ಆ್ಯಪ್ನಗರ

ಅಡಕೆ ಬೆಳೆಗಾರರ ನೆರವಿಗೆ ಆಗ್ರಹ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಉತ್ತಮ ಆಡಳಿತ ನೀಡಿದರೂ ರೈತರನ್ನು ಕಡೆಗಣಿಸಿದ್ದು, ಬೆಳೆಗಾರರ ಪರವಾಗಿ ಮತ್ತಷ್ಟು ಯೋಜನೆಗಳನ್ನು ಮೋದಿ ಸರಕಾರ ನೀಡುವಂತಾಗಬೇಕು. ರಾಜ್ಯದ ಸಾಂಪ್ರದಾಯಿಕ ಅಡಕೆ ಬೆಳೆಗಾರರನ್ನು ಸಂರಕ್ಷಿಸಬೇಕು ಎಂದು ಅಡಕೆ ಬೆಳೆಗಾರರಾದ ಲಕ್ಷ್ಮೀನಾರಾಯಣ ಪಿ. ಹಿರೇಮನೆ ಹೇಳಿದರು.

Vijaya Karnataka 18 Apr 2019, 5:00 am
ಸಾಗರ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಉತ್ತಮ ಆಡಳಿತ ನೀಡಿದರೂ ರೈತರನ್ನು ಕಡೆಗಣಿಸಿದ್ದು, ಬೆಳೆಗಾರರ ಪರವಾಗಿ ಮತ್ತಷ್ಟು ಯೋಜನೆಗಳನ್ನು ಮೋದಿ ಸರಕಾರ ನೀಡುವಂತಾಗಬೇಕು. ರಾಜ್ಯದ ಸಾಂಪ್ರದಾಯಿಕ ಅಡಕೆ ಬೆಳೆಗಾರರನ್ನು ಸಂರಕ್ಷಿಸಬೇಕು ಎಂದು ಅಡಕೆ ಬೆಳೆಗಾರರಾದ ಲಕ್ಷ್ಮೀನಾರಾಯಣ ಪಿ. ಹಿರೇಮನೆ ಹೇಳಿದರು.
Vijaya Karnataka Web demand for help from adeke growers
ಅಡಕೆ ಬೆಳೆಗಾರರ ನೆರವಿಗೆ ಆಗ್ರಹ


ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಚಿಕ್ಕಮಗಳೂರಿಗೆ ಚುನಾವಣೆ ಪ್ರಚಾರಕ್ಕೆ ಬಂದಿದ್ದ ಸಂದರ್ಭ ಅಡಕೆಗೆ ಗೌರವ ತಂದು ಕೊಡುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಸುಪ್ರೀಂಕೋರ್ಟ್‌ನಲ್ಲಿ ಅಡಕೆ ಹಾನಿಕಾರಕ ಎನ್ನುವ ಚರ್ಚೆ ನಡೆಯುತ್ತಿದ್ದು, ಕೇಂದ್ರ ಸರಕಾರ ಈ ಬಗ್ಗೆ ಅಡಕೆ ಔಷಧೀಯ ಗುಣಗಳನ್ನು ಹೊಂದಿದೆ ಎನ್ನುವ ಅಫಿಡವಿಟ್‌ ಸಹ ಸಲ್ಲಿಸಿಲ್ಲ. ಔಷಧೀಯ ಗುಣವುಳ್ಳ ಆಹಾರ ಪದಾರ್ಥ ಎನ್ನುವುದನ್ನು ಕೇಂದ್ರದ ಗಮನಕ್ಕೆ ತರುತ್ತೇನೆ ಎಂಬ ಭರವಸೆ ನೀಡಿದ್ದ ಅಮಿತ್‌ ಷಾ ಅವರು ಸಹ ಮೌನ ವಹಿಸಿದ್ದಾರೆ ಎಂದರು.

ಕೇಂದ್ರ ಸರಕಾರ ಅಡಕೆ ಆಮದು ನಿಲ್ಲಿಸುವ ಬಗ್ಗೆ ಗಮನ ಹರಿಸಬೇಕು. ರೈತಪರವಾದ ಫಸಲ್‌ಬಿಮಾದಂಥ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗಬೇಕು ಎಂದು ಒತ್ತಾಯಿಸಿದರು.

ಶ್ರೀನಿವಾಸ್‌ ಹಿರೇಮನೆ, ಗಣಪತಿ ಕಾಶಿ ಸಿದ್ದನಕಾಯಿ, ನಟರಾಜ ಹಿರೇಮನೆ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ