ಆ್ಯಪ್ನಗರ

ಪಠ್ಯ ಕಲಿಕೆಯೊಂದೇ ಪರಿಪೂರ್ಣವಲ್ಲ

ಪಠ್ಯಪುಸ್ತಕ ಅಧ್ಯಯನವೊಂದೇ ಪರಿಪೂರ್ಣ ಕಲಿಕೆಯಲ್ಲ. ಮಕ್ಕಳು ಸಮಾಜದಲ್ಲಿಬೆರೆಯಬೇಕು. ಒಳಿತು ಕೆಡುಕುಗಳನ್ನು ಅವಲೋಕಿಸಬೇಕು ಎಂದು ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಜಿಲ್ಲಾಮುಖ್ಯ ಆಯುಕ್ತ ಎಚ್‌.ಡಿ.ರಮೇಶ್‌ ಶಾಸ್ತ್ರಿ ಹೇಳಿದರು.

Vijaya Karnataka 19 Nov 2019, 5:00 am
ಶಿವಮೊಗ್ಗ: ಪಠ್ಯಪುಸ್ತಕ ಅಧ್ಯಯನವೊಂದೇ ಪರಿಪೂರ್ಣ ಕಲಿಕೆಯಲ್ಲ. ಮಕ್ಕಳು ಸಮಾಜದಲ್ಲಿಬೆರೆಯಬೇಕು. ಒಳಿತು ಕೆಡುಕುಗಳನ್ನು ಅವಲೋಕಿಸಬೇಕು ಎಂದು ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಜಿಲ್ಲಾಮುಖ್ಯ ಆಯುಕ್ತ ಎಚ್‌.ಡಿ.ರಮೇಶ್‌ ಶಾಸ್ತ್ರಿ ಹೇಳಿದರು.
Vijaya Karnataka Web course learning is not perfect
ಪಠ್ಯ ಕಲಿಕೆಯೊಂದೇ ಪರಿಪೂರ್ಣವಲ್ಲ


ನಗರದ ಸ್ಕೌಟ್ಸ್‌ ಭವನದಲ್ಲಿಸೋಮವಾರ ನಡೆದ ಜಿಲ್ಲಾಮಟ್ಟದ ಸ್ಕೌಟರ್ಸ್ ಮತ್ತು ಗೈಡರ್ಸ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಸ್ಕೌಟಿಂಗ್‌ ಮತ್ತು ಗೈಡಿಂಗ್‌ ಚಳವಳಿಯ ಬೆಳವಣಿಗೆಗೆ ಶಿಕ್ಷಕರ ಮತ್ತು ಶಿಕ್ಷಣ ಇಲಾಖೆ ಸಹಕಾರ ಮತ್ತು ಪ್ರೋತ್ಸಾಹ ಅತ್ಯವಶ್ಯಕ ಎಂದು ತಿಳಿಸಿದರು.

ಸ್ಕೌಟಿಂಗ್‌ ಮತ್ತು ಗೈಡಿಂಗ್‌ ತರಬೇತಿ ಹೊಂದಿದ ಪ್ರತಿಯೊಬ್ಬ ಶಿಕ್ಷಕರು ತಮ್ಮ ಶಾಲೆಯಲ್ಲಿಘಟಕಗಳನ್ನು ತೆರೆದು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕರಿಸಬೇಕು ಎಂದರು.

ಸ್ಕೌಟಿಂಗ್‌ ಮತ್ತು ಗೈಡಿಂಗ್‌ನಲ್ಲಿಸೇವೆ ಸಲ್ಲಿಸಿರುವ ಹಿರಿಯ ಸ್ಕೌಟರ್‌ ಮತ್ತು ಗೈಡರ್ಸ್ಗಳಿಗೆ ಸೇವಾ ಪದಕ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು. ಜಿಲ್ಲಾಆಯುಕ್ತೆ (ಗೈಡ್‌) ಶಕುಂತಲಾ ಚಂದ್ರಶೇಖರ್‌, ಜಿಲ್ಲಾಖಜಾಂಚಿ ಚೂಡಾಮಣಿ ಪವಾರ್‌, ಜಿಲ್ಲಾಕಾರ್ಯದರ್ಶಿ ಕೆ.ಪಿ.ಬಿಂದು ಕುಮಾರ್‌, ಜಿಲ್ಲಾಸಹ ಕಾರ್ಯದರ್ಶಿ ವೈ.ಆರ್‌.ವೀರೇಶಪ್ಪ, ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಭಾರತಿ ಡಾಯಸ್‌, ಜಿಲ್ಲಾತರಬೇತಿ ಆಯುಕ್ತ (ಸ್ಕೌಟ್‌) ಎಚ್‌. ಶಿವಶಂಕರ್‌, ಜಿಲ್ಲಾತರಬೇತಿ ಆಯುಕ್ತರು(ಗೈಡ್‌) ಸಿ.ಎಸ್‌ ಕಾತ್ಯಾಯಿನಿ, ಎ.ವಿ.ರಾಜೇಶ್‌, ಎಂ. ಗಣಪತಿ, ಜಿಲ್ಲೆಯ ಎಲ್ಲತಾಲೂಕಿನ ಕಾರ್ಯದರ್ಶಿಗಳು ಹಾಗೂ ವಿವಿಧ ಶಾಲೆಗಳ 100 ಸ್ಕೌಟರ್ಸ್ ಮತ್ತು ಗೈಡರ್ಸ್ಗಳು ಪಾಲ್ಗೊಂಡಿದ್ದರು.

=======================
ಮಕ್ಕಳಲ್ಲಿವಿನಯ, ವಿಧೇಯತೆ, ಶಿಸ್ತು ಮತ್ತು ಸಹೋದರತ್ವ ಕೇವಲ ಪುಸ್ತಕ ಓದುವುದರಿಂದ ಬರುವುದಿಲ್ಲ. ಅದಕ್ಕೆ ಸಹಪಠ್ಯ ಚಟುವಟಿಕೆಗಳಲ್ಲೂಪಾಲ್ಗೊಳ್ಳಬೇಕು. ಸರಿಯಾದ ಮಾರ್ಗದಲ್ಲಿನಡೆದು ಸಮಾಜವನ್ನು ಸರಿಯಾದ ಮಾರ್ಗದಲ್ಲಿನಡೆಸುವಂತಾದರೆ ಮಾತ್ರ ನಾವು ಕಲಿತ ವಿದ್ಯೆಗೆ ಮತ್ತು ವಿದ್ಯೆ ಕಲಿಸಿದ ಗುರುಗಳಿಗೆ ಬೆಲೆ ನೀಡಿದಂತಾಗುತ್ತದೆ.
-ಜಿಲ್ಲಾಮುಖ್ಯ ಆಯುಕ್ತ ಎಚ್‌.ಡಿ.ರಮೇಶ್‌ ಶಾಸ್ತ್ರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ