ಆ್ಯಪ್ನಗರ

ಅನಾಥ ಮಗು ದತ್ತು ಪಡೆಯಲು ಬಲುಬೇಡಿಕೆ!

ನಗರದ ಆಭರಣ ಜ್ಯುವೆಲರಿ ಸಮೀಪ ಇತ್ತೀಚೆಗೆ ಅನಾಥವಾಗಿ ಸಿಕ್ಕಿದ್ದ ಮಗುವನ್ನು ದತ್ತು ಪಡೆಯಲು ನಾನಾ ಕಡೆಗಳಿಂದ ಹಲವು ಕರೆಗಳು ಬಂದಿವೆ.

Vijaya Karnataka 19 Aug 2019, 10:03 pm
ಶಿವಮೊಗ್ಗ: ನಗರದ ಆಭರಣ ಜ್ಯುವೆಲರಿ ಸಮೀಪ ಇತ್ತೀಚೆಗೆ ಅನಾಥವಾಗಿ ಸಿಕ್ಕಿದ್ದ ಮಗುವನ್ನು ದತ್ತು ಪಡೆಯಲು ನಾನಾ ಕಡೆಗಳಿಂದ ಹಲವು ಕರೆಗಳು ಬಂದಿವೆ.
Vijaya Karnataka Web demand for an orphan child adoption
ಅನಾಥ ಮಗು ದತ್ತು ಪಡೆಯಲು ಬಲುಬೇಡಿಕೆ!


ಮೂರ್ನಾಲ್ಕು ದಿನಗಳದ್ದೆಂದು ಹೇಳಲಾಗಿದ್ದ ಗಂಡು ಮಗುವನ್ನು ದತ್ತು ಪಡೆಯುವುದಕ್ಕೆ ದೂರವಾಣಿ ಮುಖೇನ ಸಂಪರ್ಕಿಸಿದ್ದಾರೆ. ಜ್ಯುವೆಲರಿ ಅಂಗಡಿ ಪಕ್ಕದಲ್ಲಿರುವ ಹೋಟೆಲ್‌ ಟೆರೇಸ್‌ ಮೇಲೆ ದೊರೆತಿದ್ದ ಮಗುವನ್ನು ರಕ್ಷಿಸಿದ್ದ ಮಕ್ಕಳ ಸಹಾಯವಾಣಿ ಮತ್ತು ಜಿಲ್ಲಾ ಮಕ್ಕಳ ಕಲ್ಯಾಣ ಘಟಕದ ಸಿಬ್ಬಂದಿ ಮಗುವನ್ನು ಮೆಗ್ಗಾನ್‌ ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗಕ್ಕೆ ನೀಡಿದ್ದರು. ಅದಕ್ಕೆ ತುರ್ತು ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು.

ಮಗುವನ್ನು ಪಡೆಯಲು ಮುಂದೆ ಬಂದರೂ ಕಾನೂನಿನ ರೀತ್ಯ ಪ್ರಕ್ರಿಯೆ ಮಾಡಬೇಕಾಗುತ್ತದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ ಮಗುವಿಗೆ ದತ್ತು ಪಡೆಯಬೇಕಾಗುತ್ತದೆ. ಹೀಗಾಗಿ, ದತ್ತು ಪಡೆಯಲು ಮುಂದಾಗಿರುವವರನ್ನು ಬುಧವಾರ ನಡೆಯಲಿರುವ ಘಟಕದ ಸಭೆಗೆ ಬರಲು ಸೂಚನೆ ನೀಡಲಾಗಿದೆ.

===

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ