ಆ್ಯಪ್ನಗರ

ಸಚಿವ ನಾಗೇಶ್‌ ವಜಾಕ್ಕೆ ಆಗ್ರಹ

ಲಂಬಾಣಿ ತಾಂಡಗಳಿಗೆ ಸಂಚಾರಿ ವಾಹನ ಮೂಲಕ ಮದ್ಯ ಸರಬರಾಜು ಮಾಡಲಾಗುವುದು ಎಂದು ಹೇಳಿಕೆ ನೀಡಿದ ಅಬಕಾರಿ ಸಚಿವ ನಾಗೇಶ ವಿರುದ್ಧ ತಾಲೂಕು ಬಂಜಾರ್‌ ಸಮುದಾಯದ ಯುವಕರು ಶುಕ್ರವಾರ ಪ್ರತಿಭಟಿಸಿದರು.

Vijaya Karnataka 15 Sep 2019, 5:00 am
ಶಿಕಾರಿಪುರ: ಲಂಬಾಣಿ ತಾಂಡಗಳಿಗೆ ಸಂಚಾರಿ ವಾಹನ ಮೂಲಕ ಮದ್ಯ ಸರಬರಾಜು ಮಾಡಲಾಗುವುದು ಎಂದು ಹೇಳಿಕೆ ನೀಡಿದ ಅಬಕಾರಿ ಸಚಿವ ನಾಗೇಶ ವಿರುದ್ಧ ತಾಲೂಕು ಬಂಜಾರ್‌ ಸಮುದಾಯದ ಯುವಕರು ಶುಕ್ರವಾರ ಪ್ರತಿಭಟಿಸಿದರು.
Vijaya Karnataka Web 245913SKP2_46


ಈ ಸಂದರ್ಭ ಜಿ.ಪಂ. ಸದಸ್ಯ ನರಸಿಂಗನಾಯ್ಕ ಮಾತನಾಡಿ, ಬಂಜಾರ್‌ ಸಮುದಾಯ ಇತ್ತೀಚೆಗೆ ಏಳಿಗೆ ಹೊಂದುತ್ತಿದೆ, ನಮ್ಮ ತಾಂಡ ನಿವಾಸಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ತನ್ಮೂಲಕ ಒಳ್ಳೆಯ ಉದ್ಯೋಗ ಮಾಡುತ್ತಿದ್ದಾರೆ. ಮಹಿಳೆಯರೂ ಮುಖ್ಯವಾಹಿನಿಗೆ ಬರುವಂತಾಗುತ್ತಿದೆ. ಈ ಹಂತದಲ್ಲಿಸರಕಾರ ನಮ್ಮ ತಾಂಡಕ್ಕೆ ಮದ್ಯ ಸರಬರಾಜು ಮಾಡುವ ಹೇಳಿಕೆಯನ್ನು ಸಚಿವರು ನೀಡಿದ್ದಾರೆ. ನಮ್ಮ ಸಮುದಾಯದ ಜನರನ್ನು ಮತ್ತೊಮ್ಮೆ ಬಡತನ, ಅನಕ್ಷರತೆ ಕಡೆಗೆ ಒಯ್ಯುವ ಕುತಂತ್ರ ಈ ಹೇಳಿಕೆ ಹಿಂದಿದೆ ಎಂದು ಆರೋಪಿಸಿದರು.

ಸಭೆಗೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿಮೆರವಣಿಗೆ ನಡೆಸಿ ಸಚಿವರ ವಿರುದ್ಧ ಘೋಷಣೆ ಕೂಗಲಾಯಿತು. ತಹಸೀಲ್ದಾರ್‌ ಕಚೇರಿ ಎದುರು ಸಚಿವರ ಪ್ರತಿಕೃತಿ ಸುಡಲಾಯಿತು. ಸಚಿವರನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ಸಮಾಜದ ಯುವ ಮುಖಂಡರಾದ ರಾಘುನಾಯ್ಕ, ಹಾಲೇಶನಾಯ್ಕ ಅಂಬಾರಗೊಪ್ಪ, ಮಲ್ಲಿಕನಾಯ್ಕ ತರಲಘಟ್ಟ, ನಾಗರಾಜನಾಯ್ಕ, ಗಿರೀಶ್‌ ಅಂಜನಾಪುರ, ಚಂದ್ರುನಾಯ್ಕ ಹೊಸೂರು, ಗಿರೀಶ್‌ನಾಯ್ಕ, ಚಂದನ್‌ ಅಂಬಾರಗೊಪ್ಪ, ಶ್ರೀಕಾಂತನಾಯ್ಕ ದೊಡ್ಡತಾಂಡ, ಸಂತೋಷ್‌ನಾಯ್ಕ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ