ಭದ್ರಾವತಿ: ತಾಲೂಕಿನ ಕಾಳಿಂಗನಹಳ್ಳಿಯಲ್ಲಿ ಆ3ರಂದು ನಡೆದ ವಿದ್ಯಾರ್ಥಿನಿ ಇಂದಿರಾಳ ಕೊಲೆ ಪ್ರಕರಣ ಬಗ್ಗೆ ಪೊಲೀಸರು ನಿಷ್ಪಕ್ಷ ಪಾತ ತನಿಖೆ ನಡೆಸಲಿ ಎಂದು ಪ್ರಗತಿಪರ ಸಂಘಟನೆಗಳ ಹಿರಿಯ ಮುಖಂಡ ಡಿ.ಸಿ.ಮಾಯಣ್ಣ ಆಗ್ರಹಿಸಿದರು.
ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೊಲೆಯಾಗಿರುವ ಯುವತಿ ಪರಿಶಿಷ್ಟ ಜಾತಿಗೆ ಸೇರಿದ್ದು ಪ್ರಥಮ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದು ಅಪ್ರಾಪ್ತೆಯಾಗಿದ್ದಾಳೆ. ಮೃತಳನ್ನು ಕತ್ತುಸೀಳಿ ಕೊಲೆ ಮಾಡಿದ್ದ ರೀತಿ ಗಮನಿಸಿದರೆ ಅತ್ಯಾಚಾರ ನಡೆದಿರಬಹುದೆಂಬ ಶಂಕೆ ಮೂಡುತ್ತದೆ ಎಂದರು.
ಫೋಕ್ಸೋ ಕಾಯ್ದೆ ಹಾಗು ಪರಿಶಿಷ್ಟ ಜಾತಿ ದೌರ್ಜನ್ಯ ಕಾಯ್ದೆ ಅಡಿ ಪ್ರಕರಣ ದಾಖಲಿಸಿಲ್ಲ. ತಾಲೂಕು ದಂಡಾಧಿಕಾರಿಗಳ ಸಮ್ಮುಖದಲ್ಲಿ ಶವ ಪರೀಕ್ಷೆ ನಡೆಸಿಲ್ಲ.ಆದ್ದರಿಂದ ಸೂಕ್ತ ತನಿಖೆ ನಡೆಸಿ ದಕ್ಷ ಅಧಿಕಾರಿಗಳಿಗೆ ತನಿಖೆ ವರ್ಗಾಯಿಸಬೇಕೆಂದು ಆಗ್ರಹಿಸಿದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಭದ್ರಾವತಿ ಸತ್ಯ ಮಾತನಾಡಿ, ಇಂದಿರಾಳ ಕೊಲೆ ಆರೋಪದಲ್ಲಿ ಮತ್ತೊಬ್ಬ ಆರೋಪಿ ಕೂಡ ಭಾಗಿಯಾಗಿರುವುದು ಆಕೆ ಬಳಸುತ್ತಿದ್ದ ಫೋನಿಂದ ತಿಳಿದು ಬಂದಿದೆ ಎಂದರು.
ದಸಂಸ ಜಿಲ್ಲಾ ಸಂಚಾಲಕ ಚಿನ್ನಯ್ಯ ಮಾತನಾಡಿ, ದೂರು ನೀಡಲು ಮುಂದಾದ ತಾಯಿಗೆ ಯಾವುದೇ ಮಾಹಿತಿ ನೀಡದೆ ಇರುವುದು ಖಂಡನೀಯ. ಪರಿಶಿಷ್ಟ ಜಾತಿ ದೌರ್ಜನ್ಯ ಕಾಯ್ದೆ ಅನ್ವಯ ಮೇಲ್ಮಟ್ಟದಲ್ಲಿ ತನಿಖೆ ನಡೆಸಿ ಮತ್ತೊಬ್ಬ ಆರೋಪಿಯನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷ ಸುರೇಶ್ ಮಾತನಾಡಿ, ಫೋನಿನ ಸಂಭಾಷಣಾ ಕುರಿತು ತನಿಖೆ ನಡೆಸಿದರೆ ಸತ್ಯಾಂಶ ಹೊರಬೀಳಲಿದೆ ಎಂದರು.
ಇಂದಿರಾಳ ತಾಯಿ ಲೀಲಾವತಿ ಮಾತನಾಡಿ, ವೈಯಕ್ತಿಕ ಕಾರಣದಿಂದ ಬೇರೆ ಊರಿಗೆ ಹೋದ ಸಂದರ್ಭ ಯಾರೋ ದುಷ್ಕರ್ಮಿಗಳು ಮಗಳನ್ನು ಕೊಲೆ ಮಾಡಿರುವುದಾಗಿ ದೂರು ಪಡೆದು ಪ್ರಕರಣ ದಾಖಲಿಸಿದ್ದಾರೆ. ಅವಿದ್ಯಾವಂತೆಯಾದ ತಾನು ಪೊಲೀಸರು ಹೇಳಿದ ಪ್ರಕಾರ ಸಹಿ ಮಾಡಿರುವುದಾಗಿ ಅಳಲು ತೋಡಿಕೊಂಡರು. ಗೋಷ್ಠಿಯಲ್ಲಿ ಪ್ರಗತಿಪರ ಸಂಘಟನೆಗಳ ಮುಖಂಡರಾದ ರವಿಕುಮಾರ್, ಎಂ.ಶ್ರೀನಿವಾಸನ್ ಮಾತನಾಡಿದರು. ಜಿ.ರಾಜು, ನಾಗವೇಣಿ, ಪರಮೇಶ್ವರಚಾರ್, ಜಯರಾಜ್ ಇತರರು ಇದ್ದರು.
ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೊಲೆಯಾಗಿರುವ ಯುವತಿ ಪರಿಶಿಷ್ಟ ಜಾತಿಗೆ ಸೇರಿದ್ದು ಪ್ರಥಮ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದು ಅಪ್ರಾಪ್ತೆಯಾಗಿದ್ದಾಳೆ. ಮೃತಳನ್ನು ಕತ್ತುಸೀಳಿ ಕೊಲೆ ಮಾಡಿದ್ದ ರೀತಿ ಗಮನಿಸಿದರೆ ಅತ್ಯಾಚಾರ ನಡೆದಿರಬಹುದೆಂಬ ಶಂಕೆ ಮೂಡುತ್ತದೆ ಎಂದರು.
ಫೋಕ್ಸೋ ಕಾಯ್ದೆ ಹಾಗು ಪರಿಶಿಷ್ಟ ಜಾತಿ ದೌರ್ಜನ್ಯ ಕಾಯ್ದೆ ಅಡಿ ಪ್ರಕರಣ ದಾಖಲಿಸಿಲ್ಲ. ತಾಲೂಕು ದಂಡಾಧಿಕಾರಿಗಳ ಸಮ್ಮುಖದಲ್ಲಿ ಶವ ಪರೀಕ್ಷೆ ನಡೆಸಿಲ್ಲ.ಆದ್ದರಿಂದ ಸೂಕ್ತ ತನಿಖೆ ನಡೆಸಿ ದಕ್ಷ ಅಧಿಕಾರಿಗಳಿಗೆ ತನಿಖೆ ವರ್ಗಾಯಿಸಬೇಕೆಂದು ಆಗ್ರಹಿಸಿದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಭದ್ರಾವತಿ ಸತ್ಯ ಮಾತನಾಡಿ, ಇಂದಿರಾಳ ಕೊಲೆ ಆರೋಪದಲ್ಲಿ ಮತ್ತೊಬ್ಬ ಆರೋಪಿ ಕೂಡ ಭಾಗಿಯಾಗಿರುವುದು ಆಕೆ ಬಳಸುತ್ತಿದ್ದ ಫೋನಿಂದ ತಿಳಿದು ಬಂದಿದೆ ಎಂದರು.
ದಸಂಸ ಜಿಲ್ಲಾ ಸಂಚಾಲಕ ಚಿನ್ನಯ್ಯ ಮಾತನಾಡಿ, ದೂರು ನೀಡಲು ಮುಂದಾದ ತಾಯಿಗೆ ಯಾವುದೇ ಮಾಹಿತಿ ನೀಡದೆ ಇರುವುದು ಖಂಡನೀಯ. ಪರಿಶಿಷ್ಟ ಜಾತಿ ದೌರ್ಜನ್ಯ ಕಾಯ್ದೆ ಅನ್ವಯ ಮೇಲ್ಮಟ್ಟದಲ್ಲಿ ತನಿಖೆ ನಡೆಸಿ ಮತ್ತೊಬ್ಬ ಆರೋಪಿಯನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷ ಸುರೇಶ್ ಮಾತನಾಡಿ, ಫೋನಿನ ಸಂಭಾಷಣಾ ಕುರಿತು ತನಿಖೆ ನಡೆಸಿದರೆ ಸತ್ಯಾಂಶ ಹೊರಬೀಳಲಿದೆ ಎಂದರು.
ಇಂದಿರಾಳ ತಾಯಿ ಲೀಲಾವತಿ ಮಾತನಾಡಿ, ವೈಯಕ್ತಿಕ ಕಾರಣದಿಂದ ಬೇರೆ ಊರಿಗೆ ಹೋದ ಸಂದರ್ಭ ಯಾರೋ ದುಷ್ಕರ್ಮಿಗಳು ಮಗಳನ್ನು ಕೊಲೆ ಮಾಡಿರುವುದಾಗಿ ದೂರು ಪಡೆದು ಪ್ರಕರಣ ದಾಖಲಿಸಿದ್ದಾರೆ. ಅವಿದ್ಯಾವಂತೆಯಾದ ತಾನು ಪೊಲೀಸರು ಹೇಳಿದ ಪ್ರಕಾರ ಸಹಿ ಮಾಡಿರುವುದಾಗಿ ಅಳಲು ತೋಡಿಕೊಂಡರು. ಗೋಷ್ಠಿಯಲ್ಲಿ ಪ್ರಗತಿಪರ ಸಂಘಟನೆಗಳ ಮುಖಂಡರಾದ ರವಿಕುಮಾರ್, ಎಂ.ಶ್ರೀನಿವಾಸನ್ ಮಾತನಾಡಿದರು. ಜಿ.ರಾಜು, ನಾಗವೇಣಿ, ಪರಮೇಶ್ವರಚಾರ್, ಜಯರಾಜ್ ಇತರರು ಇದ್ದರು.