ಆ್ಯಪ್ನಗರ

ಕ್ರೈಂಗೆ ಸ್ಕೆಚ್‌, ನಾಲ್ವರ ಬಂಧನ

ಅಪರಾಧ ಎಸಗಲು ಕಣಿವೆ ಮಾರಮ್ಮ ದೇಗುಲ ಸಮೀಪದ ಬೈಪಾಸ್‌ ರಸ್ತೆಯಲ್ಲಿನಿಂತು ಹೊಂಚು ಹಾಕುತ್ತಿದ್ದ ಅನುಮಾನಾಸ್ಪದ ನಾಲ್ವರು ವ್ಯಕ್ತಿಗಳನ್ನು ನಗರದ ನ್ಯೂಟೌನ್‌ ಪೊಲೀಸರು ಗುರುವಾರ ರಾತ್ರಿ ಬಂಧಿಸಿದ್ದಾರೆ.

Vijaya Karnataka 20 Oct 2019, 5:00 am
ಭದ್ರಾವತಿ: ಅಪರಾಧ ಎಸಗಲು ಕಣಿವೆ ಮಾರಮ್ಮ ದೇಗುಲ ಸಮೀಪದ ಬೈಪಾಸ್‌ ರಸ್ತೆಯಲ್ಲಿನಿಂತು ಹೊಂಚು ಹಾಕುತ್ತಿದ್ದ ಅನುಮಾನಾಸ್ಪದ ನಾಲ್ವರು ವ್ಯಕ್ತಿಗಳನ್ನು ನಗರದ ನ್ಯೂಟೌನ್‌ ಪೊಲೀಸರು ಗುರುವಾರ ರಾತ್ರಿ ಬಂಧಿಸಿದ್ದಾರೆ.
Vijaya Karnataka Web crime sketch detention of four
ಕ್ರೈಂಗೆ ಸ್ಕೆಚ್‌, ನಾಲ್ವರ ಬಂಧನ


ಶಿವಮೊಗ್ಗ ಪುರಲೆ ವಾಸಿಗಳಾದ ಮಂಜುನಾಥ್‌(22), ರಮೇಶ್‌ಕುಮಾರ್‌(21), ಅರಸೀಕೆರೆ ವಾಸಿ ಮನೋಜ್‌(21) ಹಾಗೂ ಬೆಂಗಳೂರಿನ

ಕಾರ್ತಿಕ್‌(21) ಬಂಧಿತ ಆರೋಪಿಗಳು. ಇವರು ಕಣಿವೆ ಮಾರಮ್ಮ ದೇಗುಲ ಸಮೀಪ ಕೊಲೆ, ದರೋಡೆ ಹಾಗೂ ಸುಲಿಗೆ ಮಾಡುವ ಸಲುವಾಗಿ ಸಂಚು ಹೂಡಿದ್ದರು. ಆರೋಪಿಗಳಿಂದ ಕೃತ್ಯಕ್ಕೆ ಬಳಸುತ್ತಿದ್ದ 7ಲಾಂಗ್‌, ಖಾರದಪುಡಿ, ಮಂಕಿಕ್ಯಾಪ್‌, 6 ಮೊಬೈಲ್‌ ಹಾಗೂ ಮಹೇಂದ್ರ ಬೊಲೇರೊ ವಾಹನ ವಶಕ್ಕೆ ಪಡೆಯಲಾಗಿದೆ.

ಇತ್ತೀಚೆಗೆ ಸರಗಳ್ಳತನ ಹಾಗೂ ದರೋಡೆ ಪ್ರಕರಣ ನಡೆಯುತ್ತಿರುವ ಹಿನ್ನೆಲೆಯಲ್ಲಿನಗರದ ಡಿವೈಎಸ್‌ಪಿ ಸುಧಾಕರ್‌ ಎಸ್‌.ನಾಯ್ಕ, ನಗರ ವೃತ್ತ ನಿರೀಕ್ಷಕ ನಂಜಪ್ಪ ಮಾರ್ಗದರ್ಶನದಲ್ಲಿನ್ಯೂಟೌನ್‌ ಪಿಎಸ್‌ಐ ಸರ್ವಮಂಗಳ ಹಾಗೂ ಸಿಬ್ಬಂದಿ ತಪಾಸಣೆ ಮಾಡಿದರು. ಈ ಸಂದರ್ಭ ಬೊಲೇರೋ ವಾಹನದಲ್ಲಿದ್ದ ನಾಲ್ವರು ಅನುಮಾನಾಸ್ಪದ ವ್ಯಕ್ತಿಗಳು ಓಡಿ ಹೋಗಲು ಯತ್ನಿಸಿದ್ದಾರೆ. ಪೊಲೀಸರು ಅವರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಸಂಚು ಬಯಲಾಗಿದೆ. ಕಾರಾರ‍ಯಚರಣೆಯಲ್ಲಿಠಾಣೆಯ ಎಎಸ್‌ಐ ಶಿವಕುಮಾರ್‌, ಸಿಬ್ಬಂದಿ ನಂಜುಂಡಪ್ಪ, ಕುಬೇರಪ್ಪ, ಮಂಜುನಾಥ್‌, ಹಾಲಪ್ಪ, ಪಾಲಾಕ್ಷನಾಯ್ಕ, ತಮ್ಮಣ್ಣ, ಮಂಜುನಾಥ್‌, ಬಸವರಾಜ್‌, ಆರೋಗ್ಯಸ್ವಾಮಿ, ಮಧುಸೂದನ್‌ ಪಾಲ್ಗೊಂಡಿದ್ದರು. ಆರೋಪಿಗಳನ್ನು ಶುಕ್ರವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂಧಿಸಿದ ಪೊಲೀಸ್‌ ಸಿಬ್ಬಂದಿಗಳನ್ನು ಎಸ್ಪಿ ಕೆ.ಎಂ.ಶಾಂತರಾಜ್‌ ಅಭಿನಂದಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ