ಆ್ಯಪ್ನಗರ

ಗ್ರಾಮೀಣ ವಿದ್ಯಾರ್ಥಿಗೆ ಸೈಕಲ್‌ ಉಪಯುಕ್ತ

ಸ್ಥಳೀಯ ಜನಪ್ರತಿನಿಧಿಗಳು, ಸಂಘಸಂಸ್ಥೆಗಳು ಕಾಳಜಿ ವಹಿಸಿದರೆ ಗ್ರಾಮೀಣ ಶಿಕ್ಷಣ ಸಂಸ್ಥೆಗಳನ್ನು ಉನ್ನತ ಮಟ್ಟಕ್ಕೆ ಏರಿಸಲು ಸಾಧ್ಯ ಎಂದು ಮಾಸ್ತಿಕಟ್ಟೆಯ ಚಂಡಿಕಾಂಬ ಅನುದಾನಿತ ಪ್ರೌಢಶಾಲಾ ಸಮಿತಿ ಅಧ್ಯಕ್ಷ ಎಚ್‌.ಕೆ.ವಿದ್ಯಾನಂದರಾವ್‌ ಹೇಳಿದರು.

Vijaya Karnataka 24 Sep 2019, 5:00 am
ಹೊಸನಗರ: ಸ್ಥಳೀಯ ಜನಪ್ರತಿನಿಧಿಗಳು, ಸಂಘಸಂಸ್ಥೆಗಳು ಕಾಳಜಿ ವಹಿಸಿದರೆ ಗ್ರಾಮೀಣ ಶಿಕ್ಷಣ ಸಂಸ್ಥೆಗಳನ್ನು ಉನ್ನತ ಮಟ್ಟಕ್ಕೆ ಏರಿಸಲು ಸಾಧ್ಯ ಎಂದು ಮಾಸ್ತಿಕಟ್ಟೆಯ ಚಂಡಿಕಾಂಬ ಅನುದಾನಿತ ಪ್ರೌಢಶಾಲಾ ಸಮಿತಿ ಅಧ್ಯಕ್ಷ ಎಚ್‌.ಕೆ.ವಿದ್ಯಾನಂದರಾವ್‌ ಹೇಳಿದರು.
Vijaya Karnataka Web cycle is useful for rural student
ಗ್ರಾಮೀಣ ವಿದ್ಯಾರ್ಥಿಗೆ ಸೈಕಲ್‌ ಉಪಯುಕ್ತ


ಮಾಸ್ತಿಕಟ್ಟೆ ಚಂಡಿಕಾಂಬಾ ಪ್ರೌಢಶಾಲೆಯಲ್ಲಿಶನಿವಾರ ಸೈಕಲ್‌ ವಿತರಣಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಗರ ಪ್ರದೇಶಕ್ಕೆ ಹೋಲಿಸಿದರೆ ಗ್ರಾಮೀಣ ಪ್ರದೇಶದಲ್ಲಿವಿದ್ಯಾರ್ಥಿ ಜೀವನ ಸುಲಭವಲ್ಲ. ಅದರಲ್ಲೂಮಲೆನಾಡು ಪ್ರದೇಶದಲ್ಲಿದೂರದ ಊರುಗಳಿಗೆ ಸಂಪರ್ಕ ಸಾಧಿಸುವುದೇ ಸಾಹಸದ ಕೆಲಸ. ಸೈಕಲ್‌ ವಿತರಣೆ ಯೋಜನೆ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ ಎಂದರು.

ತಾಪಂ ಸದಸ್ಯೆ ಶೋಭಾ ಮಂಜುನಾಥ್‌, ಶಾಲೆ ಪ್ರಗತಿಗಾಗಿ ರೂ.50 ಸಾವಿರ ಅನುದಾನವನ್ನು ತಾಲೂಕು ಪಂಚಾಯಿತಿಯಿಂದ ಒದಗಿಸುವುದಾಗಿ ಭರವಸೆ ನೀಡಿದರು. ಮುಖ್ಯ ಶಿಕ್ಷಕ ಪರಶುರಾಮ್‌, ಗ್ರಾಪಂ ಅಧ್ಯಕ್ಷ ಎನ್‌.ಟಿ.ಅನಿಲ್‌ಕುಮಾರ್‌, ಸದಸ್ಯ ಕೃಷ್ಣಮೂರ್ತಿ, ಅರುಣ್‌, ಪ್ರಮುಖರಾದ ಬಂಕ್ರೀಬೀಡು ಮಂಜುನಾಥ್‌, ಜಿ.ವಿ.ರವೀಂದ್ರ, ಗೋಪಾಲಗೌಡ, ವಿನಾಯಕ, ಹೊಂಬೇಗೌಡ, ವಾಸಪ್ಪ, ಪ್ರಕಾಶ್‌, ಸುರೇಶ್‌ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ