ಆ್ಯಪ್ನಗರ

ಸಾಲ ಬಾಧೆ: ಕೃಷಿಕ ಆತ್ಮಹತ್ಯೆ

ಸಾಲದ ಬಾಧೆಯಿಂದ ಕಂಗೆಟ್ಟ ಕೃಷಿಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ತಾಲೂಕಿನ ಸೊನಲೆ ಗ್ರಾಮದ ನಿವಾಸಿ ದಿನೇಶ(40) ಮೃತ ವ್ಯಕ್ತಿ.

Vijaya Karnataka 5 Oct 2019, 5:00 am
ಹೊಸನಗರ: ಸಾಲದ ಬಾಧೆಯಿಂದ ಕಂಗೆಟ್ಟ ಕೃಷಿಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ತಾಲೂಕಿನ ಸೊನಲೆ ಗ್ರಾಮದ ನಿವಾಸಿ ದಿನೇಶ(40) ಮೃತ ವ್ಯಕ್ತಿ. ಅವಿಭಕ್ತ ಕುಟುಂಬದ ಸದಸ್ಯನಾಗಿದ್ದ ಮೃತ ವ್ಯಕ್ತಿ ತನ್ನ ಸಹೋದರರ ಜತೆ ಅಡಕೆ, ಶುಂಠಿ ಬೆಳೆಯುತ್ತಿದ್ದ.
Vijaya Karnataka Web debt impact agrarian suicide
ಸಾಲ ಬಾಧೆ: ಕೃಷಿಕ ಆತ್ಮಹತ್ಯೆ

ಒಟ್ಟು 7 ಎಕರೆ 30 ಗುಂಟೆ ಜಮೀನು ಹೊಂದಿದ್ದ ಸಹೋದರರು ಡಿಸಿಸಿ ಬ್ಯಾಂಕ್‌ ನಿಂದ ರೂ.12 ಲಕ್ಷ ಕೃಷಿ ಸಾಲ ಮಾಡಿಕೊಂಡಿದ್ದರು. ಆದರೆ ಬೆಳೆ ಕೈಕೊಟ್ಟು ನಷ್ಟ ಉಂಟಾಗಿತ್ತು. ಅಡಕೆಗೆ ಕೊಳೆರೋಗ ಬಂದಿದ್ದು, ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಬ್ಯಾಂಕಿನಿಂದ ಸಾಲ ತೀರುವಳಿ ಮಾಡುವಂತೆ ಸೂಚನೆ ಬಂದ ಹಿನ್ನೆಲೆಯಲ್ಲಿಬೇಸರಗೊಂಡಿದ್ದ.
ಬುಧವಾರ ರಾತ್ರಿ ರಾಸಾಯನಿಕ ದ್ರವ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಿದರೂ, ಫಲಕಾರಿಯಾಗದೇ ಗುರುವಾರ ಮೃತಪಟ್ಟಿದ್ದಾನೆ ಎಂದು ಮೃತ ವ್ಯಕ್ತಿಯ ಹಿರಿಯ ಸಹೋದರ ಶ್ರೀನಿವಾಸ ಎಂಬುವವರು ದೂರು ಸಲ್ಲಿಸಿದ್ದಾರೆ. ಪಟ್ಟಣದ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ