ಕೋಣಂದೂರು ಗ್ರಾ.ಪಂ.ಆಡಳಿತ ಸೂಪರ್ಸೀಡ್ಗೆ ಆಗ್ರಹ
ಅಧಿಕಾರ ಬಳಸಿ ಸರಕಾರ, ಸಾರ್ವಜನಿಕರಿಗೆ ಸೇರಿದ ಲಕ್ಷಾಂತರ ರೂ. ಹಣ ದುರುಪಯೋಗಪಡಿಸಿಕೊಳ್ಳಲಾಗಿದೆ. ಆದ್ದರಿಂದ ಕೋಣಂದೂರು ಗ್ರಾಮ ಪಂಚಾಯಿತಿ ಆಡಳಿತವನ್ನು ತಕ್ಷಣ ಸೂಪರ್ಸೀಡ್ ಮಾಡಬೇಕೆಂದು ಗ್ರಾ.ಪಂ. ಮಾಜಿ ಅಧ್ಯಕ್ಷ ಕಲ್ಗದ್ದೆರತ್ನಾಕರ್, ಮಾಜಿ ಸದಸ್ಯ ಕೋಣಂದೂರು ಅಶೋಕ್, ಸ್ಥಳೀಯ ಮುಖಂಡ ಮುರುಘರಾಜ್ ಆಗ್ರಹಿಸಿದರು.
Vijaya Karnataka 16 Dec 2018, 5:00 am
ತೀರ್ಥಹಳ್ಳಿ: ಅಧಿಕಾರ ಬಳಸಿ ಸರಕಾರ, ಸಾರ್ವಜನಿಕರಿಗೆ ಸೇರಿದ ಲಕ್ಷಾಂತರ ರೂ. ಹಣ ದುರುಪಯೋಗಪಡಿಸಿಕೊಳ್ಳಲಾಗಿದೆ. ಆದ್ದರಿಂದ ಕೋಣಂದೂರು ಗ್ರಾಮ ಪಂಚಾಯಿತಿ ಆಡಳಿತವನ್ನು ತಕ್ಷಣ ಸೂಪರ್ಸೀಡ್ ಮಾಡಬೇಕೆಂದು ಗ್ರಾ.ಪಂ. ಮಾಜಿ ಅಧ್ಯಕ್ಷ ಕಲ್ಗದ್ದೆರತ್ನಾಕರ್, ಮಾಜಿ ಸದಸ್ಯ ಕೋಣಂದೂರು ಅಶೋಕ್, ಸ್ಥಳೀಯ ಮುಖಂಡ ಮುರುಘರಾಜ್ ಆಗ್ರಹಿಸಿದರು.
ಶನಿವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗ್ರಾ.ಪಂ.ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಅನುಷ್ಠಾನವಾಗುತ್ತಿಲ್ಲ. ಕಾಮಗಾರಿ ಹೆಸರಲ್ಲಿ ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗಿದೆ. ರಸ್ತೆ ಬದಿ ಸಸಿ ನೆಡಲಾಗಿದೆ ಎಂದು ಸಾಮಾಜಿಕ ಅರಣ್ಯ ಕಾರ್ಯಕ್ರಮದ ಹೆಸರಲ್ಲಿ 6 ಲಕ್ಷ ರೂ. ಬಿಲ್ ಮಾಡಲಾಗಿದೆ ಎಂದು ಆರೋಪಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರ ನಡುವೆ ಸಮನ್ವಯತೆ ಇಲ್ಲ. ಆರ್ಟಿಸಿ, ಪಡಿತರಚೀಟಿ, ಕಂದಾಯ, ಲೈಸೆನ್ಸ್ ನೀಡಿಕೆಯಲ್ಲಿ ಪಡೆಯಲಾದ ಶುಲ್ಕ ಸಂಪೂರ್ಣ ದುರುಪಯೋಗಗೊಂಡಿದೆ. ಪಿಡಿಒ ಅವರನ್ನು ಅಮಾನತುಗೊಳಿಸಿ ಉಳಿದ ತಪ್ಪಿತಸ್ಥರನ್ನು ಬಚಾವ್ ಮಾಡುವ ಪ್ರಯತ್ನ ನಡೆಯುತ್ತಿದೆ. ಪ್ರಧಾನ ಮಂತ್ರಿ ವಸತಿ ಯೋಜನೆಯಡಿ 59 ಫಲಾನುಭವಿಗಳ ಮನೆಗೆ ಬಿಲ್ ಪಾವತಿ ಮಾಡಿಲ್ಲ. ನರೇಗಾ ಯೋಜನೆಯಡಿ ಕಾರ್ಮಿಕರಿಗೆ ಕೂಲಿ ವೇತನ ನೀಡಿಲ್ಲ ಎಂದು ದೂರಿದರು.
ಹಣ ದುರುಪಯೋಗ, ಅಭಿವೃದ್ಧಿಯಲ್ಲಿ ಹಿನ್ನಡೆ ವಿಷಯ ಗೊತ್ತಿದ್ದರೂ ಸದಸ್ಯರೆಲ್ಲರೂ ಸುಮ್ಮನಿದ್ದಾರೆ. ಅಕ್ರಮ ನಡೆಯಲು ಸದಸ್ಯರು ಸಹಕರಿಸಿದ್ದಾರೆ ಎಂಬ ಅನುಮಾನ ಸಾರ್ವಜನಿಕರಲ್ಲಿದೆ. 2005ರ ನಂತರದ ಆಡಳಿತ ಪ್ರಕ್ರಿಯೆಯನ್ನು ಸಂಪೂರ್ಣ ತನಿಖೆ ನಡೆಸಿ ಅಕ್ರಮ ಎಸಗಿದವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಸದರಿ ಆಡಳಿತದಲ್ಲಿ ಅಕ್ರಮ ಸಾಬೀತಾಗಿರುವ ಹಿನ್ನೆಲೆಯಲ್ಲಿ ಪಂಚಾಯಿತಿಯನ್ನು ಸೂಪರ್ಸೀಡ್ ಮಾಡಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
========================
ನಿಜವಾದ ತಪ್ಪಿತಸ್ಥರನ್ನು ರಕ್ಷಿಸುವ ಪ್ರಭಾವದ ವಿರುದ್ಧ ಪ್ರತಿಭಟನೆ ಅನಿವಾರ್ಯ. ಸಾರ್ವಜನಿಕರಿಗೆ ನ್ಯಾಯ ಸಿಗಬೇಕೆಂಬ ಸದುದ್ದೇಶದಿಂದ ಗ್ರಾಮ ಪಂಚಾಯಿತಿ ಆಡಳಿತದ ಹಗರಣವನ್ನು ಬಯಲಿಗೆ ಎಳೆಯಲಾಗುತ್ತಿದೆ. ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸಾರ್ವಜನಿಕರ ಕೆಲಸ ಆಗುತ್ತಿಲ್ಲ. ಹತ್ತಾರು ಬಾರಿ ಅಲೆಯಬೇಕಾಗಿದೆ.
- ಕೋಣಂದೂರು ಅಶೋಕ್
=============================
ಅವ್ಯವಹಾರ ನಡೆದಿದೆ ಎಂಬ ಹಿನ್ನೆಲೆಯಲ್ಲಿ ಪಿಡಿಒ ಅವರನ್ನು ಅಮಾನತುಗೊಳಿಸಿದ ನಂತರ ಉಳಿದವರ ಮೇಲೆ ಕಾನೂನು ಕ್ರಮ ಏಕೆ ಜರುಗಿಲ್ಲ. ಪಿಡಿಒ ಮಾತ್ರ ತಪ್ಪು ಮಾಡಿಲ್ಲ. ಹಿಂದಿನ ಪಿಡಿಓ, ಗ್ರಾಮ ಪಂಚಾಯಿತಿ ಆಡಳಿತ ತಪ್ಪು ಮಾಡಿದೆ. ವಿವಿಧ ಬಾಬ್ತುಗಳಲ್ಲಿ ನಡೆದಿರುವ ಅವ್ಯವಹಾರ, ಅಧಿಕಾರ ದುರ್ಬಳಕೆ ಕಾಣುವಷ್ಟಿದೆ. ಸರಕಾರ ಕ್ರಮ ತೆಗೆದುಕೊಳ್ಳದಿದ್ದರೆ ಪ್ರತಿಭಟನೆ ನಡೆಸಲಾಗುತ್ತದೆ.
- ಕಲ್ಗದ್ದೆರತ್ನಾಕರ್
============================
ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಅವ್ಯವಹಾರ ಹಿರಿಯ ಅಧಿಕಾರಿಗಳ ಗಮನದಲ್ಲಿದೆ. ಸಾರ್ವಜನಿಕರು ಪ್ರತಿಭಟನೆ ನಡೆಸಿ ತನಿಖೆ ನಡೆಸಬೇಕೆಂದು ಆಗ್ರಹಿಸಿದ ಮೇಲೆ ಕಾನೂನು ಕ್ರಮ ಜರುಗಿದೆ. 1ವರ್ಷ ಹಿಂದಿನ ಆಡಳಿತ ವಹಿವಾಟು ಕುರಿತು ತನಿಖೆ ನಡೆಸಿರುವ ಹಿಂದೆ ಹಗರಣ ಮುಚ್ಚುವ ಹುನ್ನಾರ ನಡೆದಿರುವುದನ್ನು ಸ್ಪಷ್ಟವಾಗಿ ಗಮನಿಸಬಹುದಾಗಿದೆ.
- ಮುರುಘರಾಜ್
ಶನಿವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗ್ರಾ.ಪಂ.ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಅನುಷ್ಠಾನವಾಗುತ್ತಿಲ್ಲ. ಕಾಮಗಾರಿ ಹೆಸರಲ್ಲಿ ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗಿದೆ. ರಸ್ತೆ ಬದಿ ಸಸಿ ನೆಡಲಾಗಿದೆ ಎಂದು ಸಾಮಾಜಿಕ ಅರಣ್ಯ ಕಾರ್ಯಕ್ರಮದ ಹೆಸರಲ್ಲಿ 6 ಲಕ್ಷ ರೂ. ಬಿಲ್ ಮಾಡಲಾಗಿದೆ ಎಂದು ಆರೋಪಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರ ನಡುವೆ ಸಮನ್ವಯತೆ ಇಲ್ಲ. ಆರ್ಟಿಸಿ, ಪಡಿತರಚೀಟಿ, ಕಂದಾಯ, ಲೈಸೆನ್ಸ್ ನೀಡಿಕೆಯಲ್ಲಿ ಪಡೆಯಲಾದ ಶುಲ್ಕ ಸಂಪೂರ್ಣ ದುರುಪಯೋಗಗೊಂಡಿದೆ. ಪಿಡಿಒ ಅವರನ್ನು ಅಮಾನತುಗೊಳಿಸಿ ಉಳಿದ ತಪ್ಪಿತಸ್ಥರನ್ನು ಬಚಾವ್ ಮಾಡುವ ಪ್ರಯತ್ನ ನಡೆಯುತ್ತಿದೆ. ಪ್ರಧಾನ ಮಂತ್ರಿ ವಸತಿ ಯೋಜನೆಯಡಿ 59 ಫಲಾನುಭವಿಗಳ ಮನೆಗೆ ಬಿಲ್ ಪಾವತಿ ಮಾಡಿಲ್ಲ. ನರೇಗಾ ಯೋಜನೆಯಡಿ ಕಾರ್ಮಿಕರಿಗೆ ಕೂಲಿ ವೇತನ ನೀಡಿಲ್ಲ ಎಂದು ದೂರಿದರು.
ಹಣ ದುರುಪಯೋಗ, ಅಭಿವೃದ್ಧಿಯಲ್ಲಿ ಹಿನ್ನಡೆ ವಿಷಯ ಗೊತ್ತಿದ್ದರೂ ಸದಸ್ಯರೆಲ್ಲರೂ ಸುಮ್ಮನಿದ್ದಾರೆ. ಅಕ್ರಮ ನಡೆಯಲು ಸದಸ್ಯರು ಸಹಕರಿಸಿದ್ದಾರೆ ಎಂಬ ಅನುಮಾನ ಸಾರ್ವಜನಿಕರಲ್ಲಿದೆ. 2005ರ ನಂತರದ ಆಡಳಿತ ಪ್ರಕ್ರಿಯೆಯನ್ನು ಸಂಪೂರ್ಣ ತನಿಖೆ ನಡೆಸಿ ಅಕ್ರಮ ಎಸಗಿದವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಸದರಿ ಆಡಳಿತದಲ್ಲಿ ಅಕ್ರಮ ಸಾಬೀತಾಗಿರುವ ಹಿನ್ನೆಲೆಯಲ್ಲಿ ಪಂಚಾಯಿತಿಯನ್ನು ಸೂಪರ್ಸೀಡ್ ಮಾಡಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
========================
ನಿಜವಾದ ತಪ್ಪಿತಸ್ಥರನ್ನು ರಕ್ಷಿಸುವ ಪ್ರಭಾವದ ವಿರುದ್ಧ ಪ್ರತಿಭಟನೆ ಅನಿವಾರ್ಯ. ಸಾರ್ವಜನಿಕರಿಗೆ ನ್ಯಾಯ ಸಿಗಬೇಕೆಂಬ ಸದುದ್ದೇಶದಿಂದ ಗ್ರಾಮ ಪಂಚಾಯಿತಿ ಆಡಳಿತದ ಹಗರಣವನ್ನು ಬಯಲಿಗೆ ಎಳೆಯಲಾಗುತ್ತಿದೆ. ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸಾರ್ವಜನಿಕರ ಕೆಲಸ ಆಗುತ್ತಿಲ್ಲ. ಹತ್ತಾರು ಬಾರಿ ಅಲೆಯಬೇಕಾಗಿದೆ.
- ಕೋಣಂದೂರು ಅಶೋಕ್
=============================
ಅವ್ಯವಹಾರ ನಡೆದಿದೆ ಎಂಬ ಹಿನ್ನೆಲೆಯಲ್ಲಿ ಪಿಡಿಒ ಅವರನ್ನು ಅಮಾನತುಗೊಳಿಸಿದ ನಂತರ ಉಳಿದವರ ಮೇಲೆ ಕಾನೂನು ಕ್ರಮ ಏಕೆ ಜರುಗಿಲ್ಲ. ಪಿಡಿಒ ಮಾತ್ರ ತಪ್ಪು ಮಾಡಿಲ್ಲ. ಹಿಂದಿನ ಪಿಡಿಓ, ಗ್ರಾಮ ಪಂಚಾಯಿತಿ ಆಡಳಿತ ತಪ್ಪು ಮಾಡಿದೆ. ವಿವಿಧ ಬಾಬ್ತುಗಳಲ್ಲಿ ನಡೆದಿರುವ ಅವ್ಯವಹಾರ, ಅಧಿಕಾರ ದುರ್ಬಳಕೆ ಕಾಣುವಷ್ಟಿದೆ. ಸರಕಾರ ಕ್ರಮ ತೆಗೆದುಕೊಳ್ಳದಿದ್ದರೆ ಪ್ರತಿಭಟನೆ ನಡೆಸಲಾಗುತ್ತದೆ.
- ಕಲ್ಗದ್ದೆರತ್ನಾಕರ್
============================
ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಅವ್ಯವಹಾರ ಹಿರಿಯ ಅಧಿಕಾರಿಗಳ ಗಮನದಲ್ಲಿದೆ. ಸಾರ್ವಜನಿಕರು ಪ್ರತಿಭಟನೆ ನಡೆಸಿ ತನಿಖೆ ನಡೆಸಬೇಕೆಂದು ಆಗ್ರಹಿಸಿದ ಮೇಲೆ ಕಾನೂನು ಕ್ರಮ ಜರುಗಿದೆ. 1ವರ್ಷ ಹಿಂದಿನ ಆಡಳಿತ ವಹಿವಾಟು ಕುರಿತು ತನಿಖೆ ನಡೆಸಿರುವ ಹಿಂದೆ ಹಗರಣ ಮುಚ್ಚುವ ಹುನ್ನಾರ ನಡೆದಿರುವುದನ್ನು ಸ್ಪಷ್ಟವಾಗಿ ಗಮನಿಸಬಹುದಾಗಿದೆ.
- ಮುರುಘರಾಜ್