ದರೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದರು.

ಸಾರ್ವಜನಿಕರ ಸಲಹೆಯಂತೆ ವಿನಾಯಕ ವೃತ್ತದಲ್ಲಿ ವಾಹನಗಳ ಅತಿವೇಗ ತಡೆಯಲು ಪೊಲೀಸ್‌ ಸಿಬ್ಬಂದಿ ನೇಮಿಸಲಾಗುವುದು. ಸಾಗರ ರಸ್ತೆಯ ಪದವಿ ಮತ್ತು ಪಿಯು ಕಾಲೇಜು ಬಳಿ ಗಾಂಜಾ ಮಾರಾಟ ಮತ್ತಿತರ ಅಕ್ರಮ ಚಟುವಟಿಕೆ ನಡೆಯುತ್ತವೆ ಎಂಬ ಸಾರ್ವಜನಿಕರ ದೂರಿನನ್ವಯ ತಕ್ಷ ಣದಿಂದಲೇ ಕಾರ್ಯಪ್ರವೃತ್ತರಾಗಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಕಾಂಗ್ರೆಸ್‌ ಅಧ್ಯಕ್ಷ ಡಾ.ಅಬೂಬಕರ್‌, ಜೆಡಿಎಸ್‌ ಮುಖಂಡ ಆರ್‌.ಎ.ಚಾಬುಸಾಬ್‌,ಜನಪರ ಹೋರಾಟ ಸಮಿತಿ ಅಧ್ಯಕ್ಷ ಆರ್‌.ಎನ್‌.ಮಂಜುನಾಥ, ಗ್ರಾ.ಪಂ. ಸದಸ್ಯರಾದ ಕೊಳವಳ್ಳಿ ಎಂ.ರಾಜೇಶ್‌, ಜಿ.ಡಿ.ಮಲ್ಲಿಕಾರ್ಜುನ, ಆರ್‌.ರಾಘವೇಂದ್ರ, ಸಾಮಾಜಿಕ ಕಾರ್ಯಕರ್ತ ಟಿ.ಆರ್‌.ಕೃಷ್ಣಪ್ಪ, ಮುಸ್ತಾಫ್‌ ಅಹಮದ್‌, ಕೆಂಚನಾಲ ವರ್ಗೀಶ್‌ ಮತ್ತಿತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ