ಆ್ಯಪ್ನಗರ

ಭದ್ರಾವತಿಯಲ್ಲಿಗರ್ಭಿಣಿಗೆ ಕೊರೊನಾ, ಸಿಎನ್‌ ರಸ್ತೆ ಕಂಟೈನ್ಮೆಂಟ್‌ ಝೋನ್‌

ಬೆಂಗಳೂರಿನಿಂದ ಆಗಮಿಸಿದ್ದ ನಗರದ ಚೆನ್ನಗಿರಿ ರಸ್ತೆಯ ಕುಟುಂಬವೊಂದರ 25 ವರ್ಷದ ಗರ್ಭಿಣಿಗೆ ಕೊರೊನಾ ಪಾಸಿಟಿವ್‌ ಕಾಣಿಸಿಕೊಂಡಿದ್ದರಿಂದ ರಂಗಪ್ಪ ವೃತ್ತದ ಸಿಎನ್‌ ರಸ್ತೆಯಿಂದ ಹೊಳೆಹೊನ್ನೂರು ರಸ್ತೆಯ ತಿರುವಿನವರೆಗೆ ಗುರುವಾರ ಕಂಟೈನ್ಮೆಂಟ್‌ ಝೋನ್‌ ಮಾಡಲಾಗಿದೆ.

Vijaya Karnataka 12 Jun 2020, 5:00 am
ಭದ್ರಾವತಿ: ಬೆಂಗಳೂರಿನಿಂದ ಆಗಮಿಸಿದ್ದ ನಗರದ ಚೆನ್ನಗಿರಿ ರಸ್ತೆಯ ಕುಟುಂಬವೊಂದರ 25 ವರ್ಷದ ಗರ್ಭಿಣಿಗೆ ಕೊರೊನಾ ಪಾಸಿಟಿವ್‌ ಕಾಣಿಸಿಕೊಂಡಿದ್ದರಿಂದ ರಂಗಪ್ಪ ವೃತ್ತದ ಸಿಎನ್‌ ರಸ್ತೆಯಿಂದ ಹೊಳೆಹೊನ್ನೂರು ರಸ್ತೆಯ ತಿರುವಿನವರೆಗೆ ಗುರುವಾರ ಕಂಟೈನ್ಮೆಂಟ್‌ ಝೋನ್‌ ಮಾಡಲಾಗಿದೆ.
Vijaya Karnataka Web corona in pregnant cn road containment zone for bhadravati
ಭದ್ರಾವತಿಯಲ್ಲಿಗರ್ಭಿಣಿಗೆ ಕೊರೊನಾ, ಸಿಎನ್‌ ರಸ್ತೆ ಕಂಟೈನ್ಮೆಂಟ್‌ ಝೋನ್‌


ಸೋಮವಾರ ಬೆಂಗಳೂರಿನಿಂದ ಕಾರಿನಲ್ಲಿಒಂದೇ ಕುಟುಂಬದ ನಾಲ್ವರು ಆಗಮಿಸಿದ್ದರು. ಇವರಲ್ಲಿ8 ತಿಂಗಳ ತುಂಬು ಗರ್ಭಿಣಿ ಮಂಗಳವಾರ ಹಳೇನಗರದ ಸಾರ್ವಜನಿಕ ಆಸ್ಪತ್ರೆಗೆ ಸ್ವಯಂ ಪ್ರೇರಣೆಯಿಂದ ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದಾರೆ. ಆದರೆ ಬುಧುವಾರ ಬಂದ ವರದಿಯಲ್ಲಿಕೋವಿಡ್‌-19 ಪಾಸಿಟಿವ್‌ ಕಂಡುಬಂದಿದೆ. ತಾಲೂಕು ಆಡಳಿತ, ಮಹಿಳೆಯನ್ನು ಶಿವಮೊಗ್ಗದ ಕ್ವಾರೆಂಟೈನ್‌ಗೆ ಕರೆದೊಯ್ದಿದೆ. ಉಳಿದಂತೆ ಅವರ ತಂದೆ ತಾಯಿ ಹಾಗು ತಮ್ಮನ ಮಗ ಸೇರಿದಂತೆ ಮೂರು ಮಂದಿಯನ್ನು ಹೋಂ ಕ್ವಾರೆಂಟೈನ್‌ ಮಾಡಲಾಗಿದೆ.ಇದರಿಂದಾಗಿ ರಂಗಪ್ಪ ವೃತ್ತ ಬಳಿಯ ಚೆನ್ನಗಿರಿ ರಸ್ತೆಯನ್ನು ಹೊಳೆಹೊನ್ನೂರು ರಸ್ತೆಯ ತಿರುವಿನವರೆಗೆ , ಪಿಎಲ್‌ಡಿ ಬ್ಯಾಂಕ್‌, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಬ್‌ರಿಜಿಸ್ಟ್ರಾರ್‌ ಕಚೇರಿಗಳು ಸೇರಿಂದಂತೆ ಎಲ್ಲಅಂಗಡಿ ಮುಂಗಟ್ಟುಗಳನ್ನು ಮುಚ್ಚಿ, ಸಾರ್ವಜನಿಕರಿಗೆ ಮತ್ತು ವಾಹನಗಳ ಪ್ರವೇಶ ನಿಷೇಧಿಸಲಾಗಿದೆ. ತಹಸೀಲ್ದಾರ್‌ ಶಿವಕುಮಾರ್‌ ಮತ್ತು ಸಿಬ್ಬಂದಿ, ಟಿಎಚ್‌ಓ ಡಾ. ಎಂ.ಆರ್‌.ಗಾಯತ್ರಿ, ಮುಖ್ಯವೈಧ್ಯಾಧಿಕಾರಿ, ಡಾ.ಮಲ್ಲಪ್ಪ ಡಿವೈಎಸ್‌ಪಿ ಸುಧಾಕರ್‌ ಎಸ್‌.ನಾಯಕ್‌, ಸಿಪಿಐ ನಂಜಪ್ಪ, ಸಬ್‌ಇನ್ಸ್‌ಪೆಕ್ಟರ್‌ ಪಟ್ಟಣಶೆಟ್ಟಿ, ಪೌರಾಯುಕ್ತ ಮನೋಹರ್‌, ಪರಿಸರ ಎಂಜಿನಿಯರ್‌ ರುದ್ರೇಗೌಡ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ