ಆ್ಯಪ್ನಗರ

ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಿಗೆ ಕೊರೊನಾ ಪಾಸಿಟಿವ್‌!

ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಿಗೆ ಕೊರೊನಾ ಸೋಂಕು ತಗಲಿರುವುದು ದೃಢಪಟ್ಟಿದೆ. ಇವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿರುವುದರಿಂದ ಪ್ರಭಾರ ಜವಾಬ್ದಾರಿಯನ್ನು ಉಪ ಆಯುಕ್ತ ಎಚ್.ಪಿ. ಪ್ರಮೋದ್ ಅವರಿಗೆ ವಹಿಸಲಾಗಿದೆ.

Vijaya Karnataka Web 31 Jul 2020, 9:15 pm
ಶಿವಮೊಗ್ಗ: ಮಹಾನಗರ ಪಾಲಿಕೆ ಆಯುಕ್ತರಿಗೆ ಕೊರೊನಾ ಸೋಂಕು ತಗಲಿರುವುದು ದೃಢಪಟ್ಟಿದೆ. ಇವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿರುವುದರಿಂದ ಪ್ರಭಾರ ಜವಾಬ್ದಾರಿಯನ್ನು ಉಪ ಆಯುಕ್ತ ಎಚ್.ಪಿ. ಪ್ರಮೋದ್ ಅವರಿಗೆ ವಹಿಸಲಾಗಿದೆ.
Vijaya Karnataka Web covid -19


ದಿನಿತ್ಯದ ಆಡಳಿತ ಮತ್ತು ಕೋವಿಡ್ ಸಂಬಂಧಿತ ಕಾರ್ಯಗಳಿಗೆ ಅಡಚಣೆ ಆಗಬಾರದೆಂಬ ಉದ್ದೇಶದಿಂದ ತಾತ್ಕಾಲಿಕ ವ್ಯವಸ್ಥೆಯಾಗಿ ಆಯುಕ್ತರ ಹುದ್ದೆಯ ಹೆಚ್ಚುವರಿ ಪ್ರಭಾರದಲ್ಲಿ ಕರ್ತವ್ಯ ನಿರ್ವಹಿಸುವಂತೆ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯಲ್ಲಿಕೊರೊನಾ ಪಾಸಿಟಿವ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿಜಿಲ್ಲಾಡಳಿತ ಕೋವಿಡ್‌ ಬೆಡ್‌ಗಳು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಸಜ್ಜುಗೊಳಿಸಿದ್ದು, ಜನರು ಗಾಬರಿಯಾಗುವ ಅಗತ್ಯವಿಲ್ಲಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ಹೇಳಿದ್ದಾರೆ.

ಪಠ್ಯಕ್ರಮ ಕಡಿತ ಸರಿಯಲ್ಲ: ಹೈಬ್ರಿಡ್‌ ಶಿಕ್ಷಣ ಅವಶ್ಯ- ಡಾ. ಉಷಾಪ್ರಭಾ ಎನ್‌. ನಾಯಕ್‌

ನಗರದ ಜಿಲ್ಲಾಪಂಚಾಯಿತಿ ಸಭಾಂಗಣದಲ್ಲಿಶುಕ್ರವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿ, ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಲಾಗಿರುವುದರಿಂದ ಪಾಸಿಟಿವ್‌ ಪ್ರಕರಣಗಳಲ್ಲಿಹೆಚ್ಚಳ ಉಂಟಾಗಿದೆ. ಸದ್ಯ ಪ್ರತಿ ದಿನ 950 ಜನರ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಆಗಸ್ಟ್‌ 1ರಿಂದ ಶೇ.12 ಇಪಿಎಫ್‌ ದೇಣಿಗೆ ಕಡಿತ: ಮತ್ತೆ ಹಳೇ ನಿಯಮಗಳ ಜಾರಿ!

ಶುಕ್ರವಾರ ಶಿವಮೊಗ್ಗದಲ್ಲಿ62, ಭದ್ರಾವತಿ 15, ಸೊರಬ 3, ಶಿಕಾರಿಪುರ 9, ಸಾಗರ 3, ಹೊಸನಗರ 1 ಮತ್ತು ಇತರ ಜಿಲ್ಲೆಯ 3 ಪ್ರಕರಣಗಳು ದೃಢಪಟ್ಟಿವೆ. ಜಿಲ್ಲಾಮೆಗ್ಗಾನ್‌ ಆಸ್ಪತ್ರೆಯ ಕೋವಿಡ್‌ ವಾರ್ಡ್‌ನಲ್ಲಿ227, ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ456, ಖಾಸಗಿ ಆಸ್ಪತ್ರೆಯಲ್ಲಿ 42 ಮತ್ತು ಮನೆಯಲ್ಲಿ71 ಜನ ಆರೈಕೆಯಲ್ಲಿದ್ದಾರೆ. ಶಿವಮೊಗ್ಗ ನಗರ ವ್ಯಾಪ್ತಿಯ ಅಣ್ಣಾನಗರ, ಬಾಪೂಜಿನಗರ, ನ್ಯೂಮಂಡ್ಲಿ, ಕುಂಸಿ, ರಂಗನಾಥ ಬಡಾವಣೆ, ಮಂಜುನಾಥ್‌ ಬಡಾವಣೆ, ಬೊಮ್ಮನಕಟ್ಟೆ, ರಂಗನಾಥ ಬಡಾವಣೆ ಮೊದಲನೆ ತಿರುವು, ಹೊಸಮನೆ ಮೂರನೇ ತಿರುವು, ಗಾಂಧಿ ಬಜಾರ್‌ ಸೇರಿ ವಿವಿಧೆಡೆ ಪ್ರಕರಣಗಳು ದೃಢಪಟ್ಟಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ