ಆ್ಯಪ್ನಗರ

ಹೈನುಗಾರಿಕೆ ನಮ್ಮ ಸಂಸ್ಕೃತಿಯ ಭಾಗ: ಆರಗ

ಹಾಲು ಉತ್ಪಾದಕರ ಪರವಾಗಿ ಹಾಲು ಒಕ್ಕೂಟ ಕೆಲಸ ಮಾಡದಿದ್ದರೆ ಹಾಲು ಉತ್ಪಾದನಾ ಕ್ಷೇತ್ರಕ್ಕೆ ಹಾನಿ ಉಂಟಾಗಲಿದೆ. ಹೈನುಗಾರಿಕೆ ಲಾಭದಾಯಕ ಎಂಬ ನಿರೀಕ್ಷೆ ಇಟ್ಟುಕೊಳ್ಳಬಾರದು ಎಂದು ಶಾಸಕ ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟರು.

Vijaya Karnataka 19 Jun 2019, 5:00 am
ತೀರ್ಥಹಳ್ಳಿ : ಹಾಲು ಉತ್ಪಾದಕರ ಪರವಾಗಿ ಹಾಲು ಒಕ್ಕೂಟ ಕೆಲಸ ಮಾಡದಿದ್ದರೆ ಹಾಲು ಉತ್ಪಾದನಾ ಕ್ಷೇತ್ರಕ್ಕೆ ಹಾನಿ ಉಂಟಾಗಲಿದೆ. ಹೈನುಗಾರಿಕೆ ಲಾಭದಾಯಕ ಎಂಬ ನಿರೀಕ್ಷೆ ಇಟ್ಟುಕೊಳ್ಳಬಾರದು ಎಂದು ಶಾಸಕ ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟರು.
Vijaya Karnataka Web dairying is part of our culture araraga
ಹೈನುಗಾರಿಕೆ ನಮ್ಮ ಸಂಸ್ಕೃತಿಯ ಭಾಗ: ಆರಗ


ತಾಲೂಕಿನ ಅರೇಹಳ್ಳಿಯಲ್ಲಿ ಸೋಮವಾರ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ಗೋಪಾಲನೆ, ಗೋ ಸಾಕಣೆ ನಮ್ಮ ಮಣ್ಣಿನ ಸಂಸ್ಕೃತಿಯ ಭಾಗವಾಗಿದೆ. ಲಾಭ, ನಷ್ಟದ ಗುರಿ ಇಲ್ಲದೆ ಹೈನುಗಾರಿಕೆಯಲ್ಲಿ ತೊಡಗುವಂತಹ ಮನೋಭಾವ ಬೆಳೆಯಬೇಕಿದೆ. ಇಂತಹ ಮನೋಭಾವದವರಿಂದ ಹಾಲು ಉದ್ಯಮ ಇಂದು ಬೆಳವಣಿಗೆ ಕಂಡಿದೆ ಎಂದರು.

ಶಿಮುಲ್‌ ಅಧ್ಯಕ್ಷ ಆನಂದ್‌, ಜಿ.ಪಂ. ಸದಸ್ಯೆ ಭಾರತೀ ಪ್ರಭಾಕರ್‌, ತಾ.ಪಂ. ಸದಸ್ಯೆ ಶೃತಿ, ಅರೇಹಳ್ಳಿ ಹಾಲು ಒಕ್ಕೂಟದ ಅಧ್ಯಕ್ಷರು, ಮತ್ತಿತರರು ಇದ್ದರು.
--------

10 ಎಕರೆ ಜಮೀನು ಸಾಗುವಳಿ ಮಾಡುವವರು ಇಂದು ಜಾನುವಾರು ಸಾಕಣೆಯಿಂದ ದೂರ ಸರಿದಿದ್ದಾರೆ. ರೈತಾಪಿಯ ಭವಿಷ್ಯದ ದೃಷ್ಟಿಯಿಂದ ಇಂತಹ ನಿರ್ಧಾರ ಒಳಿತು ಮಾಡದು. ನಷ್ಟವಾದರೂ ತೊಂದರೆ ಇಲ್ಲ ಎಂದು ಭಾವಿಸಿ ತಾನು 30 ವರ್ಷದಿಂದ ಗುಡ್ಡೇಕೊಪ್ಪ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಹಾಲು ಮಾರಾಟ ಮಾಡುತ್ತಿದ್ದೇನೆ.

- ಆರಗ ಜ್ಞಾನೇಂದ್ರ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ