ಆ್ಯಪ್ನಗರ

ಕಾಂಗ್ರೆಸ್‌ ಸೋಲಿಗೆ ‘ಮೈತ್ರಿ’ ಕಾರಣ: ಎಚ್‌ಎಂಸಿ

ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡ ಕಾರಣದಿಂದಲೆ ಕಾಂಗ್ರೆಸ್‌ ದಯನೀಯ ಸೋಲು ಅನುಭವಿಸಬೇಕಾಯಿತು ಎಂದು ಕಾಂಗ್ರೆಸ್‌ ಮುಖಂಡ ಮತ್ತು ರಾಜ್ಯ ಮಾಜಿ ಶಾಸಕರ ಸಂಘದ ಅಧ್ಯಕ್ಷ ಎಚ್‌.ಎಂ.ಚಂದ್ರಶೇಖರಪ್ಪ ಹೇಳಿದರು.

Vijaya Karnataka 28 May 2019, 5:00 am
ಶಿವಮೊಗ್ಗ: ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡ ಕಾರಣದಿಂದಲೆ ಕಾಂಗ್ರೆಸ್‌ ದಯನೀಯ ಸೋಲು ಅನುಭವಿಸಬೇಕಾಯಿತು ಎಂದು ಕಾಂಗ್ರೆಸ್‌ ಮುಖಂಡ ಮತ್ತು ರಾಜ್ಯ ಮಾಜಿ ಶಾಸಕರ ಸಂಘದ ಅಧ್ಯಕ್ಷ ಎಚ್‌.ಎಂ.ಚಂದ್ರಶೇಖರಪ್ಪ ಹೇಳಿದರು.
Vijaya Karnataka Web defeat due to congress alliance defeat hmc
ಕಾಂಗ್ರೆಸ್‌ ಸೋಲಿಗೆ ‘ಮೈತ್ರಿ’ ಕಾರಣ: ಎಚ್‌ಎಂಸಿ


ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರದೆ ಅತಂತ್ರವಾದ ಹಿನ್ನೆಲೆಯಲ್ಲಿ ಮೈತ್ರಿ ಮಾಡಿಕೊಂಡಿದ್ದು ಅನಿವಾರ್ಯವಾಗಿತ್ತು. ಆದರೆ, ಚುನಾವಣೆಗೆ ಮೈತ್ರಿ ಮಾಡಿಕೊಳ್ಳುವುದು ಸರಿಯಾದ ನಿರ್ಧಾರವಲ್ಲ. ನಮ್ಮದು ರಾಷ್ಟ್ರೀಯ ಪಕ್ಷವಾದ್ದರಿಂದ ಸ್ಥಳೀಯ ಪಕ್ಷದೊಂದಿಗೆ ಮೈತ್ರಿ ಬೇಕಾಗಿರಲಿಲ್ಲ. ಯಾರನ್ನೂ ವಿಶ್ವಾಸಕ್ಕೆ ಪಡೆಯದೆ ನಾಯಕರು ಕೈಗೊಂಡ ತೀರ್ಮಾನವು ಪಕ್ಷಕ್ಕೆ ದುಬಾರಿ ಎನಿಸಿತು ಎಂದು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಪೂರ್ವದಲ್ಲಿ ಪಕ್ಷದ ನಾಯಕರು ಕಾರ್ಯಕರ್ತರೊಂದಿಗೆ ಚರ್ಚೆ ಮಾಡಲಿಲ್ಲ. ಮೈತ್ರಿ ಎನ್ನುವುದು ರಾಜ್ಯ ಮಟ್ಟದ ಮುಖಂಡರ ನಡುವೆ ಆಯಿತೆ ಹೊರತು ಸ್ಥಳೀಯವಾಗಿ ಆಗಲೇ ಇಲ್ಲ. ಮೈತ್ರಿಯಲ್ಲಿ ಅಪಸ್ವರ ಯಾವುದೋ ಒಂದು ಕ್ಷೇತ್ರಕ್ಕೆ ಅಲ್ಲದೆ ರಾಜ್ಯದ ಎಲ್ಲ ಭಾಗಗಳಲ್ಲೂ ಎದುರಾಯಿತು. ಸ್ಥಳೀಯವಾಗಿ ಯಾರಿಗೂ ಮೈತ್ರಿ ಇಷ್ಟವಿರಲಿಲ್ಲ. ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ನಾಯಕರ ತೀರ್ಮಾನದಿಂದ ಪಕ್ಷಕ್ಕೆ ದೊಡ್ಡ ಪೆಟ್ಟು ಬಿದ್ದಿದೆ ಎಂದರು.

ಟಿಕೆಟ್‌ ಹಂಚಿಕೆ ಮಾಡುವಾಗಲೂ ಶಿವಮೊಗ್ಗದಲ್ಲಿ ಅರ್ಜಿಯನ್ನೇ ಸ್ವೀಕರಿಸಲಿಲ್ಲ. ಅರ್ಜಿ ಸಲ್ಲಿಸಿದರೂ ಪರಿಗಣಿಸಲಿಲ್ಲ. ಸ್ಥಳೀಯ ವಿಚಾರಗಳು ಸ್ಥಳೀಯ ಮುಖಂಡರಿಗೆ ಗೊತ್ತಿರುತ್ತದೆಯೆ ಹೊರತು ರಾಜ್ಯ ಅಥವಾ ರಾಷ್ಟ್ರಮಟ್ಟದ ಮುಖಂಡರಿಗೆ ಅಲ್ಲ. ಈ ಸೋಲು ಮುಖಂಡರಿಗೆ ಪಾಠವಾಗಬೇಕು. ಆತ್ಮಾವಲೋಕನ ಮಾಡಿಕೊಳ್ಳುವುದರ ಜತೆಗೆ ಪಕ್ಷದ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕಿದೆ ಎಂದರು.

ವೀರಶೈವರ ಕಡೆಗಣನೆ ಸರಿಯಲ್ಲ: ಪಕ್ಷದೊಳಗೆ ವೀರಶೈವ ಮುಖಂಡರ ಕಡೆಗಣಿಸಿ ಕೆಲವೇ ಜಾತಿಯವರಿಗೆ ಮಣಿ ಹಾಕಲಾಗುತ್ತಿದೆ. ರಾಜ್ಯದಲ್ಲಿ ಪ್ರಬಲವಾಗಿರುವ ವೀರಶೈವ ಸಮಾಜವನ್ನು ನಿರ್ಲಕ್ಷ್ಯ ಮಾಡಬಾರದು. ಚುನಾವಣೆಯಲ್ಲಿ ಸೋಲು ಗೆಲುವು ಸಹಜವಾದುದು. ಸೋತೆವೆಂದು ಕುಗ್ಗುವುದು ಬೇಕಾಗಿಲ್ಲ. ಆಗಿರುವ ತಪ್ಪುಗಳು, ಲೋಪಗಳನ್ನು ಗುರುತಿಸಿ ಪಕ್ಷವನ್ನು ಬೂತ್‌ ಮಟ್ಟದಿಂದ ಸಂಘಟಿಸುವ ಕೆಲಸವನ್ನು ಮುಖಂಡರು ಮಾಡಬೇಕು ಎಂದು ಆಗ್ರಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ