ಆ್ಯಪ್ನಗರ

ಶಿಕಾರಿಪುರದಲ್ಲಿ ಆಧಾರ್‌ ಕೇಂದ್ರ ಆರಂಭಕ್ಕೆ ಆಗ್ರಹ

ಪಟ್ಟಣದಲ್ಲಿ ಆಧಾರ್‌ ಕೇಂದ್ರ ಇಲ್ಲದೆ ಜನರು ಪರದಾಡುತ್ತಿದ್ದು ಜಿಲ್ಲಾಡಳಿತ ಸೂಕ್ತಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಗುರುವಾರ ತಹಸೀಲ್ದಾರ್‌ ಕಚೇರಿ ಎದುರು ಜನಸಾಮಾನ್ಯರು ಪ್ರತಿಭಟಿಸಿದರು.

Vijaya Karnataka 21 Jun 2019, 5:00 am
ಶಿಕಾರಿಪುರ: ಪಟ್ಟಣದಲ್ಲಿ ಆಧಾರ್‌ ಕೇಂದ್ರ ಇಲ್ಲದೆ ಜನರು ಪರದಾಡುತ್ತಿದ್ದು ಜಿಲ್ಲಾಡಳಿತ ಸೂಕ್ತಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಗುರುವಾರ ತಹಸೀಲ್ದಾರ್‌ ಕಚೇರಿ ಎದುರು ಜನಸಾಮಾನ್ಯರು ಪ್ರತಿಭಟಿಸಿದರು.
Vijaya Karnataka Web SMR-20SKP1


ಆಧಾರ್‌ ಕೇಂದ್ರ ತಹಸೀಲ್ದಾರ್‌ ಕಚೇರಿಯಲ್ಲಿ ಕಾರ‍್ಯನಿರ್ವಹಿಸುತ್ತಿಲ್ಲ, ಎಸ್‌ಬಿಐ ಬ್ಯಾಂಕ್‌ನಲ್ಲಿ ತಿಂಗಳು ಕಳೆದರೂ ಸರತಿ ಬರುವುದಿಲ್ಲ. ಜನರ ಸಮಸ್ಯೆಗೆ ಪರಿಹಾರ ನೀಡಬೇಕೆಂದು ಮಹಿಳೆಯರು, ಮಕ್ಕಳ ತಂಡ ಉಪತಹಸೀಲ್ದಾರ್‌ ಶೈಲಜಾ ಅವರಿಗೆ ಮನವಿ ಮಾಡಲು ಹೋಗಿದ್ದರು. ಆಗ ಅವರು ನೀವು ಎಲ್ಲಾದರೂ ಆಧಾರ್‌ ಮಾಡಿಸಿ ನಮ್ಮಲ್ಲಿ ಈಗ ಆಗುವುದಿಲ್ಲ ಎಂದು ಹೇಳಿದ್ದರಿಂದ ಸಿಟ್ಟಾದ ಜನರು ತಹಸೀಲ್ದಾರ್‌ ಕಚೇರಿ ಎದುರಲ್ಲೆ ಪ್ರತಿಭಟನೆ ನಡೆಸಿ ತಾಲೂಕು ಜಿಲ್ಲಾಡಳಿತದ ವಿರುದ್ಧ ಧಿಕ್ಕಾರ ಕೂಗುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು.

ಶಾಲೆಗೆ ಮಕ್ಕಳ ನೋಂದಾಯಿಸುವುದಕ್ಕೆ , ಪಡಿತರ ಚೀಟಿ ತಿದ್ದುಪಡಿಗೆ, ಆದಾಯ, ಮುಖಂಡ ಕೃಷಿಕರು ಸರಕಾರದ ವಿವಿಧ ಸೌಲಭ್ಯ ಪಡೆಯುವುದಕ್ಕಾಗಿ, ಭಾಗ್ಯಲಕ್ಷಿ ಪಡೆಯುವುದಕ್ಕೆ ಸಣ್ಣ ಮಕ್ಕಳಿಗೆ, ಜಾತಿ ಪ್ರಮಾಣ ಪತ್ರ ಒಟಿಸಿ ಪದ್ಧತಿಯಲ್ಲಿ ತಪ್ಪು ನಮೂದಾಗಿರುವುದು ಸರಿಪಡಿಸುವುದು ಸೇರಿ ಹಲವು ಸೌಲಭ್ಯಕ್ಕಾಗಿ ಆಧಾರ್‌ ಕಾರ್ಡ್‌ ಕಡ್ಡಾಯವಾಗಿದೆ. ಹೊಸ ಆಧಾರ್‌ ಕಾರ್ಡ್‌, ತಿದ್ದುಪಡಿಗಾಗಿ ಪಟ್ಟಣದಲ್ಲಿ ಯಾವುದೇ ಸೌಲಭ್ಯ ಇಲ್ಲವಾಗಿದೆ. ಎಸ್‌ಬಿಐ ಬ್ಯಾಂಕ್‌ನಲ್ಲಿ ಕೇಂದ್ರ ಇದ್ದರೂ ಎರಡು ತಿಂಗಳ ಕಾಲ ಕಾಯಬೇಕಿದೆ. 4ಗಂಟೆ ನಂತರ ಮಾಡುವಂತಿಲ್ಲ, ಸರ್ವರ್‌ ಸಮಸ್ಯೆಯಿಂದಾಗಿ ದಿನಕ್ಕೆ 20 ಜನರಿಗೆ ಮಾತ್ರ ಸೌಲಭ್ಯ ಸಿಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಗ್ರಾಮೀಣರು ಕೂಲಿ ಬಿಟ್ಟು, ಮಕ್ಕಳನ್ನು ಶಾಲೆ ಬಿಡಿಸಿ ಆಧಾರ್‌ ಕಾರ್ಡ್‌ ಮಾಡುವುದಕ್ಕೆ ತಿಂಗಳುಗಟ್ಟಲೆ ಅಲೆಯುವಂತಾಗಿದೆ. ಹಣ ಇದ್ದವರು ಶಿರಾಳಕೊಪ್ಪ, ಆನಂದಪುರ, ಹೊನ್ನಾಳಿ ಎಸ್‌ಬಿಐ ಬ್ಯಾಂಕ್‌ಗೆ ತೆರಳಿ ಆಧಾರ್‌ ಕಾರ್ಡ್‌ ಮಾಡಿಸುತ್ತಿದ್ದಾರೆ, ಬಡವರು ಮಾತ್ರ ಸೌಲಭ್ಯವೂ ಸಿಗದೆ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸುಮ್ಮನಾಗುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಕೂಡಲೇ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ