ಸಂತೋಷ್ ಕಾಚಿನಕಟ್ಟೆ
ಶಿವಮೊಗ್ಗ: ನಾನು ಮತ್ತು ನನ್ನ ಹೆಂಡತಿ ಮಕ್ಕಳನ್ನು ತೊಡೆ ಮೇಲೆ ಕೂರಿಸಿಕೊಂಡು, ತಬ್ಬಿ ಪ್ರೀತಿ ಮಾಡಿ ಒಂದೂವರೆ ತಿಂಗಳಾಯಿತು. ಹೆಂಡತಿಯೊಟ್ಟಿಗೆ ಕುಳಿತು ಊಟ ಮಾಡಲೂ ಆಗುತ್ತಿಲ್ಲ. ಮಕ್ಕಳಿಬ್ಬರು ಒಂದು ಕೊಠಡಿ, ಪತ್ನಿ ಮತ್ತೊಂದು ಕೊಠಡಿ, ನಾನು ನಡುಮನೆಯಲ್ಲಿದ್ದೇನೆ. ಆರೋಗ್ಯ ಇಲಾಖೆಯಲ್ಲಿ ಶುಶ್ರೂಷಕಿ ಮತ್ತು ಲ್ಯಾಬ್ ಟೆಕ್ನಿಷಿಯನ್ ಆಗಿರುವ ದಂಪತಿ ಹೀಗೆ ಹೇಳುವಾಗ ಅವುಡುಗಚ್ಚಿ ಹಿಡಿದರೂ ಅವರ ಕಣ್ಣಿಂದ ನೀರು ಇಳಿದುಬಂತು. ಪರಿಸ್ಥಿತಿ ಇನ್ನು ಸ್ವಲ್ಪ ದಿನ ಹೀಗೆಯೇ ಮುಂದುವರಿದರೆ ನಾವೇ ಮಾನಸಿಕ ರೋಗಿಗಳಾಗುತ್ತೇವೆ ಎಂಬ ಆತಂಕ ಧ್ವನಿ ಅವರಲ್ಲಿತ್ತು.
ರಾಜ್ಯದೆಲ್ಲೆಡೆ ಕೊರೊನಾ 2ನೇ ಅಲೆ ಕಾಣಿಸಿಕೊಂಡ ದಿನದಿಂದ ಕೊರೊನಾ ವಾರಿಯರ್ಸ್ಗಳಾಗಿ ಸೇವೆಯಲ್ಲಿರುವ ವೈದ್ಯರು, ಶುಶ್ರೂಷಕರು, ತಂತ್ರಜ್ಞರು, ಡಿ ಗ್ರೂಪ್ ಮತ್ತು ಇತರೆ ನೌಕರರ ಪರಿಸ್ಥಿತಿ ಇದೇ ರೀತಿಯಲ್ಲಿದೆ. ಆಸ್ಪತ್ರೆಯಲ್ಲಿ ನಿರಂತರ ಆರೇಳು ಗಂಟೆ ಪಿಪಿಇ ಕಿಟ್ ಧರಿಸಿ ಸೋಂಕಿತರ ನಡುವೆ ಸೇವೆ ಸಲ್ಲಿಸಿ ಮನೆಗೆ ಬಂದರೆ ಯಾರನ್ನೂ ಮುಟ್ಟಿಸಿಕೊಳ್ಳದೆ ಪ್ರತ್ಯೇಕ ಕೊಠಡಿಯಲ್ಲಿ ಉಳಿಯುತ್ತಿದ್ದಾರೆ. ಗಂಡ, ಹೆಂಡತಿ, ಮಕ್ಕಳು, ಅಪ್ಪ, ಅಮ್ಮನ ಹತ್ತಿರ ಕುಳಿತು ಪ್ರೀತಿಯಿಂದ ಮಾತನಾಡಿಸಲು ಆಗುತ್ತಿಲ್ಲ. ಒಂದೇ ಮನೆಯಲ್ಲಿದ್ದರೂ ಪರಸ್ಪರ ಸಾಮಾಜಿಕ ಅಂತರದ ಬೇಲಿ ಹಾಕಿಕೊಂಡೇ ಇರಬೇಕಾಗಿದೆ.
ನಿರಂತರ ಕರ್ತವ್ಯ, ಮನೆಯಲ್ಲಿ ಪತ್ನಿ(ಪತಿ) ಜತೆಗೆ ಇಲ್ಲದ ಸಾಂಗತ್ಯ, ಮಕ್ಕಳಿಗೆ ತೋರಿಸಲಾಗದ ಮಮತೆ, ಅಪ್ಪ-ಅಮ್ಮನೊಂದಿಗೆ ಪ್ರೀತಿಪೂರ್ವಕವಾಗಿ ಬೆರೆಯಲಾಗದ ಕ್ಷಣಗಳು ಮತ್ತು ಒಂಟಿತನದಿಂದಾಗಿ ವಾರಿಯರ್ಸ್ಗಳು ಮಾನಸಿಕ ಒತ್ತಡಕ್ಕೆ ಸಿಲುಕುತ್ತಿದ್ದಾರೆ. ನಿತ್ಯ ಕೆಲಸಕ್ಕೆ ಬರುವ ಮುನ್ನ ಇರುತ್ತಿದ್ದ ಉತ್ಸಾಹ ಈಗ ಕಾಣುತ್ತಿಲ್ಲ.
ಸುನಾಮಿ ಮಾದರಿಯಲ್ಲಿ ಹರಡುತ್ತಿರುವ ಕೊರೊನಾ ಸೋಂಕು ಆಸ್ಪತ್ರೆಯಲ್ಲಿ ನೇರವಾಗಿ ಇವರ ಮೇಲೆ ದೊಡ್ಡ ಹೊರೆಯನ್ನು ಹಾಕುತ್ತಿದೆ. ಮತ್ತೊಂದು ಕಡೆ ಸರಕಾರ ಸೋಂಕಿನ ಮುಜುಗರ ತಪ್ಪಿಸಿಕೊಳ್ಳಲು ವಾರಿಯರ್ಸ್ಗಳ ಮೇಲೆಯೆ ಮತ್ತಷ್ಟು ಒತ್ತಡ ಹಾಕುತ್ತಿದೆ.
ಕುಟುಂಬ ಮರೆತ ಸರಕಾರ: ಸರಕಾರ ಇವರಿಗೆ ಈಗಾಗಲೇ ಎರಡೂ ಲಸಿಕೆಯನ್ನು ಹಾಕಿದೆ. ಆದರೆ, ಅವರ ಕುಟುಂಬ ವರ್ಗದವರನ್ನು ಲಸಿಕೆಗೆ ಪರಿಗಣಿಸದಿರುವುದು ಅಪಾಯವಾಗಿ ಪರಿಣಮಿಸಿದೆ. ಇದೇ ಕಾರಣಕ್ಕೆ ಅವರಿಗೆ ಮನೆಯಲ್ಲಿ ಪ್ರೀತಿಪಾತ್ರರೊಂದಿಗೆ ಬೆರೆಯಲು ಆಗುತ್ತಿಲ್ಲ. ಅಕ್ಕಪಕ್ಕದ ಮನೆಯವರು, ಸ್ನೇಹಿತರು ಇವರನ್ನು ಕಂಡರೂ ಹೆದರಿ ದೂರ ಸರಿಯುತ್ತಾರೆ. ಇವೆಲ್ಲದರಿಂದಾಗಿ ಅವರು ಮಾನಸಿಕವಾಗಿ ಜರ್ಜರಿತರಾಗುತ್ತಿದ್ದಾರೆ.
ಇಲ್ಲದ ವಿಶ್ರಾಂತಿ: ಕಳೆದ ವರ್ಷ ಕೋವಿಡ್ ಕರ್ತವ್ಯಕ್ಕೆ ನಿಯೋಜಿಸಿದ ಶುಶ್ರೂಷಕಿಯರು, ತಂತ್ರಜ್ಞರು ಮತ್ತು ಇತರರಿಗೆ ಸೋಂಕು ಹರಡುವುದನ್ನು ತಡೆಯುವುದಕ್ಕಾಗಿ ಸರಕಾರ ಒಂದು ವಾರದ ಸೇವೆ ಬಳಿಕ ಒಂದು ವಾರದ ವಿಶ್ರಾಂತಿಗೆ ಅವಕಾಶ ನೀಡಿತ್ತು. ಖಾಸಗಿ ಆಸ್ಪತ್ರೆಗಳಿಗೂ ಕಡ್ಡಾಯ ಮಾಡಲಾಗಿತ್ತು. ಈ ವರ್ಷ ಅದರ ಬಗ್ಗೆ ಆಲೋಚನೆಯನ್ನೇ ಮಾಡಿಲ್ಲ.
ಬಾರದ ಪ್ರೋತ್ಸಾಹ ಧನ: ಕಳೆದ ವರ್ಷ ಸರಕಾರ ವೈದ್ಯರು, ಶುಶ್ರೂಷಕರು, ತಂತ್ರಜ್ಞರು ಮತ್ತು ಡಿ ಗ್ರೂಪ್ ನೌಕರರಿಗೆ 6 ತಿಂಗಳ ಪ್ರೋತ್ಸಾಹಧನ ಘೋಷಿಸಿತ್ತು. ಆದರೆ, ವೈದ್ಯರ ಹೊರತಾಗಿ ಉಳಿದವರಿಗೆ ಕೊಡಲಿಲ್ಲ.
ವಾರಿಯರ್ಸ್ಗಳಿಗೂ ಸೋಂಕು: ಶಿವಮೊಗ್ಗದಲ್ಲಿ ಕೋವಿಡ್ ಆಸ್ಪತ್ರೆ ಮತ್ತು ವಾರ್ಡ್ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮೂವರು ವೈದ್ಯರು, 22 ಶುಶ್ರೂಷಕರು, 12 ತಂತ್ರಜ್ಞರು ಮತ್ತು ಡಿ ಗ್ರೂಪ್ ನೌಕರರಿಗೆ ಸೋಂಕು ದೃಢಪಟ್ಟಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಅರ್ಜಿ ಕರೆದರೂ ಬರುತ್ತಿಲ್ಲ: ಸರಕಾರದ ಪರಮ ನಿರ್ಲಕ್ಷ್ಯದ ಕಾರಣದಿಂದಾಗಿ ಆಸ್ಪತ್ರೆಗಳಲ್ಲಿ ಹೊರಗುತ್ತಿಗೆ ನೌಕರರಾಗಿ ಕೆಲಸ ಮಾಡಲು ಯಾರೂ ಬರುತ್ತಿಲ್ಲ. ಶಿವಮೊಗ್ಗ ಜಿಲ್ಲಾಡಳಿತ 100 ಶುಶ್ರೂಷಕರು ಮತ್ತು 193 ಡಿ ಗ್ರೂಪ್ ನೌಕರರ ನೇಮಕಕ್ಕೆ ಆಹ್ವಾನಿಸಿದ ಅರ್ಜಿಗೆ ಜೀವ ಭಯದಿಂದ ಒಬ್ಬರೇ ಒಬ್ಬರು ಮುಂದೆ ಬಂದಿಲ್ಲ.
'ಸರಕಾರ ಬೇರೆಯವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವ ಕೆಲಸ ಮಾಡುತ್ತಿದೆ. ಚುನಾಯಿತ ಪ್ರತಿನಿಧಿಗಳು, ಉನ್ನತಾಧಿಕಾರಿಗಳು ಪ್ರತಿದಿನ ಐದಾರು ಮೀಟಿಂಗ್ ಮಾಡಿ ಕೇವಲ ಅಂಕಿಅಂಶ ಕಲೆ ಹಾಕುತ್ತಿದ್ದಾರೆ ಹೊರತು ಮಾನಸಿಕವಾಗಿ ಕುಗ್ಗಿ ಹೋಗುತ್ತಿರುವ ವಾರಿಯರ್ಸ್ಗಳಿಗೆ ಆತ್ಮಸೈರ್ಯ ತುಂಬುವ ಕೆಲಸ ಆಗುತ್ತಿಲ್ಲ. ಸರಕಾರ ಮೊದಲು ಕುಟುಂಬದವರಿಗೆ ಲಸಿಕೆ ನೀಡಲಿ. ಬೇಡಿಕೆಗಳನ್ನು ಈಡೇರಿಸಲಿ' ಎಂದು ಮುಖಂಡರಾದ ಮ.ಸ.ನಂಜುಂಡಸ್ವಾಮಿ ಆಗ್ರಹಿಸಿದ್ದಾರೆ.
ಶಿವಮೊಗ್ಗ: ನಾನು ಮತ್ತು ನನ್ನ ಹೆಂಡತಿ ಮಕ್ಕಳನ್ನು ತೊಡೆ ಮೇಲೆ ಕೂರಿಸಿಕೊಂಡು, ತಬ್ಬಿ ಪ್ರೀತಿ ಮಾಡಿ ಒಂದೂವರೆ ತಿಂಗಳಾಯಿತು. ಹೆಂಡತಿಯೊಟ್ಟಿಗೆ ಕುಳಿತು ಊಟ ಮಾಡಲೂ ಆಗುತ್ತಿಲ್ಲ. ಮಕ್ಕಳಿಬ್ಬರು ಒಂದು ಕೊಠಡಿ, ಪತ್ನಿ ಮತ್ತೊಂದು ಕೊಠಡಿ, ನಾನು ನಡುಮನೆಯಲ್ಲಿದ್ದೇನೆ.
ರಾಜ್ಯದೆಲ್ಲೆಡೆ ಕೊರೊನಾ 2ನೇ ಅಲೆ ಕಾಣಿಸಿಕೊಂಡ ದಿನದಿಂದ ಕೊರೊನಾ ವಾರಿಯರ್ಸ್ಗಳಾಗಿ ಸೇವೆಯಲ್ಲಿರುವ ವೈದ್ಯರು, ಶುಶ್ರೂಷಕರು, ತಂತ್ರಜ್ಞರು, ಡಿ ಗ್ರೂಪ್ ಮತ್ತು ಇತರೆ ನೌಕರರ ಪರಿಸ್ಥಿತಿ ಇದೇ ರೀತಿಯಲ್ಲಿದೆ. ಆಸ್ಪತ್ರೆಯಲ್ಲಿ ನಿರಂತರ ಆರೇಳು ಗಂಟೆ ಪಿಪಿಇ ಕಿಟ್ ಧರಿಸಿ ಸೋಂಕಿತರ ನಡುವೆ ಸೇವೆ ಸಲ್ಲಿಸಿ ಮನೆಗೆ ಬಂದರೆ ಯಾರನ್ನೂ ಮುಟ್ಟಿಸಿಕೊಳ್ಳದೆ ಪ್ರತ್ಯೇಕ ಕೊಠಡಿಯಲ್ಲಿ ಉಳಿಯುತ್ತಿದ್ದಾರೆ. ಗಂಡ, ಹೆಂಡತಿ, ಮಕ್ಕಳು, ಅಪ್ಪ, ಅಮ್ಮನ ಹತ್ತಿರ ಕುಳಿತು ಪ್ರೀತಿಯಿಂದ ಮಾತನಾಡಿಸಲು ಆಗುತ್ತಿಲ್ಲ. ಒಂದೇ ಮನೆಯಲ್ಲಿದ್ದರೂ ಪರಸ್ಪರ ಸಾಮಾಜಿಕ ಅಂತರದ ಬೇಲಿ ಹಾಕಿಕೊಂಡೇ ಇರಬೇಕಾಗಿದೆ.
ನಿರಂತರ ಕರ್ತವ್ಯ, ಮನೆಯಲ್ಲಿ ಪತ್ನಿ(ಪತಿ) ಜತೆಗೆ ಇಲ್ಲದ ಸಾಂಗತ್ಯ, ಮಕ್ಕಳಿಗೆ ತೋರಿಸಲಾಗದ ಮಮತೆ, ಅಪ್ಪ-ಅಮ್ಮನೊಂದಿಗೆ ಪ್ರೀತಿಪೂರ್ವಕವಾಗಿ ಬೆರೆಯಲಾಗದ ಕ್ಷಣಗಳು ಮತ್ತು ಒಂಟಿತನದಿಂದಾಗಿ ವಾರಿಯರ್ಸ್ಗಳು ಮಾನಸಿಕ ಒತ್ತಡಕ್ಕೆ ಸಿಲುಕುತ್ತಿದ್ದಾರೆ. ನಿತ್ಯ ಕೆಲಸಕ್ಕೆ ಬರುವ ಮುನ್ನ ಇರುತ್ತಿದ್ದ ಉತ್ಸಾಹ ಈಗ ಕಾಣುತ್ತಿಲ್ಲ.
ಸುನಾಮಿ ಮಾದರಿಯಲ್ಲಿ ಹರಡುತ್ತಿರುವ ಕೊರೊನಾ ಸೋಂಕು ಆಸ್ಪತ್ರೆಯಲ್ಲಿ ನೇರವಾಗಿ ಇವರ ಮೇಲೆ ದೊಡ್ಡ ಹೊರೆಯನ್ನು ಹಾಕುತ್ತಿದೆ. ಮತ್ತೊಂದು ಕಡೆ ಸರಕಾರ ಸೋಂಕಿನ ಮುಜುಗರ ತಪ್ಪಿಸಿಕೊಳ್ಳಲು ವಾರಿಯರ್ಸ್ಗಳ ಮೇಲೆಯೆ ಮತ್ತಷ್ಟು ಒತ್ತಡ ಹಾಕುತ್ತಿದೆ.
ಕುಟುಂಬ ಮರೆತ ಸರಕಾರ: ಸರಕಾರ ಇವರಿಗೆ ಈಗಾಗಲೇ ಎರಡೂ ಲಸಿಕೆಯನ್ನು ಹಾಕಿದೆ. ಆದರೆ, ಅವರ ಕುಟುಂಬ ವರ್ಗದವರನ್ನು ಲಸಿಕೆಗೆ ಪರಿಗಣಿಸದಿರುವುದು ಅಪಾಯವಾಗಿ ಪರಿಣಮಿಸಿದೆ. ಇದೇ ಕಾರಣಕ್ಕೆ ಅವರಿಗೆ ಮನೆಯಲ್ಲಿ ಪ್ರೀತಿಪಾತ್ರರೊಂದಿಗೆ ಬೆರೆಯಲು ಆಗುತ್ತಿಲ್ಲ. ಅಕ್ಕಪಕ್ಕದ ಮನೆಯವರು, ಸ್ನೇಹಿತರು ಇವರನ್ನು ಕಂಡರೂ ಹೆದರಿ ದೂರ ಸರಿಯುತ್ತಾರೆ. ಇವೆಲ್ಲದರಿಂದಾಗಿ ಅವರು ಮಾನಸಿಕವಾಗಿ ಜರ್ಜರಿತರಾಗುತ್ತಿದ್ದಾರೆ.
ಇಲ್ಲದ ವಿಶ್ರಾಂತಿ: ಕಳೆದ ವರ್ಷ ಕೋವಿಡ್ ಕರ್ತವ್ಯಕ್ಕೆ ನಿಯೋಜಿಸಿದ ಶುಶ್ರೂಷಕಿಯರು, ತಂತ್ರಜ್ಞರು ಮತ್ತು ಇತರರಿಗೆ ಸೋಂಕು ಹರಡುವುದನ್ನು ತಡೆಯುವುದಕ್ಕಾಗಿ ಸರಕಾರ ಒಂದು ವಾರದ ಸೇವೆ ಬಳಿಕ ಒಂದು ವಾರದ ವಿಶ್ರಾಂತಿಗೆ ಅವಕಾಶ ನೀಡಿತ್ತು. ಖಾಸಗಿ ಆಸ್ಪತ್ರೆಗಳಿಗೂ ಕಡ್ಡಾಯ ಮಾಡಲಾಗಿತ್ತು. ಈ ವರ್ಷ ಅದರ ಬಗ್ಗೆ ಆಲೋಚನೆಯನ್ನೇ ಮಾಡಿಲ್ಲ.
ಬಾರದ ಪ್ರೋತ್ಸಾಹ ಧನ: ಕಳೆದ ವರ್ಷ ಸರಕಾರ ವೈದ್ಯರು, ಶುಶ್ರೂಷಕರು, ತಂತ್ರಜ್ಞರು ಮತ್ತು ಡಿ ಗ್ರೂಪ್ ನೌಕರರಿಗೆ 6 ತಿಂಗಳ ಪ್ರೋತ್ಸಾಹಧನ ಘೋಷಿಸಿತ್ತು. ಆದರೆ, ವೈದ್ಯರ ಹೊರತಾಗಿ ಉಳಿದವರಿಗೆ ಕೊಡಲಿಲ್ಲ.
ವಾರಿಯರ್ಸ್ಗಳಿಗೂ ಸೋಂಕು: ಶಿವಮೊಗ್ಗದಲ್ಲಿ ಕೋವಿಡ್ ಆಸ್ಪತ್ರೆ ಮತ್ತು ವಾರ್ಡ್ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮೂವರು ವೈದ್ಯರು, 22 ಶುಶ್ರೂಷಕರು, 12 ತಂತ್ರಜ್ಞರು ಮತ್ತು ಡಿ ಗ್ರೂಪ್ ನೌಕರರಿಗೆ ಸೋಂಕು ದೃಢಪಟ್ಟಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಅರ್ಜಿ ಕರೆದರೂ ಬರುತ್ತಿಲ್ಲ: ಸರಕಾರದ ಪರಮ ನಿರ್ಲಕ್ಷ್ಯದ ಕಾರಣದಿಂದಾಗಿ ಆಸ್ಪತ್ರೆಗಳಲ್ಲಿ ಹೊರಗುತ್ತಿಗೆ ನೌಕರರಾಗಿ ಕೆಲಸ ಮಾಡಲು ಯಾರೂ ಬರುತ್ತಿಲ್ಲ. ಶಿವಮೊಗ್ಗ ಜಿಲ್ಲಾಡಳಿತ 100 ಶುಶ್ರೂಷಕರು ಮತ್ತು 193 ಡಿ ಗ್ರೂಪ್ ನೌಕರರ ನೇಮಕಕ್ಕೆ ಆಹ್ವಾನಿಸಿದ ಅರ್ಜಿಗೆ ಜೀವ ಭಯದಿಂದ ಒಬ್ಬರೇ ಒಬ್ಬರು ಮುಂದೆ ಬಂದಿಲ್ಲ.
'ಸರಕಾರ ಬೇರೆಯವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವ ಕೆಲಸ ಮಾಡುತ್ತಿದೆ. ಚುನಾಯಿತ ಪ್ರತಿನಿಧಿಗಳು, ಉನ್ನತಾಧಿಕಾರಿಗಳು ಪ್ರತಿದಿನ ಐದಾರು ಮೀಟಿಂಗ್ ಮಾಡಿ ಕೇವಲ ಅಂಕಿಅಂಶ ಕಲೆ ಹಾಕುತ್ತಿದ್ದಾರೆ ಹೊರತು ಮಾನಸಿಕವಾಗಿ ಕುಗ್ಗಿ ಹೋಗುತ್ತಿರುವ ವಾರಿಯರ್ಸ್ಗಳಿಗೆ ಆತ್ಮಸೈರ್ಯ ತುಂಬುವ ಕೆಲಸ ಆಗುತ್ತಿಲ್ಲ. ಸರಕಾರ ಮೊದಲು ಕುಟುಂಬದವರಿಗೆ ಲಸಿಕೆ ನೀಡಲಿ. ಬೇಡಿಕೆಗಳನ್ನು ಈಡೇರಿಸಲಿ' ಎಂದು ಮುಖಂಡರಾದ ಮ.ಸ.ನಂಜುಂಡಸ್ವಾಮಿ ಆಗ್ರಹಿಸಿದ್ದಾರೆ.