ಆ್ಯಪ್ನಗರ

ಯಜಮಾನನ ರಕ್ಷಣೆಗೆ ಪ್ರಾಣ ಒತ್ತೆ ಇಟ್ಟ ನಾಯಿ

ತೊಗರ್ಸಿ ಸಮೀಪದ ಕವಲಿ ಗ್ರಾಮದಲ್ಲಿ ಸಾಕುನಾಯಿಯೊಂದು ತನ್ನ ಯಜಮಾನನನ್ನು ಜೀವ ರಕ್ಷಿಸುವ ಸಲುವಾಗಿ ಸಾವನ್ನೇ ಎದುರುಗೊಂಡ ಘಟನೆ ಗ್ರಾಮಸ್ಥರ ಮನಮಿಡಿಯುವಂತೆ ಮಾಡಿದೆ.

Vijaya Karnataka 14 Jun 2019, 5:00 am
ಶಿರಾಳಕೊಪ್ಪ: ತೊಗರ್ಸಿ ಸಮೀಪದ ಕವಲಿ ಗ್ರಾಮದಲ್ಲಿ ಸಾಕುನಾಯಿಯೊಂದು ತನ್ನ ಯಜಮಾನನನ್ನು ಜೀವ ರಕ್ಷಿಸುವ ಸಲುವಾಗಿ ಸಾವನ್ನೇ ಎದುರುಗೊಂಡ ಘಟನೆ ಗ್ರಾಮಸ್ಥರ ಮನಮಿಡಿಯುವಂತೆ ಮಾಡಿದೆ.
Vijaya Karnataka Web SMR-11SLKP02 PHOTO 01


ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗ್ರಾಮದ ಅಂತರಗಂಗೆ ಕೆರೆಯ ಕಾಮಗಾರಿ ಇತ್ತೀಚೆಗೆ ನಡೆಯುತ್ತಿತ್ತು. ಕಾಮಗಾರಿ ಕೆಲಸಕ್ಕೆ ಬಂದಿದ್ದ ಗ್ರಾಮದ ಚೆನ್ನಕ್ಕಾರ ಮಂಜು ಮಡಿವಾಳರ ಸಣ್ಣ ಪೊದೆಯ ಹತ್ತಿರ ಕೆಲಸ ಮಾಡುತ್ತಿದ್ದರು. ಅವರ ಪ್ರೀತಿಯ ಸಾಕು ನಾಯಿ ಎಂದಿನಂತೆ ಅವರನ್ನು ಹಿಂಬಾಲಿಸಿ ಬಂದಿತ್ತು. ಕಾರ್ಮಿಕ ಮಂಜು ಕಾಮಗಾರಿಯಲ್ಲಿ ಮಗ್ನರಾಗಿದ್ದಾಗ ಪೊದೆಯೊಳಗಿದ್ದ ಕೊಳಕು ಮಂಡಲ ಹಾವು ಅವರತ್ತ ನುಗ್ಗಿ ಬಂದಿದೆ. ಇದನ್ನು ಕಂಡ ಅವರ ನಾಯಿ ಹಾವನ್ನು ತಡೆಯಲು ಮುಂದಾಗಿದೆ. ಆದರೆ, ರೋಷಗೊಂಡಿದ್ದ ಹಾವು ತನ್ನತ್ತ ಎರಗಿದರೂ ಹಿಂದೆ ಸರಿಯದ ನಾಯಿಗೆ ಹಾವು ಕಚ್ಚಿದೆ. ನಾಯಿಯೂ ಹಾವನ್ನು ಕಚ್ಚಿ ಕೊಂದುಹಾಕಿ ಬಳಿಕ ನರಳಿ ನರಳಿ ಪ್ರಾಣಬಿಟ್ಟಿದೆ. ಸಾಕಿದ ನಾಯಿ ತನ್ನ ನಿಯತ್ತು ಮೆರೆದು ಯಜಮಾನನ ಋುಣ ತೀರಿಸಿ ಪ್ರಾಣ ಬಿಡುವ ಮೂಲಕ ನೆರೆದಿದ್ದವರ ಅಂತಃಕರಣ ಕರಗುವಂತೆ ಮಾಡಿದೆ.

ಸಾಕು ನಾಯಿಗಳು ಯಜಮಾನನಿಗಾಗಿ ತಮ್ಮ ಪ್ರಾಣ ಪಣಕ್ಕಿಟ್ಟು ಹೋರಾಡುವುದನ್ನು ಕೇಳಿದ್ದೆವು. ಈಗ ಕಣ್ಣಾರೆ ಕಂಡು ಮನ ಕಲಕುವಂತೆ ಮಾಡಿದೆ ಎಂದು ಗ್ರಾಮ ನಿವೃತ್ತ ಶಿಕ್ಷ ಕ ಡಿ.ಚನ್ನಬಸಪ್ಪ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ