ಆ್ಯಪ್ನಗರ

ಹಕ್ಕು ಪ್ರಬಲವಾದಾಗ ಪ್ರಜಾಪ್ರಭುತ್ವ ಸದೃಢ

ವೈಯಕ್ತಿಕ ಹಕ್ಕು ಪ್ರಬಲವಾಗಿದ್ದಾಗ ಪ್ರಜಾಪ್ರಭುತ್ವ ಸದೃಢವಾಗಿರಲು ಸಾಧ್ಯ. ಮುಕ್ತ ಚಿಂತನೆ, ಅಭಿಪ್ರಾಯ ಹಂಚಿಕೆಗೆ ಪ್ರಜಾಪ್ರಭುತ್ವದಲ್ಲಿ ಹೆಚ್ಚು ಅವಕಾಶ ಸಿಗಬೇಕು ಎಂದು ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಷನ್‌ನ ಜಿಯೋಪೊಲಿಟಿಕ್ಸ್‌ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳ ವಿಭಾಗ ಪ್ರಾಧ್ಯಾಪಕ ಡಾ. ನಂದಕಿಶೋರ್‌ ಅಭಿಪ್ರಾಯಪಟ್ಟರು.

Vijaya Karnataka 6 Mar 2019, 5:00 am
ತೀರ್ಥಹಳ್ಳಿ : ವೈಯಕ್ತಿಕ ಹಕ್ಕು ಪ್ರಬಲವಾಗಿದ್ದಾಗ ಪ್ರಜಾಪ್ರಭುತ್ವ ಸದೃಢವಾಗಿರಲು ಸಾಧ್ಯ. ಮುಕ್ತ ಚಿಂತನೆ, ಅಭಿಪ್ರಾಯ ಹಂಚಿಕೆಗೆ ಪ್ರಜಾಪ್ರಭುತ್ವದಲ್ಲಿ ಹೆಚ್ಚು ಅವಕಾಶ ಸಿಗಬೇಕು ಎಂದು ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಷನ್‌ನ ಜಿಯೋಪೊಲಿಟಿಕ್ಸ್‌ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳ ವಿಭಾಗ ಪ್ರಾಧ್ಯಾಪಕ ಡಾ. ನಂದಕಿಶೋರ್‌ ಅಭಿಪ್ರಾಯಪಟ್ಟರು.
Vijaya Karnataka Web democracy is strong when personal rights become stronger
ಹಕ್ಕು ಪ್ರಬಲವಾದಾಗ ಪ್ರಜಾಪ್ರಭುತ್ವ ಸದೃಢ


ಪಟ್ಟಣದ ಬಾಳೇಬೈಲು ಸರಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಇತ್ತೀಚೆಗೆ ಐಕ್ಯೂಎಸಿ, ರೆಡ್‌ಕ್ರಾಸ್‌, ಮಾನವ ಹಕ್ಕು ಮತ್ತು ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ ಆಶ್ರಯದಲ್ಲಿ ನಡೆದ 'ಕುಸಿಯುತ್ತಿರುವ ಪ್ರಜಾಪ್ರಭುತ್ವದ ಮೌಲ್ಯಗಳಿಂದಾಗಿಯೇ ಮಾನವಹಕ್ಕುಗಳು ಕ್ಷೀಣಿಸುತ್ತಿವೆ ಎಂಬ ವಿಷಯ ಕುರಿತು ನಡೆದ ಉಪನ್ಯಾಸದಲ್ಲಿ ಅವರು ಮಾತನಾಡಿದರು.

ಆತ್ಮ ಸಾಕ್ಷಿ ಮತ್ತು ಸಂತೋಷ ಪ್ರಜಾಪ್ರಭುತ್ವದ ಸೌಂದರ‍್ಯಗಳಾಗಿವೆ. ಸ್ವಾತಂತ್ರ್ಯ ಹೋರಾಟ ನಡೆದಿದ್ದು ಸ್ವರಾಜ್ಯದ ಪರಿಕಲ್ಪನೆಯಲ್ಲಿಯೇ ಹೊರತು ಪ್ರಜಾಪ್ರಭುತ್ವಕ್ಕಾಗಿ ಅಲ್ಲ. ಕನಸು ಕಾಣುವ ಅವಕಾಶ ಪ್ರಜಾಪ್ರಭುತ್ವದಲ್ಲಿದೆ. ಶ್ರೀಸಾಮಾನ್ಯ ವ್ಯಕ್ತಿ ಪ್ರಜಾಪ್ರಭುತ್ವದಲ್ಲಿ ಉನ್ನತ ಸ್ಥಾನ ತಲುಪಲು ಅವಕಾಶವಿದೆ. ಜವಾಬ್ದಾರಿಯಿಂದ ವರ್ತಿಸಿದರೆ ಮಾನವಹಕ್ಕುಗಳನ್ನು ರಕ್ಷಿಸಬಹುದಾಗಿದೆ. ಬಹು ಸಂಸ್ಕೃತಿಯುಳ್ಳ ಭಾರತದಲ್ಲಿ ಪ್ರಜಾಪ್ರಭುತ್ವ ಸಮಸ್ಯೆ ಆಗಿಲ್ಲ ಎಂದು ಹೇಳಿದರು.

ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೂಳೂರು ಸತ್ಯನಾರಾಯಣರಾವ್‌ ಸಮಾರಂಭ ಉದ್ಘಾಟಿಸಿದರು. ಪ್ರಾಚಾರ‍್ಯ ಡಾ.ಬಿ.ಎಂ.ಜಯಶೀಲ ಅಧ್ಯಕ್ಷತೆ ವಹಿಸಿದ್ದರು. ವೈಷ್ಣವಿ ಪ್ರಾರ್ಥಿಸಿ, ಡಾ.ಎ.ಸಿ.ನಾಗೇಶ್‌ ಸ್ವಾಗತಿಸಿ , ಪ್ರೊ.ಶಿವರಾಜ್‌ ವಂದಿಸಿ, ಪ್ರೊ.ಎಚ್‌.ಡಿ. ಧರ್ಮಣ್ಣ ನಿರೂಪಿಸಿದರು.

---------
ಮಹಿಳೆ ಹಕ್ಕುಗಳ ಕುರಿತು ಅರಿತುಕೊಳ್ಳಬೇಕೆ ಹೊರತು ಪುರುಷ ಹಕ್ಕುಗಳನ್ನು ಕೊಡುವುದಲ್ಲ. ಮಾನವ ಹಕ್ಕುಗಳ ರಕ್ಷಣೆಗೆ ಯಾವುದೇ ಕಮಿಷನ್‌ ಕೊಡಬೇಕಿಲ್ಲ. ಭಾರತದ ಪ್ರಜಾಪ್ರಭುತ್ವ ಬೇರೆ ದೇಶಗಳಿಗೆ ಮಾದರಿ ಆಗಿದೆ.

- ಡಾ.ನಂದಕಿಶೋರ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ