ಆ್ಯಪ್ನಗರ

ವಿನಯ ವಿದ್ಯಾರ್ಥಿಗೆ ಭೂಷಣ

ಮಕ್ಕಳಿಗೆ ವಿನಯ, ಮಾನವೀಯ ಮೌಲ್ಯ ಬೆಳೆಸಬೇಕೆಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

Vijaya Karnataka 11 Jan 2020, 5:00 am
ರಿಪ್ಪನ್‌ಪೇಟೆ: ಮಕ್ಕಳಿಗೆ ವಿನಯ, ಮಾನವೀಯ ಮೌಲ್ಯ ಬೆಳೆಸಬೇಕೆಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
Vijaya Karnataka Web 8RPT4_46
ರಿಪ್ಪನ್‌ಪೇಟೆ ರಾಮಕೃಷ್ಣ ವಿದ್ಯಾಲಯದಲ್ಲಿಭಾನುವಾರ ಶ್ರೀಮಾತೆ ಶಾರದಾದೇವಿಯ 167 ನೇ ಜಯಂತಿ ಮತ್ತು ಮಕ್ಕಳ ಸಾಂಸ್ಕೃತಿಕ ಸೌರಭ ಸಮಾರೋಪ ಉದ್ಘಾಟಿಸಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿದರು


ಪಟ್ಟಣದ ಶಾರದ ರಾಮಕೃಷ್ಣ ವಿದ್ಯಾಲಯದಲ್ಲಿಭಾನುವಾರ ಶ್ರೀಮಾತೆ ಶಾರದಾದೇವಿಯ 167ನೇ ಜಯಂತಿ ಮತ್ತು ಮಕ್ಕಳ ಸಾಂಸ್ಕೃತಿಕ ಸೌರಭ ಸಮಾರೋಪ ಉದ್ಘಾಟಿಸಿ ವಿದ್ಯಾಲಯದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಸಮಾರೋಪದ ಸಾನ್ನಿಧ್ಯ ವಹಿಸಿದ್ದ ನಿಟ್ಟೂರು ನಾರಾಯಣಗುರು ಮಹಾಸಂಸ್ಥಾನಮಠದ ಶ್ರೀ ರೇಣುಕಾನಂದ ಸ್ವಾಮೀಜಿ ಮಾತನಾಡಿ, ಲೇಖನಿ ಹಿಡಿಯುವ ಕೈಗಳು ಗನ್‌ ಹಿಡಿಯುತ್ತಿರುವುದು ವಿಷಾದನೀಯ ಸಂಗತಿ. ಶಿಕ್ಷಣದೊಂದಿಗೆ ಸಂಸ್ಕಾರ ಕಲಿಸಿ ಹೃದಯವಂತಿಕೆ, ಮಾನವೀಯ ಮೌಲ್ಯ ಬೆಳೆಸಬೇಕಿದೆ ಎಂದರು.

ಶಾಸಕ ಹರತಾಳು ಹಾಲಪ್ಪ ಮತ್ತು ಆರಗಜ್ಞಾನೇಂದ್ರ ಅವರನ್ನು ಸಂಸ್ಥೆಯವರು ಸನ್ಮಾನಿಸಿ ಗೌರವಿಸಿದರು. ಶಾರದಾ ರಾಮಕೃಷ್ಣ ವಿದ್ಯಾಲಯದ ಸಂಸ್ಥಾಪಕ ಡಿ.ಎಂ.ದೇವರಾಜ್‌ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ನಿವೃತ್ತ ಸೇನಾನಿ ಭದ್ರಪ್ಪ, ಮಂಜುಸಿಂಗ್‌ ಹಾಗೂ ಪ್ರಗತಿಪರ ಕೃಷಿಕ ನಾಟಿ ವೈದ್ಯ ತೊರೆಗದ್ದೆ ಲೋಕಪ್ಪಗೌಡ, ಈಶ್ವರಪ್ಪಗೌಡ ಹಾಗೂ ಕಳೆದ ಸಾಲಿನಲ್ಲಿಎಸ್‌ಎಸ್‌ಎಲ್‌ಸಿಯಲ್ಲಿಅತಿಹೆಚ್ಚು ಅಂಕಗಳಿಸಿದ ಲಿಖಿತ ಅವರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ರವಿ ಸ್ವಾಗತಿಸಿದರು. ವಿದ್ಯಾರ್ಥಿಗಳು ನಿರೂಪಿಸಿದರು. ಶಾರದಾ ರಾಮಕೃಷ್ಣ ವಿದ್ಯಾಲಯದ ಪ್ರಾಚಾರ್ಯ ಸುಧಾಕರ ವಂದಿಸಿದರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

=====
ಮಕ್ಕಳಿಗೆ ಸಂಸ್ಕಾರ ಕೊಡಬೇಕು. ಹೆಚ್ಚಿನ ಅಂಕಗಳಿಸಿ ಉನ್ನತ ಹುದ್ದೆ ಅಲಂಕರಿಸುವ ಆಸೆಯಿರುವುದು ಸಹಜ. ಮಾನವೀಯಮೌಲ್ಯಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು.
-ಆರಗಜ್ಷಾನೇಂದ್ರ, ಶಾಸಕರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ